
*ದೊಡ್ಡಬಳ್ಳಾಪುರ ಮೇ 03 ( ವಿಜಯಮಿತ್ರ )* : ವಿಶ್ವಜ್ಞಾನಿ, ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಮಹಾನಾಯಕ ಡಾಕ್ಟರ್ ಅಂಬೇಡ್ಕರ್ ರವರು ಹಗಲಿರುಳು ಶ್ರಮವಹಿಸಿ ರಚಿಸಿರುವ ಈ ದೇಶದ ಸಂವಿಧಾನಕ್ಕೆ ಬಿಕ್ಕಟ್ಟಿನ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ 104 ತಿದ್ದುಪಡಿಗಳಾಗಿರುವ ನಮ್ಮ ಬೃಹತ್ ಸಂವಿಧಾನ ಮುಂದಿನ ದಿನಗಳಲ್ಲಿ ತೆರೆಮರೆಗೆ ಸರಿಸುವ ಹುನ್ನಾರವನ್ನು ನಮ್ಮನ್ನ ಆಳುವ ಸರ್ಕಾರಗಳು ನಿರಂತರವಾಗಿ ಮಾಡುತ್ತಾ ಬಂದಿವೆ. ಎಂದು ದೊಡ್ಡಬಳ್ಳಾಪುರ ತಾಲ್ಲೂಕು ಛಲವಾದಿ ಮಹಾಸಭಾ ಅಧ್ಯಕ್ಷರಾದ ಗುರುರಾಜಪ್ಪ ನವರು ಅಭಿಪ್ರಾಯಪಟ್ಟರು.
ಅವರು ಮೇ ದಿನಾಂಕ 1ರಂದು ಕಾರ್ಮಿಕ ದಿನಾಚರಣೆ ಮತ್ತು ಡಾಕ್ಟರ್ ಬಾಬಾ ಸಾಹೇಬರ 133ನೇ ಜಯಂತಿ ಹಾಗೂ ಭೀಮೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ದೇಶದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಬಹುಸಂಖ್ಯಾತ ಸಮುದಾಯದವರು ಸಂವಿಧಾನದ ಮಹತ್ವವನ್ನು ಅರ್ಥಮಾಡಿಕೊಂಡು, ಸಂವಿಧಾನದಲ್ಲಿ ಅಡಕವಾಗಿರುವ ಮಹತ್ವವಾದ ಅಂಶಗಳನ್ನು ಯಥಾವತ್ತಾಗಿ ಜಾರಿ ಮಾಡಲು ಪ್ರತಿಭಟನೆಯ ಮೂಲಕ ನಮ್ಮನ್ನಆಳುವ ಸರ್ಕಾರಗಳಿಗೆ ಹೋರಾಟದ ಮೂಲಕ ಒತ್ತಾಯವನ್ನು ಹಾಕದೇ ಕಾಲಹರಣ ಮಾಡಿದಲ್ಲಿ ಮುಂದಿನ ನಮ್ಮೆಲ್ಲರ ಬದುಕು ಸುಗಮವಾಗುವುದಿಲ್ಲ ಎಂದು ಕಿವಿ ಮಾತು ಹೇಳಿದರು.
ಇನ್ಸ್ಪೆಕ್ಟರ್ ಮಂಜುನಾಥ್ ರವರು ಮಾತನಾಡಿ ಈ ಶ್ರೀಣಿಕೃತ ಸಮಾಜ ನಮ್ಮಂತಹ ಶುದ್ರ ಸಮುದಾಯಗಳನ್ನು ಭ್ರಹ್ಮಣಿಕೆ ನಿಯಂತ್ರಿಸುತ್ತಿದೆ. ಈ ನಿಯಂತ್ರಣದಿಂದ ಹೊರಗೆ ಬಂದು ಸಮ ಸಮಾಜದ ಕಡೆಗೆ ಸಾಗುವಂತೆ ಮಾಡುವ ಅನಿವಾರ್ಯತೆ ಇದೆ ಎಂದರು. ಕಾರ್ಯಕ್ರಮ ದಲ್ಲಿ ಇವರ ಶ್ರೀಮತಿಯವರಾದ ಲೋಕಯುಕ್ತ ಡಿ ವೈ ಎಸ್ ಪಿ ಯಾವರೂ ಸಹಾ ಇದ್ದರು.
ಭಾರತೀಯ ಮುಲನಿವಾಸಿ ಒಕ್ಕೂಟದ ಮುಖ್ಯಸ್ಥರು, ಭಗವಾನ್ ಬುದ್ಧರ ಉಪಾಸಕರಾದ ಕುಂದಾಣದ ಸಿದ್ಧಾರ್ಥ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಾನ್ ಬುದ್ಧರ ಚಿಂತನೆಗಳನ್ನು ನಮ್ಮಗಳ ಜೀವನದಲ್ಲಿ ಅಳವಡಿಸಿಕೊಳ್ಳದೇ ಇದ್ದರೆ ಬದುಕು ಸಾರ್ಥಕವಾಗುವುದಿಲ್ಲ ಮತ್ತು ಧಮ್ಮ ಸಿಗುವುದಿಲ್ಲ. ಧಮ್ಮ ಅಂದರೆ ಸತ್ಯ, ಪ್ರೀತಿ, ಜ್ಞಾನ, ಬದುಕು ಪ್ರಾಮಾಣಿಕವಾದ ಜೀವನ ಎಂದರ್ಥ. ಭಗವಾನ್ ಬುದ್ಧರ ಅಷ್ಟಂಗ ಮಾರ್ಗಗಳು ನಮ್ಮ ಬದುಕಿನ ಗುರಿಯಗಬೇಕು ಎಂದು ಪ್ರತಿಪಾದಿಸಿದರು.
ಸಂಜೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಕೂರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯ್ತು.
ಈ ಕಾರ್ಯಕ್ರಮದಲ್ಲಿ ನಾರಾಯಣಸ್ವಾಮಿರವರು ಮಾತನಾಡಿದರು. ಛಲವಾದಿ ಮಹಾಸಭಾದ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಯಾದ ಡಿ ಎನ್ ಎಲ್ ಎನ್ ಮೂರ್ತಿ,ಮಾಳವ ನಾರಾಯಣ್ ಹಣಬೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್, ಮುನೇಗೌಡ, ವೆಂಕಟೇಶ್ ಮೂರ್ತಿ, ಹಾಗೂ ಜಗಧೀಶ್, ಗಂಗಪ್ಪ, ಮುನಿಯಪ್ಪ, ರಮೇಶ್ ಊರಿನ ಪ್ರಮುಖರು ಉಪಸ್ಥಿತರಿದ್ದರು.