
ದೊಡ್ಡಬಳ್ಳಾಪುರ : ನಗರದ ಹಳೇಯ ಶಾಲೆಗಳಲ್ಲಿ ಒಂದಾದ ನಿವೇದಿತಾ ಇಂಗ್ಲಿಷ್ ಶಾಲೆಯ SSLC ವಿದ್ಯಾರ್ಥಿಗಳು ಶೇಕಡಾ 100 ರಷ್ಟು ಫಲಿತಾಂಶವನ್ನು ಪಡೆಯುವ ಮೂಲಕ ಶಾಲೆಗೆ ಗೌರವ ತಂದುಕೊಟ್ಟಿದ್ದಾರೆ.SSLC ಪರೀಕ್ಷೆ ಬರೆದಿದ್ದ 35 ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದು ಶಾಲಾ ಆಡಳಿತ ಮಂಡಳಿಯ ಖುಷಿಗೆ ಕಾರಣವಾಗಿದೆ ಎಂದು ಶಾಲೆಯ ಕಾರ್ಯದರ್ಶಿ ಜಿ ರಾಜಣ್ಣ ತಿಳಿಸಿದರು.
ಇದೇ ವೇಳೆ ವಿದ್ಯಾರ್ಥಿಗಳನ್ನು ಶಿಕ್ಷಕರು ಮತ್ತು ಆಡಳಿತ ವರ್ಗ ಅಭಿನಂದಿಸಿದರು.
2023-24ನೇ ಸಾಲಿನಲ್ಲಿ ನಿವೇದಿತಾ ಇಂಗ್ಲಿಷ್ ಶಾಲೆಯ 35 ವಿದ್ಯಾರ್ಥಿಗಳು SSLC ಪರೀಕ್ಷೆಯನ್ನ ಬರೆದಿದ್ದು, ಎಲ್ಲಾ 35 ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಉರ್ತಿರ್ಣರಾಗಿದ್ದಾರೆ, 5 ವಿದ್ಯಾರ್ಥಿಗಳು ಉನ್ನತ ಶ್ರೇಣಿಗಳಿಸಿದ್ದು , 23 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಹಾಗೂ 7 ದ್ವಿತೀಯ ದರ್ಜೆಯಲ್ಲಿ ಉರ್ತಿರ್ಣರಾಗಿದ್ದಾರೆ,
*ಅಂಜಲಿ ಸಿರ್ವಿ* ಶಾಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ, ಸಿಮ್ರಾನ್ ಕುಮಾರಿ ಧಾಪ ದ್ವಿತೀಯ ಸ್ಥಾನ, ನಿಖಿಲ್ ರಾಜ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ ಎಂದು ಶಾಲಾ ಮೂಲಗಳು ತಿಳಿಸಿವೆ.
ಪರೀಕ್ಷೆಯಲ್ಲಿ ಉನ್ನತ್ತ ದರ್ಜೆಯಲ್ಲಿ ಪಾಸಾದ ನಿಖಿಲ್ ರಾಜ್ ಮಾತನಾಡಿ SSLC ಗೆ ಬರುವ ಮುನ್ನ ನನಗೆ ಓದಿನಲ್ಲಿ ಹಿಡಿತ ಇರಲಿಲ್ಲ, ಅಧ್ಯಯನ ಸರಿಯಾಗಿ ಮಾಡುತ್ತಿರಲಿಲ್ಲ, 10 ನೇ ತರಗತಿಗೆ ಬಂದ ನಂತರ ಶಿಕ್ಷಕರ ಪ್ರೋತ್ಸಾಹದಿಂದ ಓದಿನಲ್ಲಿ ಆಸಕ್ತಿ ಹೆಚ್ಚಾಗಿದು, ಪ್ರತಿದಿನ ಅಧ್ಯಯನ ಮಾಡುತ್ತಿದೆ, ಶಿಕ್ಷಕರ ಮಾರ್ಗದರ್ಶನ ಮತ್ತು ಸಲಹೆಯಿಂದ ಗರಿಷ್ಠ ಅಂಕಗಳಿಸಲು ಸಹಕಾರಿಯಾಗಿದೆ, ನಾನು ನಿರೀಕ್ಷೆ ಮಾಡದಷ್ಟೇ ಅಂಕಗಳು ಬಂದಿರೋದು ನನಗೆ ಖುಷಿ ತಂದಿದೆ ಎಂದರು.
ಉನ್ನತ ದರ್ಜೆಯಲ್ಲಿ ಪಾಸಾದ ತೇಜಸ್ವಿನಿ ಎಸ್ ಗೌಡ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ನಮಗೆ ತುಂಬಾ ಪ್ರೋತ್ಸಹ ನೀಡಿದ್ದು ಶಾಲೆಯ ಪ್ರಾಂಶುಪಾಲರ ಮಾರ್ಗದರ್ಶನವೂ ಕೂಡ ನಾವು ಉತ್ತಮ ಅಂಕಗಳಿಸಲು ಸಹಕಾರಿಯಾಗಿತು, 10 ನೇ ತರಗತಿಗೆ ಬರುವ ಮುನ್ನ ನಾವು ಪರೀಕ್ಷೆ ಬರೆಯಲು ಕಂಠ ಪಾಠ ಮಾಡುತ್ತಿದ್ದೆವು, ಆದರೆ 10ನೇ ತರಗತಿಯಲ್ಲಿ ಪಾಠಗಳನ್ನ ಅರ್ಥ ಮಾಡಿಕೊಳ್ಳಲು ಪ್ರಾರಂಭಿಸಿದ ಪರಿಣಾಮ ಇದು ಉತ್ತಮ ಅಂಕಗಳಿಸಲು ಸಹಕಾರಿಯಾಗಿದೆ, ಶಿಕ್ಷಕರು ನಮ್ಮ ಜೊತೆ ಸ್ನೇಹಿತರಂತೆ ಇದ್ದು ಕಲಿಕೆ ಮತ್ತು ಅಧ್ಯಯನಕ್ಕೆ ಸಹಾಯ ಮಾಡಿದ ಕಾರಣ ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದರು.
ನಿವೇದಿತಾ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಜಿ.ರಾಜಣ್ಣ ಮಾತನಾಡಿ ನಮ್ಮ ಶಾಲೆ ಶೇಕಡಾ 100 ರಷ್ಟು ಫಲಿತಾಂಶ ಪಡೆಯಲು ಶಿಕ್ಷಕರ ಶ್ರಮ ಇದೆ, ಇದರಿಂದ ಶಾಲೆಗೆ ಉತ್ತಮ ಹೆಸರು ಬಂದಿದೆ, ನಮ್ಮ ಶಾಲೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಡವರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು , ಬಡ ಮಕ್ಕಳಿಗೆ ನಾವು ಕಡಿಮೆ ಶಾಲಾ ಶುಲ್ಕವನ್ನ ತೆಗೆದು ಕೊಳ್ಳುವ ಮೂಲಕ ಪೋಷಕರ ಆರ್ಥಿಕ ಹೊರೆಯನ್ನ ಕಡಿಮೆ ಮಾಡಿದ್ದೇವೆ, ಇದರಿಂದ ಪೋಷಕರು ಸಹ ನಮ್ಮ ಶಾಲೆಗೆ ಬಗ್ಗೆ ಅಭಿಮಾನ ಇಟ್ಟುಕೊಂಡಿದ್ದಾರೆ ಎಂದರು.
ನಿವೇದಿತಾ ಏಜುಕೇಷನ್ ಸೊಸೈಟಿಯ ನಿರ್ದೇಶಕರಾದ ಸಂತೋಷ ಮಾತನಾಡಿ ಶೇಕಡಾ 100 ರಷ್ಟು ಫಲಿತಾಂಶ ಬರಲು ಶಿಕ್ಷಕರು, ಶಾಲಾ ಆಡಳಿತ ಮತ್ತು ಮಕ್ಕಳ ಶ್ರಮ ಇದೆ, ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುವೆ, ಅವರು ಮುಂದಿನ ಭವಿಷ್ಯ ಉತ್ತಮವಾಗಿರಲಿ ಎಂದು ಹಾರೈಸುವೆ, ಮಕ್ಕಳು ಯಾವುದೇ ಒತ್ತಡ ಇಲ್ಲದೆ ಖುಷಿಯಿಂದ ಕಲಿಯುತ್ತಿದ್ದರು, ಇದರಿಂದ ಕಲಿತ ಪಾಠಗಳು ಮಕ್ಕಳನ ನೆನಪಿನಲ್ಲಿ ಉಳಿದಿದೆ, ಇದರಿಂದಾಗಿ ಉತ್ತಮ ಫಲಿತಾಂಶ ಬಂದಿದೆ ಎಂದರು
ಶಾಲೆಯ ಪ್ರಾಂಶುಪಾಲರಾದ ಪುರುಷೋತ್ತಮ್ ಮಾತನಾಡಿ 2023-24 ಸಾಲಿನ ಮಕ್ಕಳು ಶೇಕಡಾ 100 ರಷ್ಟು ಫಲಿತಾಂಶವನ್ನ ತಂದಿರುವುದು ನನಗೆ ಖುಷಿ ಕೊಟ್ಟಿದೆ, ಇತರೆ ಶಾಲೆಗಳಲ್ಲಿ ರಿಜೆಕ್ಟ್ ಮಾಡಲಾದ ಮಕ್ಕಳನ್ನು ನಮ್ಮ ಶಾಲೆಗೆ ದಾಖಲು ಮಾಡಿಕೊಳ್ಳುತ್ತೇವೆ , ಅಂತಹ ಮಕ್ಕಳನ್ನು ಪರೀಕ್ಷೆಗೆ ಸಿದ್ದಪಡಿಸುವ ಸವಾಲು ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಇದ್ದು , ಅಂತಹ ಸವಾಲನ್ನು ಮೆಟ್ಟಿ ನಿಂತು ಇವತ್ತು ಇಂತಹ ಸಾಧನೆಯನ್ನ ಮಾಡಿದ್ದೇವೆ ಎಂದರು.
ಈ ವೇಳೆ ಮುಖ್ಯ ಶಿಕ್ಷಕರಾದ ಧನಲಕ್ಷ್ಮೀ, ಆಶಾ ಸಂತೋಷ್, ಸಹ ಶಿಕ್ಷಕರಾದ ವಿಜಯ್ ಕುಮಾರ .ಹೆಚ್.ಪಿ, ಲತಾ.ಸಿ.ಎಸ್, ನೇತ್ರಾವತಿ, ಮಂಜುನಾಥ್, ಹರೀಶ್ ಕುಮಾರ್, ಲಕ್ಷ್ಮೀ, ಮಾನಸ ಸೇರಿದಂತೆ ಶಾಲಾ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.