
ದೊಡ್ಡಬಳ್ಳಾಪುರ : ನಗರದ ಹೊರವಲಯ ಹಿಂದೂಪುರ – ಯಲಹಂಕ ಮಾರ್ಗದಲ್ಲಿ ನವೋದಯ ಶಾಲೆಯ ಸಮೀಪ ಯುವಕನ ಶವ ಪತ್ತೆಯಾಗಿದ್ದು. ತಡರಾತ್ರಿ ಜೆಪಿ ಬಾರ್ ಸಮೀಪ ಹೂಸ್ಕೂರ್ ಗ್ರಾಮದ 27 ವರ್ಷದ ಹೇಮಂತ್ ಗೌಡ ಮೇಲೆ ಮಚ್ಚುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ.
ನಗರದ ಹೊರವಲಯ ಬಾಶೆಟ್ಟಿಹಳ್ಳಿ ಬಳಿಯ ಜೆಪಿ ಬಾರ್ ನಲ್ಲಿ ರಾತ್ರಿ ಸುಮಾರು 12 ಗಂಟೆ ಸಮಯದಲ್ಲಿ ಗ್ಯಾಂಗ್ ಒಂದು ಯುವಕನ ಮೇಲೆ ಲಾಂಗ್ ಮಚ್ಚುಗಳಿಂದ ಹಲ್ಲೆ ನಡೆಸಿದೆ, ಹಲ್ಲೆಗೊಳದ ಯುವಕ ಅಧಿಕ ರಕ್ತಸ್ರಾವದಿಂದ ಸಾವನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಹಲ್ಲೆಯ ಮಾಹಿತಿ ದೊರೆತ ಕುಟುಂಬಸ್ಥರು ಇಡೀ ರಾತ್ರಿ ಆತನಿಗಾಗಿ ಹುಡುಕಾಟ ನಡೆಸಿದ್ದಾರೆ, ಮುಂಜಾನೆ 4 ಗಂಟೆ ಸಮಯದಲ್ಲಿ ಹಲ್ಲೆಗೊಳದ ಯುವಕನ ದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ,
ಕೊಲೆಯಾದ ಯುವಕ ಹೇಮಂತ್ ಗೌಡ. ರಿಯಲ್ ಎಸ್ಟೇಟ್, ಸೆಕ್ಯೂರಿಟಿ ಎಜೆನ್ಸಿ ನಡೆಸುತ್ತಿದ್ದು ಆತನ ಮೇಲೆ ಸ್ನೇಹಿತ ನರಸಿಂಹಮೂರ್ತಿ ಅಲಿಯಾಸ್ ಸಂತು ಅಲಿಯಾಸ್ ಮಿಟ್ಟೆ ಎಂಬ ಸ್ನೇಹಿತನೇಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ .
*ಘಟನೆ ಕುರಿತು ಮಾಹಿತಿ*
ಶುಕ್ರವಾರ ರಾತ್ರಿ ಆರೋಪಿ ನರಸಿಂಹಮೂರ್ತಿ ಹೇಮಂತ್ ಗೌಡನಿಗೆ ಪೋನ್ ಮಾಡಿ ಮಾತನಾಡಬೇಕೆಂದು ಜೆಪಿ ಬಾರ್ ಬಳಿ ಕರೆಸಿಕೊಂಡಿದ್ದ, ಬಾರ್ ಹೊರಭಾಗದಲ್ಲಿ ನರಸಿಂಹಮೂರ್ತಿ ಜೊತೆ ಇದ್ದ 15 ಜನರ ಗ್ಯಾಂಗ್ ಹೇಮಂತ್ ಗೌಡನ ಮೇಲೆ ಲಾಂಗ್ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ, ಲಾಂಗ್ ಮಚ್ಚು ನೋಡಿದ ಹೇಮಂತ್ ಗೌಡನ ಸ್ನೇಹಿತರು ಅಲ್ಲಿಂದ ಪರಾರಿಯಾಗಿದ್ದಾರೆ. ತಕ್ಷಣ ಹಲ್ಲೆ ಮಾಡಿರುವ ವಿಷಯ ಹೇಮಂತ್ ಗೌಡನ ಮನೆಯವರಿಗೆ ತಿಳಿಸಿದ್ದಾರೆ, ತಕ್ಷಣವೇ ಹೇಮಂತ್ ಗೌಡನ ತಂದೆ ಶಶಿಕುಮಾರ್ ಮತ್ತು ಸಂಬಂಧಿಕರು ಬಾರ್ ಬಳಿ ಬಂದಿದ್ದಾರೆ, ಸ್ಥಳದಲ್ಲಿ ಹೇಮಂತ್ ಗೌಡನ ಪತ್ತೆ ಇಲ್ಲ, ಸ್ಥಳದಲ್ಲಿ ಚೆಲ್ಲಿದ ರಕ್ತ ಮತ್ತು ಲಾಂಗ್ ನೋಡಿ ಗಾಬರಿಗೊಂಡ ಕುಟುಂಬಸ್ಥರು ಆತನ ಪತ್ತೆಗಾಗಿ ಆಸ್ಪತ್ರೆ ಸೇರಿದಂತೆ ಹಲವು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದಾರೆ, ನರಸಿಂಹಮೂರ್ತಿಯ ಮನೆಯ ಬಳಿ ಹೋಗಿ ನೋಡಿದ್ದಾರೆ, ಆದರೆ ಯಾರ ಸುಳಿವು ಸಿಕ್ಕಿಲ್ಲ, 4 ಗಂಟೆ ಸಮಯದಲ್ಲಿ ನವೋದಯ ಶಾಲೆ ಬಳಿ ಶವ ಸಿಕ್ಕಿರುವ ಮಾಹಿತಿ ಸಿಕ್ಕಿದ್ದು, ಸ್ಥಳಕ್ಕೆ ಹೋಗಿ ನೋಡಿದ್ದಾಗ ಹೇಮಂತ್ ಗೌಡನ ಶವವಾಗಿರುತ್ತದೆ.
ಅಂದಹಾಗೇ ಆರೋಪಿ ನರಸಿಂಹಮೂರ್ತಿಯ ಮೇಲೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಇದೆ, ಇಸ್ಪೇಟ್ ದಂಧೆ ನಡೆಸುವ ದೊಡ್ಡ ಜೂಜುಕೊರನಾಗಿದ್ದ, ಅತನ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಕಾರಣಕ್ಕೆ ಪೊಲೀಸರು ರೌಡಿಶೀಟರ್ ಹಾಕಿದ್ರು, ಪೊಲೀಸ್ ಮಾಹಿತಿ ಪ್ರಕಾರ ಇಬ್ಬರು ಸ್ನೇಹಿತರಾಗಿದ್ದು, ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪವಾಗಿದೆ, ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಕೊಲೆ ನಡೆದಿರಬಹುದು, ಹಲ್ಲೆ ನಡೆದ ನಂತರ ಹೇಮಂತ್ ಗೌಡನನ್ನ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ, ಆತ ಬದುಕುಳಿಯುತ್ತಿದ್ದ, ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವನನ್ನು ಟೆಂಪೋದಲ್ಲಿ ಹಾಕೊಂಡ್ ಸುತ್ತಾಡಿದ್ದಾರೆ, ಈ ವೇಳೆ ಅಧಿಕ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ, ಅನಂತರ ಶವವನ್ನ ಎಸೆದು ಪರಾರಿಯಾಗಿದ್ದಾರೆ, ಆರೋಪಿಗಳು ಸಿಕ್ಕ ನಂತರ ಕೊಲೆಯ ಅಸಲಿ ಕಾರಣ ಗೊತ್ತಾಗಲಿದೆ ಎಂದರು. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಮೃತನ ತಂದೆ ದೂರು ನೀಡಿದ್ದಾರೆ.