
ದೊಡ್ಡಬಳ್ಳಾಪುರ : ಪಕ್ಷಬೇಧವಿಲ್ಲದೆ, ಜಾತಿ ಭೇದವಿಲ್ಲದೆ ಭಕ್ತಿ ಭಾವದಿಂದ ಎಲ್ಲರನ್ನು ಒಟ್ಟಾಗಿ ಸೇರಿಸುವ ಜಾತ್ರಾ ಮಹೋತ್ಸವಗಳು ನಮ್ಮಲ್ಲಿ ನೋಡಬಹುದಾಗಿದೆ. ಕಾರ್ಯಕ್ರಮದ ಆಯೋಜಕರಿಗೆ ಹಾಗೂ ಬಡಾವಣೆಯ ನಿವಾಸಿಗಳಿಗೆ ಶುಭವಾಗಲಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಹಾರೈಸಿದರು
ನಗರದ ಒಂದನೇ ವಾರ್ಡ್ ಮೊದಲನೇ ಹಂತ ರಾಜೀವ್ ಗಾಂಧಿ ಬಡಾವಣೆ ಯ 15 ನೇ ವರ್ಷದ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಪಂಚ ದೇವತೆಯರಾದ ಶ್ರೀ ಮುತ್ಯಾಲಮ್ಮ ದೇವಿ, ಶ್ರೀ ಅಣ್ಣಮ್ಮ ದೇವಿ,ಶ್ರೀ ಸಾವಿರಕಣ್ಣಮ್ಮದೇವಿ, ಶ್ರೀ ಸತ್ಯಮ್ಮದೇವಿ, ಶ್ರೀ ದೊಡ್ಡಮ್ಮದೇವಿ ಸೇರಿದಂತೆ ಎಲ್ಲಾ ದೇವತೆಯರ ಆಶೀರ್ವಾದ ಬಡಾವಣೆಯ ಎಲ್ಲಾ ನಿವಾಸಿಗಳಿಗೆ ಲಭಿಸಲಿ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿದ್ದು ಬಡಾವಣೆಯ ಪ್ರತಿ ಮನೆಯಲ್ಲೂ ಸಂಭ್ರಮಾ ಸಡಗರ ಮನೆ ಮಾಡಿದೆ. ಇಂತಹ ಕಾರ್ಯಕ್ರಮಗಳ ಪ್ರಮುಖ ಉದ್ದೇಶವೇ ಸಾರ್ವಜನಿಕರಲ್ಲಿ ಒಗ್ಗಟ್ಟು ಮೂಡಿಸುವುದು. ಸ್ಥಳೀಯ ನಿವಾಸಿಗಳ ಒಗ್ಗಟ್ಟು ಈ ಕಾರ್ಯಕ್ರಮದ ಮೂಲಕ ಮತ್ತಷ್ಟು ಹೆಚ್ಚಿದೆ ಎಂದು ಭಾವಿಸುತ್ತೇನೆ. ಎಲ್ಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಜಾತ್ರಾ ಮಹೋತ್ಸವದ ವಿಶೇಷ ಕಾರ್ಯಕ್ರಮವಾಗಿ ಶ್ರೀ ರಾಮ್ ಮೆಲೋಡೀಸ್ ತಂಡದವರಿಂದ ವಾದ್ಯ ಗೋಷ್ಠಿ ಆಯೋಜನೆ ಮಾಡಲಾಗಿತ್ತು.
ಸ್ಥಳೀಯ ಜೆಡಿಎಸ್ ಮುಖಂಡ ಪ್ರವೀಣ್ ಮಾತನಾಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ಮೂಡಿಸಿದೆ. ಸ್ಥಳೀಯವಾಗಿ ಅನೇಕ ಸಮಸ್ಯೆಗಳಿದ್ದು ಮುಂದಿನ ದಿನಗಳಲ್ಲಿ ಸ್ಥಳೀಯರ( ವಾರ್ಡ್ ಜನಗಳ ) ನಡುವೆ ಬೆರೆಯುವ ಮೂಲಕ ಜನ ಸೇವೆಯಲ್ಲಿ ಸದಾ ಸಕ್ರಿಯವಾಗಿರುತ್ತೇನೆ. ಜಾತ್ರಾ ಮಹೋತ್ಸವವನ್ನು ಸ್ಥಳೀಯ ವಾರ್ಡ್ ನ ಜನತೆ ಅತ್ಯಂತ ಸಂತಸ ಸಡಗರದಿಂದ ಆಚರಿಸುತ್ತಿದ್ದು ದೇವಿಯರ ಆಶೀರ್ವಾದ ಸರ್ವರಿಗೂ ಲಭಿಸಲಿ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರುಗಳಾದ ಪ್ರಭಾಕರ್, ಗೌರೀಶ್, ಮಹೇಶ್, ಮುರಳಿ,ಕೇಶವ್ ಮೂರ್ತಿ, ಉಪಸ್ಥಿತರಿದ್ದರು .