
ದೊಡ್ಡಬಳ್ಳಾಪುರ: 78ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪುರುಷರ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗಳನ್ನು ತಾಲೂಕಿನ ಮುತ್ತೂರು ಗ್ರಾಮದಲ್ಲಿ ಆಯೋಜನೆ ಮಾಡಲಾಗಿದೆ.
ಬಿಎಸ್ಎಲ್ ಕಬ್ಬಡಿ ಕ್ಲಬ್ ಮುತ್ತೂರು ಗ್ರಾಮಸ್ಥರ ವತಿಯಿಂದ ಆಗಸ್ಟ್ 14 ಮತ್ತು 15ರಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ಎಸ್ ಹರೀಶ್ ಗೌಡ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಬಿಎಸ್ಎಲ್ ಕಬಡ್ಡಿ ಕ್ಲಬ್ ತಿಳಿಸಿದೆ.
ಸ್ವಾತಂತ್ರ್ಯ ದಿನಾಚರಣೆಯು ಸಂಭ್ರಮಾಚರಣೆಯ ದಿನವಾಗಿದ್ದು. ಯುವಕರಲ್ಲಿ ಕ್ರೀಡೋತ್ಸಾಹ ಹೆಚ್ಚಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ರೂಪಿಸಲಾಗಿದೆ. ಇಂದಿನ ಯುವಪೀಳಿಗೆ ಕೇವಲ ಮೊಬೈಲ್ ಪ್ರಪಂಚಕ್ಕೆ ಅಂಟಿಕೊಂಡಿದ್ದು ಸಮಾಜದಲ್ಲಿ ಬೆರೆಯುವುದೇ ಕಷ್ಟಕರ ವಿಷಯವಾಗಿದೆ. ಇಂತಹ ಕ್ರೀಡೆಗಳು ಸಮಾಜದಲ್ಲಿ ಯುವಕರು ಎಲ್ಲರೂ ಒಟ್ಟಿಗೆ ಸಹ ಬಾಳ್ವೆಯಿಂದ ಜೀವಿಸಲು ಸಹಕಾರಿಯಾಗಿವೆ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಕಾರ್ಯಕ್ರಮವು ಇಂದು ಸಂಜೆ 4 ಗಂಟೆಗೆ ಉದ್ಘಾಟನೆಗೊಳ್ಳಲಿದ್ದು ಕಾರ್ಯಕ್ರಮಕ್ಕೆ ತಾಲೂಕಿನ ಹಲವು ಮುಖಂಡರು ಭಾಗವಹಿಸಲಿದ್ದಾರೆ. ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಗೆ ಸಾಕಷ್ಟು ತಂಡಗಳು ಈಗಾಗಲೇ ಹೆಸರನ್ನು ನೋಂದಾಯಿಸಿಕೊಂಡಿದ್ದು. ಸ್ಥಳೀಯರ ಉತ್ತಮ ಪ್ರೋತ್ಸಾಹದಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದು ಜೆಡಿಎಸ್ ಮುಖಂಡ ಪ್ರವೀಣ್ ಶಾಂತಿನಗರ ತಿಳಿಸಿದ್ದಾರೆ.