
ದೊಡ್ಡಬಳ್ಳಾಪುರ : ನಗರದ ತೇರಿನಬೀದಿಯ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು 13-02-2025ನೇ ಗುರುವಾರ ಮಧ್ಯಾಹ್ನ 12.00 ಗಂಟೆಗೆ ನೆಡೆಯಲಿದೆ.
ಹೌದು ಶ್ರೀ ಕ್ರೋಧಿನಾಮ ಸಂವತ್ಸರದ ಮಾಘ ಮಾಸದ ಬಹುಳ ಪ್ರತಿಪತ್ ಮಖಾ ನಕ್ಷತ್ರದ ತಾ॥ 13-02-2025ನೇ ಗುರುವಾರ ಮಧ್ಯಾಹ್ನ 12.00 ಗಂಟೆಯ ಮೇಲೆ ಸಲ್ಲುವ ಶುಭ ಅಭಿಜನ್ ಮುಹೂರ್ತದಲ್ಲಿ ಶ್ರೀಯವರ “ಬ್ರಹ್ಮರಥೋತ್ಸವೆ” ವು ಬಹಳ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.
ತಾ।। 13-02-2025ನೇ ಗುರುವಾರದ ಬ್ರಹ್ಮರಥೋತ್ಸವ ಮತ್ತು ತಾ।। 14-02-2025ನೇ ಶುಕ್ರವಾರ ನೆಡೆಯುವ ಪರಿಷೆಗೆ ತಾಲ್ಲೂಕಿನ ಭಕ್ತ ಮಹಾಶಯರೆಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ಯವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕೋರಲಾಗಿದೆ.