
ದೊಡ್ಡಬಳ್ಳಾಪುರ : ನನ್ನ ಹುಟ್ಟು ಹಬ್ಬವನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಸಂತಸತಂದಿದೆ ಎಂದು ಅನ್ನ ದಾಸೋಹ ದಾನಿಗಳಾಗಿ ಸಹಾಯಹಸ್ತ ನೀಡಿದ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ತಿಳಿಸಿದರು.
ನಿರಂತರ ಅನ್ನ ದಾಸೋಹ ಸಮಿತಿಯ 1944 ನೇ ದಿನದ ಅನ್ನ ದಾಸೋಹ ಭಾಗವಹಿಸಿ ಮಾತನಾಡಿದರು, ಹಸಿದ ಹೊಟ್ಟೆ ಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಇಂದು ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡಿದ್ದೇನೆ, ಇದೊಂದು ಅರ್ಥಪೂರ್ಣ ಸಂಭ್ರಮಾಚರಣೆ ಎಂಬುದು ನನ್ನ ಭಾವನೆ, ದಾನ ಮಾಡುವ ಮನಸ್ಸುಳ್ಳ ಎಲ್ಲರೂ ನಿರಂತರ ಅನ್ನ ದಾಸೋಹ ಸಮಿತಿಯೊಟ್ಟಿಗೆ ಕೈಜೋಡಿಸುವ ಮೂಲಕ ತಮ್ಮ ವಿಶೇಷ ದಿನಗಳನ್ನು ಆಚರಿಸಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ದಾನಿಗಳ ನೆರವಿಂದ ನಡೆಯುತ್ತಿರುವ ಈ ಅನ್ನದಾಸೋಹ ಕಾರ್ಯಕ್ರಮವು ನಿತ್ಯ ನಿರಂತರ ಸಾಗುತ್ತಿದೆ. ದಿನೇ ದಿನೇ ಇಲ್ಲಿಗೆ ಬರುವ ನಿರಾಶ್ರಿತರು ಹೆಚ್ಚಾಗುತ್ತಿದ್ದಾರೆ, ದಾನಿಗಳ ಅವಶ್ಯಕತೆ ಹೆಚ್ಚಾಗಿದೆ ದಾನ ಮಾಡಲು ಇಚ್ಚಿಸುವ ಎಲ್ಲ ಮನಸ್ಸುಗಳಿಗೆ ನಮ್ಮ ಈ ಸೇವೆ ಉತ್ತಮ ವೇದಿಕೆಯಾಗಲಿದೆ ಬನ್ನಿ ನಮ್ಮೊಂದಿಗೆ ಭಾಗವಹಿಸಿ ಹಸಿದ ಹೊಟ್ಟೆ ಗಳಿಗೆ ಆಹಾರ ವಿತರಣೆ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅನ್ನ ದಾಸೋಹ ಸಮಿತಿಯ ಸದಸ್ಯರು, ಸ್ಥಳೀಯ ಮುಖಂಡರು ಹಾಜರಿದ್ದರು.