
ಒಳ ಮೀಸಲಾತಿ ವರದಿ ಬಂದ ತಕ್ಷಣ ಇದರ ಕುರಿತು ಮುಖ್ಯಮಂತ್ರಿಗಳು ಸೂಕ್ತ ಕ್ರಮ ವಹಿಸಲಿದ್ದಾರೆ ಅನಗತ್ಯವಾಗಿ ವಿರೋಧ ಪಕ್ಷದವರು ಆಗಸ್ಟ್ 1ರಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಇದನ್ನು ಕೈಬಿಡಲು ಮನವಿ ಮಾಡಿದರು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆಹೆಚ್. ಮುನಿಯಪ್ಪ ತಿಳಿಸಿದರು.
ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಅವರು ಮಾತನಾಡಿದ ಅವರು ಒಳ ಮೀಸಲಾತಿ ಅನುಷ್ಠಾನ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ನ್ಯಾಯಮೂರ್ತಿ ನಾಗಮೋಹನ್ ದಾಸ್ ರವರ ನೇತೃತ್ವದ ಏಕ ಸದಸ್ಯ ಆಯೋಗವನ್ನು ರಚಿಸಿ 101 ಜಾತಿಗಳ ನಿರ್ದಿಷ್ಠ ದತ್ತಾಂಶಗಳನ್ನು ಸಂಗ್ರಹಿಸಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ನೂರರಷ್ಟು ಸಮೀಕ್ಷೆಯಾಗಿದ್ದು ಬೆಂಗಳೂರು ನಗರದಲ್ಲಿ ಶೇ%60 ರಷ್ಟು ಸಮೀಕ್ಷೆ ಕಾರ್ಯ ಮುಗಿದಿದ್ದು ಅಂತಿಮ ವರದಿಯನ್ನು ಸಿದ್ದಪಡಿಸುತ್ತಿದ್ದು ಅತಿ ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲ್ಲಿದ್ದಾರೆ ಎಂದರು.
ಬಿಜೆಪಿಯ ಕೇಂದ್ರದ ಮಾಜಿ ಸಚಿವರಾದ ಎ. ನಾರಾಯಣಸ್ವಾಮಿಯವರು ಸಂಸತ್ತಿನಲ್ಲಿ ಮಾತನಾಡುತ್ತಾ ಮೀಸಲಾತಿ ಕಲ್ಪಿಸಲು ಸಾದ್ಯವಿಲ್ಲ ಎಂದಿದ್ದಾರೆ ಇದು ದಾಖಲೆಯಾಗಿದೆ ಈಗಿದ್ದಾಗ ಇವರಿಂದ ಏನೂ ನಿರೀಕ್ಷಿಸಲು ಸಾದ್ಯವಿಲ್ಲಾ ಗೋವಿಂದ ಕಾರಜೋಳ ರವರು ಲೋಕೋಪಯೋಗಿ ಸಚಿವರಿದ್ದಾಗ ಅವರ ಸರ್ಕಾರ ಮಾದುಸ್ವಾಮಿ ಆಯೋಗ ರಚಿಸಿ ಯಾವುದೇ ಒಳಮೀಸಲಾತಿ ಕಲ್ಪಿಸಿಲ್ಲಾ ಅಂದಿನ ಮುಖ್ಯಮಂತ್ರಿ ಎಸ್.ಎಮ್ ಕೃಷ್ಣ ರವರ ಸರ್ಕಾರ ಇದ್ದಾಗ ಸದಾಶಿವ ಆಯೋಗವನ್ನು ರಚಿಸಿದರು ಅದರ ವರದಿಯನ್ನು ಅನುಷ್ಠಾನ ಮಾಡದೆ ಕೈಬಿಟ್ಟ ಈ ಬಿಜೆಪಿಯವರು ಈಗ ಹೋರಾಟದಕ್ಕೆ ಮುಂದಾಗಿರುವುದು ಹಾಸ್ಯಸ್ಪದವಾಗಿದೆ ಎಂದರು.
ನಮ್ಮ ಸರ್ಕಾರ ನುಡಿದಂತೆ ನಡೆಯುತ್ತಿದ್ದು ನಾವು ಚುನಾವಣೆಯ ಸಂದರ್ಭದಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಷೋಷಿಸಿರುವ ಹಾಗೆ ಒಳ ಮೀಸಲಾತಿಯನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡಿಯೇ ತೀರುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾನೂನು ಸಚಿವ ಎಚ್.ಕೆ ಪಾಟೀಲ್, ಅಬಕಾರಿ ಸಚಿವ ತಿಮ್ಮಾಪುರ ಜೊತೆಗಿದ್ದರು.