
ದೊಡ್ಡಬಳ್ಳಾಪುರ : ಅರಣ್ಯ ಸಂಪನ್ಮೂಲ ರಕ್ಷಿಸಲು ದಶಕಗಳಿಂದ ಸೇವೆ ಪಡೆದ ಅರಣ್ಯ ಇಲಾಖೆ ಏಕ-ಏಕಿ ತನ್ನ 14 ದಿನಕೂಲಿ ಸಿಬ್ಬಂದಿಗಳನ್ನು ಹೊರಗುತ್ತಿಗೆ ಪಾಲುಮಾಡಿರುವ ಘಟನೆ ದೊಡ್ಡಬಳ್ಳಾಪುರ ಅರಣ್ಯ ಇಲಾಖೆಯಲ್ಲಿ ನೆಡೆದಿದೆ.
ಹೊರಗುತ್ತಿಗೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸಲು ಇಷ್ಟವಿಲ್ಲದ ಸಿಬ್ಬಂದಿ ವರ್ಗ ತಾಲ್ಲೂಕಿನ ಅರಣ್ಯ ಇಲಾಖೆಯ ಕೇಂದ್ರ ಕಚೇರಿ ಮುಂಭಾಗ ಮೌನ ಪ್ರತಿಭಟನೆಗೆ ಮುಂದಾಗಿದೆ.
ಅರಣ್ಯ ಇಲಾಖೆ ನೌಕರರ ಸಮಸ್ಯೆ ಅರಿತ ಕರ್ನಾಟಕ ರಕ್ಷಣಾ ವೇದಿಕೆ(ನಾರಾಯಣಗೌಡರ ವೇದಿಕೆ )ಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು .
ಅರಣ್ಯ ಇಲಾಖೆ ನೌಕರ ಸದಾನಂದಮೂರ್ತಿ ಮಾತನಾಡಿ ನಮ್ಮನ್ನು ಇಲಾಖೆಯವರು ನೌಕರರರಂತೆ ಕಾಣುತ್ತಿಲ್ಲ ನಮ್ಮನ್ನು ಪಶು ಎಂದು ಭಾವಿಸಿದಂತೆ ಕಾಣುತ್ತದೆ, ಹಾಗಾಗಿಯೇ ನಮ್ಮಗೆ ತಿಳಿಸದೇ ಒಮ್ಮೆಲೇ ಹೊರಗುತ್ತಿಗೆ ಅಡಿಯಲ್ಲಿ ಕರ್ತವ್ಯ ಮಾಡಲು ಹೇಳುತ್ತಿದ್ದಾರೆ.1998ರಲ್ಲಿ ನೌಕರರನ್ನು ಖಾಯಂಗೊಳಿಸಿದ ಸಂದರ್ಭದಲ್ಲಿ ನಮ್ಮ ಬಳಿ ಅಗತ್ಯ ದಾಖಲಾತಿ ಇರಲಿಲ್ಲ ಆದರೆ 2013ರಲ್ಲಿ ಖಾಯಂಗೊಳಿಸುವ ಸಂದರ್ಭದಲ್ಲಿ ನಮ್ಮ ಬಳಿ ಅನುಭವ ಹಾಗೂ ಸೂಕ್ತ ದಾಖಲಾತಿ ಇದ್ದರು ನಮ್ಮನ್ನು ಖಾಯಂಗೊಳಿಸಲಿಲ್ಲ, ಈಗ ಏಕಾ -ಏಕಿ ನಮ್ಮನ್ನು ಕೆಲಸದಿಂದ ತೆಗಿದಿದ್ದಾರೆ ಇದು ಯಾವ ನ್ಯಾಯ ಸದಾ ಮುಂಚೂಣಿಯಲ್ಲಿದ್ದು ಅರಣ್ಯ ಇಲಾಖೆಗಾಗಿ ನಮ್ಮ ಜೀವನ ಸವೆಸಿದ್ದೇವೆ ಆದರೆ ಈಗ ನಮ್ಮ ಬದುಕು ಬೀದಿಗೆ ಬಂದಿದೆ ಯಾವ ಅಧಿಕಾರಿ ಬಳಿ ಕೇಳಿದರು ಯಾರು ಸ್ಪಂದಿಸುತ್ತಿಲ್ಲ ಸುಮಾರು 30 ವರ್ಷಗಳ ಸುದೀರ್ಘ ನಿಸ್ವಾರ್ಥ ಸೇವೆಗೆ ಬೆಲೆ ಇಲ್ಲವೇ.. ಎಂದರು.
ನಮಗೆ ಈ ಕೆಲಸಬಿಟ್ಟು ಬೇರೆ ಗೊತ್ತಿಲ್ಲ ಈ ಆದೇಶವನ್ನು ನಾವು ಒಪ್ಪೋಲ್ಲ ನಮಗೆ ಖಾಯಂ ಗೊಳಿಸದಿದ್ದರೂ ನಮೂನೆ ಎಫ್. ಎ ಸಿ -63 ಪ್ರಕಾರ ಸಂಬಳ ನೀಡಿಲಿ ಇಲ್ಲವೇ ನಮ್ಮ ಈ ಹೋರಾಟ ನಿರಂತರವಾಗಿ ನೆಡೆಯಲಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡರ ವೇದಿಕೆ )ಯ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ಮಾತನಾಡಿ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡರ ಆದೇಶದ ಮೇರೆಗೆ ನಮ್ಮ ಸಂಘಟನೆ ಸದಾ ನಾಡು ನುಡಿ ಭಾಷೆ ವಿಚಾರವಾಗಿ ಧ್ವನಿಯಾಗಿದೆ ಅಲ್ಲದೆ ನಾಡಿನ ರೈತರಿಗೆ,ಕಾರ್ಮಿಕರಿಗೆ, ದಲಿತ ಮೇಲೆ ದೌರ್ಜನ್ಯಗಳಾದ ಸಂದರ್ಭಗಳಲ್ಲಿ ಅವರ ಪರ ನಿಂತು ನ್ಯಾಯಕ್ಕಾಗಿ ಹೋರಾಟ ನೆಡೆಸುತ್ತಿದ್ದೇವೆ ಅಂತೆಯೇ ಇಂದು ದೊಡ್ಡಬಳ್ಳಾಪುರ ಅರಣ್ಯ ಇಲಾಖೆಯಲ್ಲಿ ಸತತ 25-30 ವರ್ಷಗಳಿಂದ ಸೇವೆ ಸಲ್ಲಿಸಿ ಇನೇನು ನಿವೃತ್ತಿ ಪಡೆಯುವ ಹಂತ ತಲುಪಿರುವ ಹಾಗೂ ಈ ಕೆಲಸದ ಮೂಲಕ ಜೀವನ ಕಟ್ಟಿಕೊಳ್ಳಲು ಮುಂದಾಗಿ ನಿರಂತರ ಸೇವೆ ಸಲ್ಲಿಸುತ್ತಿರುವ ಸುಮಾರು 14 ನೌಕರರನ್ನು ಸರ್ಕಾರಿ ಖಾಯಂಗೊಳಿಸದೇ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿರುವುದು ವಿಪರ್ಯಾಸ.
ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸಿ ಎನ್ನುವ ಅಧಿಕಾರಿಗಳು ಒಮ್ಮೆ ಯೋಚಿಸಲಿ 30 ವರ್ಷ ಸೇವೆ ಪಡೆದುಕೊಂಡಿರುವ ಅರಣ್ಯ ಇಲಾಖೆಯೇ ನೌಕರರನ್ನು ಕೈಬಿಟ್ಟ ಮೇಲೆ ಹೊರಗುತ್ತಿಗೆ ನೌಕರರ ಕ್ಷೇಮ ಕಾಪಾಡುವುದೇ , ಅರಣ್ಯ ಇಲಾಖೆಯ ನೌಕರರ ಜೊತೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡರ ಬಣ ಸದಾ ಬೆಂಬಲವಾಗಿ ನಿಲ್ಲುತ್ತದೆ ಈ ಹಿಂದೆ ನೌಕರರಿಗೆ ನೀಡುತ್ತಿದ್ದ ಸಂಬಳದಂತೆ ಮುಂದೆಯೂ ನೀಡಬೇಕು ಅಲ್ಲದೆ ನೌಕರರನ್ನು ಖಾಯಂಗೊಳಿಸಬೇಕೆಂದು ಮಾನ್ಯ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆಯವರನ್ನು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ನಾವು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ಪರಿಸರ ಚಿಂತಕ ಚಿದಾನಂದ ಮೂರ್ತಿ ಮಾತನಾಡಿ ತಾಲೂಕಿಗೆ ಬರುವ ಎಲ್ಲಾ ಅಧಿಕಾರಿಗಳು ಅರಣ್ಯ ಸಂಬಂಧಿತ ಮಾಹಿತಿ ಹಾಗೂ ವ್ಯಾಪ್ತಿಯ ಬಗ್ಗೆ ತಿಳಿಯುವಷ್ಟರಲ್ಲಿ ಬೇರೆಡೆಗೆ ವರ್ಗಾವಣೆಯಾಗುತ್ತಾರೆ ಆದರೆ ಸ್ಥಳೀಯವಾಗಿ ಅರಣ್ಯದ ಎಲ್ಲಾ ಮಾಹಿತಿ ಲಭ್ಯವಿರುವುದು ಈ ನೌಕರರ ಬಳಿ ಮಳೆ ಬಿಸಿಲು ಎನ್ನದೆ ಸದಾಕಾಲ ಅರಣ್ಯ ರಕ್ಷಕರಾಗಿ ಕರ್ತವ್ಯ ನಿರ್ವಹಿಸುವ ಇವರನ್ನು ಯಾವುದೋ ಕಾಯ್ದೆ ಹೇಳಿ ಏಕಏಕಿ ಕೆಲಸದಿಂದ ತೆಗೆಯುವುದು ಸರಿಯಲ್ಲ , ಅರಣ್ಯ ಕಾಯುವ ಸೈನಿಕರೇ ಪ್ರತಿಭಟನೆಗೆ ಮುಂದಾದರೆ ಅರಣ್ಯ ಕಾಯುವವರಾದರು ಯಾರು.? ಈ ಕೂಡಲೇ ಅಧಿಕಾರಿಗಳು ಈ ಕುರಿತು ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ , ಜೊತೆಗೆ ನೌಕರರನ್ನು ಈ ಹಿಂದೆ ಇದ್ದಂತೆ ಯಥಾವತ್ ಮುಂದುವರಿಸಬೇಕಾಗಿ ಈ ಮೂಲಕ ಒತ್ತಾಯಿಸುತ್ತೇನೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ( ನಾರಾಯಣಗೌಡರ ವೇದಿಕೆ )ಯ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಮಂಜುನಾಥ್ ನಾಯ್ಕ ಮಾತನಾಡಿ ಈಗಾಗಲೇ ಕಾಯಂ ಮಾಡುವ ಸಂದರ್ಭದಲ್ಲಿ ಎರಡು ಬಾರಿ ನೌಕರರನ್ನು ಯಾಮರಿಸಿ ಆಗಿದೆ ಇನ್ನಾದರೂ ಅಧಿಕಾರಿಗಳು ನೌಕರರ ಗೋಳು ಕೇಳಲಿ ಯಾವುದೇ ಮಾಹಿತಿ ನೀಡದೆ ಚೂರು ಮಾನವೀಯತೆ ಇಲ್ಲದೆ ಹೊರಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸಿ ಎಂದರೆ ಹೇಗೆ ಬೆಳಗಿನಿಂದಲೂ ಪ್ರತಿಭಟನೆ ಕುಳಿತಿರುವ ಅರಣ್ಯ ಇಲಾಖೆಯ ದಿನಗೂಲಿ ನೌಕರರನ್ನು ಕಚೇರಿಯ ಯಾರೊಬ್ಬರೂ ಸೌಜನ್ಯಕ್ಕಾದರೂ ಮಾತಾಡಿಸಿಲ್ಲ ಇದೆಂಥ ವ್ಯವಸ್ಥೆ ಇದರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಗಟ್ಟಿ ಧ್ವನಿಯಾಗಿ ನಿಲ್ಲಲಿದೆ, ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುವುದು ಬಿಟ್ಟು ಶೀಘ್ರಗತಿಯಲ್ಲಿ ಕ್ರಮ ಕೈಗೊಳ್ಳಲಿ ಅರಣ್ಯ ಇಲಾಖೆ ನೌಕರರ ಜೀವ ಜೀವನ ಉಳಿಸಲಿ ಎಂದರು.