
ದೊಡ್ಡಬಳ್ಳಾಪುರ : ಬೆಳ್ಳಂಬೆಳಗ್ಗೆ ಲಾರಿ ಕರೆಂಟ್ ಕಂಬಕ್ಕೆ ಗುದ್ದಿರುವ ಘಟನೆ ದೊಡ್ಡಬಳ್ಳಾಪುರ ನಗರದ ಬೆಸ್ಕಾಂ ಕಚೇರಿ ಮುಂಭಾಗ ನಡೆದಿದೆ.
ಲಾರಿಯನ್ನು ಹಿಂದೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕನು ಕಂಬವನ್ನು ಗಮನಿಸದೆ ಏಕಾಏಕಿ ಹಿಂದೆ ಹೋದ ಕಾರಣ ಲಾರಿ ಕಂಬಕ್ಕೆ ಡಿಕ್ಕಿ ಹೊಡೆದಿದೆ . ಲಾರಿ ಹೊಡೆತಕ್ಕೆ ಕಂಬ ಸಂಪೂರ್ಣ ಮುರಿದಿದ್ದು , ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿವೆ.
ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನೆಡೆದಿದೆ.