
ತೂಬಗೆರೆ : ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಆಗಸ್ಟ್ 16 ರಂದು ಹಿರೇ ಮುದ್ದೇನಹಳ್ಳಿ ಯಾದವ ವೇದಿಕೆ ವತಿಯಿಂದ ಕೃಷ್ಣ ಹಾಗೂ ರಾಧಾ ವೇಷಭೂಷಣ ಸ್ಪರ್ಧೆ ಆಯೋಜನೆ ಮಾಡಲಾಗಿದೆ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಕಾರ್ಯಕ್ರಮವು ಹಿರೇಮುದ್ದೇನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನೆಡೆಯಲಿದ್ದು ತಾಲ್ಲೂಕಿನ ಜನತೆ ತಮ್ಮ ಮಕ್ಕಳೊಂದಿಗೆ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.
ಕಾರ್ಯಕ್ರಮವು ಶನಿವಾರ ಬೆಳಗ್ಗೆ 11 ಗಂಟೆಗೆ ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗಾಗಿ ಹಳ್ಳಿ ರೈತ ಅಂಬರೀಶ್ (7259429132) ಅವರನ್ನು ಸಂಪರ್ಕಿಸಲು ಕೋರಿದೆ