ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಸವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡಬೇಕು ಇಲ್ಲದ ಪಕ್ಷದಲ್ಲಿ ಮುಂಬರುವ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಮತದಾನ ಮಾಡದೆ ಚುನಾವಣೆ ಬಹಿಷ್ಕರಿಸಲಾಗುವುದು ಎಂದು ಸ್ಥಳೀಯ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಕಳೆದ ಹಲವಾರು ವರ್ಷಗಳಿಂದ ನಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳು ನೆನೆಗುದ್ದಿಗೆ ಬಿದ್ದಿವೆ, ಹೆಚ್ಚು ಜನಸಂಖ್ಯೆ, ಹೆಚ್ಚಾದ ವಿಸ್ತೀರ್ಣ ಹೊಂದಿರುವ ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡದೆ ಮೋಸ ಮಾಡಲಾಗಿದೆ. ಪ್ರಶ್ನೆ ಮಾಡದ ಪ್ರತಿನಿಧಿಗಳಿಲ್ಲದೆ ಪಟ್ಟಣ ಪಂಚಾಯತಿ ಅಧಿಕಾರಿಗಳೇ ಸರ್ವಧಿಕಾರಿಗಳಂತೆ ವರ್ತಿಸುತ್ತಿದ್ದು ಅವರಿಗೆ ನಮ್ಮ ಗ್ರಾಮಗಳ ಅಭಿವೃದ್ಧಿಕಡೆ ಗಮನವೇ ಇಲ್ಲದಂಥಗಿದೆ ಎಂದು ಆರೋಪಿಸಿದರು.
ಸ್ಥಳೀಯ ಮುಖಂಡ ರವಿ ಕುಮಾರ್ ಮಾತನಾಡಿ 2020ರಲ್ಲಿ ಸ್ಥಳೀಯ ಬಾಶೆಟ್ಟಿಹಳ್ಳಿ ಪಂಚಾಯತಿಯು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿದ್ದು 2022ರಲ್ಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾರ್ಡ್ ವಿಂಗಡಣೆ ಮಾಡಲಾಗಿದೆ . ಆದರೆ ಈ ವಾರ್ಡ್ ವಿಂಗಡಣೆ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲೇ ಅತಿಹೆಚ್ಚು ಜನಸಾಂದ್ರತೆ ಹೊಂದಿರುವ ಭೌಗೋಳಿಕವಾಗಿ ಹೆಚ್ಚು ಪ್ರದೇಶ, ಹಾಗೂ ಅತಿ ಹೆಚ್ಚು ಕೃಷಿಕರನ್ನು ಹೊಂದಿರುವ ನಮ್ಮ ಕಸವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳನ್ನು ಒಂದೇ ವಾರ್ಡ್ ಎಂದು ಪರಿಗಣಿಸಲಾಗಿದೆ .ದಲಿತ ಕುಟುಂಬಗಳೇ ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಬೇಕು ಎಂತಲೇ ಉದ್ದೇಶಪೂರವಾಗಿಯೇ ವಾರ್ಡು ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ. ನಮಗಿಂತಲೂ ಕಡಿಮೆ ಜನಸಾಂದ್ರತೆ ಹೊಂದಿರುವ ತಮಗೆ ಬೇಕಿರುವ ಹಲವು ಬಡಾವಣೆಗಳನ್ನು ವಾರ್ಡ್ ಎಂದು ಪರಿಗಣಿಸಲಾಗಿದೆ.

2011 ಹಾಗೂ 2015 ರ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ನಮ್ಮ ಬಿಸುವನಹಳ್ಳಿ ಹಾಗೂ ಕಸವನಹಳ್ಳಿ ಗ್ರಾಮಗಳಿಗೆ ಪ್ರತ್ಯೇಕ ಮತದಾನ ಕೇಂದ್ರಗಳನ್ನು(ಬೂತ್) ಮಾಡಲಾಗಿತ್ತು ಆದರೆ ವಾರ್ಡ್ ವಿಂಗಡಣೆ ಸಮಯದಲ್ಲಿ ನಮ್ಮ ಗ್ರಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳದೇ ಏಕ ಪಕ್ಷಿಯ ನಿರ್ಧಾರ ಕೈಗೊಳ್ಳಲಾಗಿದೆ . ಪಟ್ಟಣ ಪಂಚಾಯತಿ ವ್ಯಾಪ್ತಿಯ 19 ವಾರ್ಡುಗಳ ಪೈಕಿ ನಮ್ಮ ವಾರ್ಡ್ ಅತಿ ಹೆಚ್ಚು ಮತದಾರರನ್ನು ಹೊಂದಿದೆ .
ಮುಂದಿನ ದಿನಗಳಲ್ಲಿ ನಾಯಕನಿಲ್ಲದ ಊರು ನಡೆಸಬೇಕಾಗುತ್ತದೆ
ಬಾಶೆಟ್ಟಿ ಪಟ್ಟಣ ಪಂಚಾಯಿತಿಯು ವಾರ್ಡ್ ವಿಂಗಡಣೆ ಸಮಯದಲ್ಲಿ ಅವೈಜ್ಞಾನಿಕ ನೀತಿಯನ್ನು ಅನುಸರಿಸಿದೆ ಕೇವಲ 369 ಮತದಾರರಿರುವ ಸ್ಥಳಗಳಿಗೆ ವಾರ್ಡ್ ನೀಡಿರುವ ಪಂಚಾಯತಿ 1448 ಮತದಾರರನ್ನು ಹಾಗೂ ಭೌಗೋಳಿಕ ಅರ್ಹತೆ ಹೊಂದಿರುವ ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡದೆ ಇರುವುದು ವಿಪರ್ಯಾಸವೇ ಸರಿ. ಈಗಲಾದರೂ ಪಟ್ಟಣ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಾಯಕರ ಇಲ್ಲದ ಗ್ರಾಮಗಳನ್ನು ನೋಡಬೇಕಾಗುತ್ತದೆ. ಪ್ರಶ್ನೆ ಮಾಡಲು ಪ್ರತಿನಿಧಿಗಳೇ ಇಲ್ಲದೆ ಇದ್ದಲ್ಲಿ ಅಧಿಕಾರಿಗಳ ದರ್ಬಾರ್ ನಡೆಯಲಿದೆ . ಈ ನಡವಳಿಕೆ ಬದಲಾಗಬೇಕು ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ನಮ್ಮ ಗ್ರಾಮಗಳಿಗೆ ಪ್ರತ್ಯೇಕ ವಾರ್ಡ್ ನೀಡುವ ಮೂಲಕ ಸಹಕರಿಸಬೇಕು ಪಟ್ಟಣ ಪಂಚಾಯತಿ ಅಧಿಕಾರಿಗಳು ಈ ಕೂಡಲೇ ಸಂಬಂಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಬೇಕು ಇಲ್ಲದೇ ಹೋದರೇ ಚುನಾವಣೆ ಸ್ಥಗಿತಗೊಳಿಸಿ ಎಂದು ಮುಖಂಡರು ಅಗ್ರಹಿದರು

ಸ್ಥಳೀಯ ಮುಖಂಡ ನಾರಾಯಣಸ್ವಾಮಿ ಮಾತನಾಡಿ ಬಿಸುವನಹಳ್ಳಿ ಹಾಗೂ ಕಸವನಹಳ್ಳಿ ಗ್ರಾಮಗಳನ್ನು ಒಂದೇ ವಾರ್ಡ್ ಎಂದು ಪರಿಗಣಿಸಿ ತರಾತುರಿಯಲ್ಲಿ ಬಾಷೆಟ್ಟಿಹಳ್ಳಿ ಪಟ್ಟಣ ಪಂಚಾಯ್ತಿ ಚುನಾವಣೆ ಘೋಷಣೆ ಮಾಡಿದೆ.ಸ್ಥಳೀಯ ಗ್ರಾಮಸ್ಥರು ಕಳೆದ 2022ರಿಂದಲ್ಲೂ ನಮಗೆ ಪ್ರತ್ಯೇಕ ವಾರ್ಡ್ ಕಲ್ಪಿಸಬೇಕೆಂದು ಮನವಿ ಮಾಡಿ ಮಾನ್ಯ ನ್ಯಾಯಾಲಯದ ಮೊರೆ ಹೋಗಿದ್ದೇವೆ . ಆದರೆ ಈವರೆಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹೋಗಿ ಯಾವುದೇ ರೀತಿಯ ಮಾಹಿತಿ ನೀಡಿಲ್ಲ. ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿರುವ ಅಧಿಕಾರಿಗಳು ಕೇವಲ ತಮ್ಮ ಸ್ವಾಹಿತಾಸಕ್ತಿಗಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬುದಕ್ಕೆ ನಮ್ಮ ಪಟ್ಟಣ ಪಂಚಾಯಿತಿಯೇ ಉತ್ತಮ ಉದಾಹರಣೆ. ಯಾವ ಮಾನದಂಡಗಳ ಆಧಾರದ ಮೇಲೆ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂಬುದು ನಮಗೆ ಅರ್ಥವಾಗುತ್ತಿಲ್ಲ, ಕೆಲ ಪ್ರಮುಖರ ಒತ್ತಡಕ್ಕೆ ಮಣಿದು ರಾಜಕೀಯ ಪ್ರೇರಿತರಾಗಿ ವಾರ್ಡ್ ವಿಂಗಡಣೆ ಮಾಡಲಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಆದಿ ನಾರಾಯಣ ಹೊಸಹಳ್ಳಿ, ಮೋಸರಹಳ್ಳಿ ಹಾಗೂ ನಾಗದೇನಹಳ್ಳಿ ಮೂರು ಗ್ರಾಮಗಳನ್ನು ಸೇರಿಸಿ ಒಂದು ವಾರ್ಡ್ ಮಾಡಲಾಗಿದೆ . ಅಂತೇ ಕಸವನಹಳ್ಳಿ ಹಾಗೂ ಬಿಸುವನಹಳ್ಳಿ ಗ್ರಾಮಗಳನ್ನು ಸೇರಿಸಿ ಒಂದು ವಾರ್ಡ್ ಮಾಡಲಾಗಿದೆ ಇದು ಸಂಪೂರ್ಣ ಅವೈಜ್ಞಾನಿಕ ವಿಂಗಡಣೆಯಾಗಿದೆ. ನಮ್ಮ ಗ್ರಾಮದಲ್ಲಿ ವೃದ್ಧರು ಅಂಗವಿಕಲರು ಇದ್ದಾರೆ ಕಸವನಹಳ್ಳಿಯ ಮತ ಕೇಂದ್ರಕ್ಕೆ ತೆರಳಿ ಮತ ಹಾಕಬೇಕಾದರೆ ಕನಿಷ್ಠ 3ಕಿಲೋ ಮೀಟರ್ ನಡೆದುಸಾಗಬೇಕಿದೆ ನಮ್ಮ ಗ್ರಾಮದಲ್ಲೇ ಮತಕೇಂದ್ರ ನೀಡಿ ನಮ್ಮ ಗ್ರಾಮಕ್ಕೆ ಪ್ರತ್ಯೇಕ ವಾರ್ಡ್ ನೀಡಬೇಕು ಎಂದು ಅಗ್ರಹಿಸಿದರು.
ನಮ್ಮ ಗ್ರಾಮಸ್ಥರನ್ನು ಮನವೊರಿಸಿ ಮತದಾನ ಮಾಡಿಸುತ್ತೇವೆ ಎಂದು ಅಧಿಕಾರಿಗಳು ಭಾವಿಸಿದ್ದರೇ ಅದು ಖಂಡಿತ ಸಾಧ್ಯವಿಲ್ಲ , ನಮ್ಮ ಗ್ರಾಮಕ್ಕೆ ಪ್ರತ್ಯೇಕ ವಾರ್ಡ್ ನೀಡಿದರೆ ನಾವು ಚುನಾವಣೆಯಲ್ಲಿ ಭಾಗವಹಿಸುವ ಮೂಲಕ ಮತದಾನ ಮಾಡುತ್ತೇವೆ ಇಲ್ಲವಾದಲ್ಲಿ ಎಲ್ಲ ಗ್ರಾಮಸ್ಥರು ಒಮ್ಮತದಿಂದ ಮತದಾನಮಾಡದೆ ಚುನಾವಣೆ ಬಹಿಷ್ಕರಿಸುವ ಮೂಲಕ ಅಧಿಕಾರಿಗಳ ಧೋರಣೆವಿರುದ್ಧ ಹೋರಾಟ ನಡೆಸಲಿದ್ದೆವೆ ಎಂದರು.

ಈ ಸಂದರ್ಭದಲ್ಲೊ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಯಶೋದಮ್ಮ, ವೆಂಕಟರಮಣಪ್ಪ, ತಿಮ್ಮರಾಯ,ಎನ್.ಶೇಖರ್ , ಬಿ ಕೆ ಪರಶುರಾಮ,ನಾರಾಯಣಸ್ವಾಮಿ, ಎಂ ಮಾರಪ್ಪ,ಲೋಕೇಶ್, ಮುನಿಯಪ್ಪ, ಸತೀಶ್, ಮಂಜುನಾಥ್, ಕಸುವನಹಳ್ಳಿ ಕಾನೂನು ವಿದ್ಯಾರ್ಥಿ ಮತ್ತು ಜನಧ್ವನಿ ವೇದಿಕೆಯ ಮುಖಂಡ ರವಿಕುಮಾರ್, ನಾರಾಯಣಸ್ವಾಮಿ, ಮುನಿರಾಜು ಸೇರಿದಂತೆ ಸ್ಥಳೀಯ ಗ್ರಾಮಸ್ಥರು ಮುಖಂಡರು ಸ್ತ್ರೀ ಶಕ್ತಿ ಸ್ವಹಾಯಕ ಸಂಘದ ಮಹಿಳೆಯರು, ಅಂಬೇಡ್ಕರ್ ಸಂಘದ ಮುಖಂಡರು ವಾಲ್ಮೀಕಿ ಸಂಘದ ಮುಖಂಡರು ಮತ್ತು ಯುವಕರು ಹಾಜರಿದ್ದರು.
