ದೊಡ್ಡಬಳ್ಳಾಪುರ : ಕಾರ್ತಿಕ ಮಾಸದ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಶ್ರೀ ಕೊಂಗಾಡಿಯಪ್ಪ ಕಾಲೇಜು ರಸ್ತೆ ಕರೇನಹಳ್ಳಿಯಲ್ಲಿರುವ ಶ್ರೀ ಅಭಯಚೌಡೇಶ್ವರಿದೇವಿ ದೇವಾಲಯದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ಭಕ್ತಾಧಿಗಳು ಮಣ್ಣಿನ ಹಣತೆಯಲ್ಲಿ ಎಣ್ಣೆ ಹಾಕಿ ವಿವಿಧ ಆಕೃತಿಗಳಲ್ಲಿ ಜೋಡಿಸಿ ದೀಪ ಹಚ್ಚುವ ಮೂಲಕ ಭಕ್ತಿ ಸಮರ್ಪಣೆ ಮಾಡಿದರು.ದೇವರಲ್ಲಿ ಪ್ರಾರ್ಥನೆ ಮಾಡುತ್ತಾ ದೀಪ ಹಚ್ಚಿ ದೇವರ ಕೃಪೆಗೆ ಪಾತ್ರರಾದರು.

ಲಕ್ಷದೀಪೋತ್ಸವ ಅಂಗವಾಗಿ ಇಡೀ ದೇವಾಲಯ ದೀಪಗಳ ಬೆಳಕಿನಲ್ಲಿ ಪ್ರಜ್ವಲಿಸಿತು.

ಲಕ್ಷದೀಪೋತ್ಸವ ಹಿನ್ನೆಲೆ ಶ್ರೀ ಅಭಯಚೌಡೇಶ್ವರಿದೇವಿಗೆ ವಿವಿಧ ಪುಷ್ಪಗಳಿಂದ ವಿಶೇಷ ಅಲಂಕಾರ, ಪೂಜೆ , ಮಹಾಮಂಗಳಾರತಿ ಸೇರಿದಂತೆ ಇತರೆ ಪೂಜಾಕೈಂಕಾರ್ಯಗಳನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಭಕ್ತಾಧಿಗಳು ಇಂದು ಬೆಳಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.
