15ದಿನಗಳ ಯೋಗಾಭ್ಯಾಸ ತರಬೇತಿ ಶಿಬಿರ ಸಮಾರೋಪ ಸಮಾರಂಭ : ಮಕ್ಕಳಿಗೆ ಯೋಗ ಪ್ರಮಾಣಪತ್ರ ವಿತರಣೆ 

ವಿಜಯಮಿತ್ರ ದೊಡ್ಡಬಳ್ಳಾಪುರ : 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಹಾಗೂ ಶ್ರೀ ಕೃಷ್ಣ ಹಿರಿಯ ಮತ್ತು ಕಿರಿಯರ ಯೋಗ ಕೇಂದ್ರದ ವತಿಯಿಂದ ಕಳೆದ 15ದಿನಗಳಿಂದ ನಿರಂತರ ಯೋಗಾಭ್ಯಾಸ ಮತ್ತು ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಇಂದು (ನ. 30) ನಡೆಯಿತು.

ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಂಚಾಯತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ವಹಿಸಿ  ಯೋಗ ಗುರೂಜೀ ಕೃಷ್ಣ ಸ್ವಾಮಿ , ಅನ್ನದಾಸೋಹಿ ಮಲ್ಲೇಶ್ ಜೊತೆಗೂಡಿ ಶಿಬಿರದಲ್ಲಿ ಯೋಗ ತರಬೇತಿ ಪಡೆದ ಮಕ್ಕಳಿಗೆ  ಪ್ರಮಾಣಪತ್ರ ವಿತರಣೆ ಮಾಡಿದರು.

 

ನಂತರ ಮಾತನಾಡಿದ ಅವರು ನಮ್ಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂತಹ ಆರೋಗ್ಯಕರ ಶಿಬಿರದ ಆಯೋಜನೆ ಮಾಡಿರುವ ಶ್ರೀ ಕೃಷ್ಣ ಹಿರಿಯ ಮತ್ತು ಕಿರಿಯ ಯೋಗ ಕೇಂದ್ರಕ್ಕೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಯೋಗಾಭ್ಯಾಸದಿಂದ ಕೇವಲ ದೈಹಿಕ ಆರೋಗ್ಯ  ಅಷ್ಟೇ ಅಲ್ಲದೇ ಮಾನಸಿಕ ಆರೋಗ್ಯ ಲಭಿಸುತ್ತದೆ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಯೋಗಾಭ್ಯಾಸಕ್ಕೆ ಮುಂದಾಗಿ ಇಂತಹ ಶಿಬಿರಗಳಲ್ಲಿ ಭಾಗವಹಿಸುವುದು ಉತ್ತಮ ಸಂಗತಿಯಾಗಿದೆ. ಸಮಾಜಮುಖಿ ಕಾರ್ಯಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ ಎಂದರು.

ಯೋಗ ಗುರೂಜೀ ಕೃಷ್ಣ ಸ್ವಾಮಿ ಮಾತನಾಡಿ ಹಲವಾರು ವರ್ಷಗಳಿಂದ ನಾನು ಯೋಗಾಭ್ಯಾಸ ಮಾಡುವುದಷ್ಟೇ ಅಲ್ಲದೇ ಹಿರಿಯರಿಗೆ ಕಿರಿಯರಿಗೆ ಯೋಗ ತರಬೇತಿ ಶಿಬಿರಗಳನ್ನು ನಿರಂತರವಾಗಿ ಆಯೋಜನೆ ಮಾಡುತ್ತಿದ್ದು. ಯೋಗಾಸನಕ್ಕೆ ನನ್ನ ಸೇವೆ ಎಂದು ನಿಂತಿಲ್ಲ ಅಂತೆಯೇ ಈ ಬಾರಿ ದರ್ಗಾಜೋಗಿಹಳ್ಳಿಯ ಸುಮಾರು 30ಕ್ಕೂ ಅಧಿಕ ಪುಟಾಣಿ ಮಕ್ಕಳಿಗೆ ಯೋಗ ತರಬೇತಿ ಶಿಬಿರ ಆಯೋಜನೆ ಮಾಡಿದ್ದು ಶಿಬಿರ ಅತ್ಯುತ್ತಮವಾಗಿ ಮೂಡಿ ಬಂದಿದೆ ಶಿಬಿರ ಆಯೋಜನೆ ಮಾಡಲು ನಮ್ಮಗೆ ಸಹಕಾರ ನೀಡಿದ ಶಶಿಕಲಾ ನಾಗರಾಜ್ ರವರಿಗೆ ಅಭಾರಿಯಾಗಿದ್ದೇವೆ ಎಂದರು.

ಸ್ಥಳೀಯ ಮುಖಂಡ ಹಾಗೂ ನಿರಂತರ ಅನ್ನದಾಸೋಹ ಕಾರ್ಯಕ್ರಮದ ಮುಖ್ಯಸ್ಥರಾದ ಅನ್ನದಾಸೋಹಿ ಮಲ್ಲೇಶ್ ಮಾತನಾಡಿ ಇದೊಂದು ಉತ್ತಮ ಬೆಳವಣಿಗೆ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಯೋಗಸನಾ ಹಾಗೂ ನಿರಂತರ ಯೋಗಾಭ್ಯಾಸದ ಬಗ್ಗೆ ಅರಿವು ಮೂಡಿಸಿದರೆ ಮುಂದೆ ಮಕ್ಕಳು ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ ಕಳೆದ 15 ದಿನಗಳಿಂದ ಪ್ರಾಣಾಯಾಮ, ಸೂರ್ಯನಮಸ್ಕಾರ, ಕುಳಿತು ಸರಳವಾಗಿ ಮಾಡುವ ಹಲವು ಆಸನಗಳು ಜೊತೆಗೆ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಿಸಲು ಧ್ಯಾನಭ್ಯಾಸ ಮಾಡಿಸುವ ಮೂಲಕ ಶಿಬಿರ ಯಶಸ್ವೀಯಾಗಿದೆ ಎಂದರು.

 

 

 

 

Leave a Reply

Your email address will not be published. Required fields are marked *