ದೊಡ್ಡಬಳ್ಳಾಪುರ : ಮಂಗಳೂರಿನ ಉಳ್ಳಾಲ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜನೆ ಮಾಡಲಾಗಿರುವ ಮಹಾನಾಯಕ ಜೈ ಭೀಮ್ ಕ್ರಿಕೆಟ್ ಟೂರ್ನಿಮೆಂಟ್ ನಲ್ಲಿ ದೊಡ್ಡಬೆಳವಂಗಲ ಯುವಕರ ತಂಡ ಜನವರಿ 2,3ಮತ್ತು 4ರಂದು ನೆಡೆಯುವ ಪಂದ್ಯಾವಳಿಯಲ್ಲಿ ಭಾಗವಹಿಸಲಿದೆ ಎಂದು ತಂಡದ ಮಾಲೀಕರಾದ ಮಹೇಶ್ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು ದಲಿತ ಸಮುದಾಯಗಳ ಸಾಮಾಜಿಕ ಹಾಗೂ ಆರ್ಥಿಕತೆ ಸಮಾನತೆಗಾಗಿ ಇಂತಹ ಕ್ರೀಡಾ ಕೂಟಗಳು ಸಹಕಾರಿಯಾಗಲಿದೆ . ದಲಿತ ಸಮುದಾಯಗಳ ಅಭಿವೃದ್ಧಿಗಾಗಿ ವಿಧಾನಸಭಾ ಸಭಾಪತಿಗಳಾದ ಯು ಟಿ ಖಾದರ್ ರವರು ಕಲ್ಪಿಸಿರುವ ಅವಕಾಶಕ್ಕೆ ನಾವು ಅಭಾರಿಯಾಗಿದ್ದೇವೆ ಎಂದರು.
ಹಲವಾರು ಶೋಷಣೆಗಳನ್ನು ಎದುರಿಸಿ ನಿರಂತರ ಹೋರಾಟಗಳ ಮೂಲಕ ಎಲ್ಲಾ ಕ್ಷೇತ್ರಗಳಲ್ಲಿ ಸಮಾನವಾಗಿ ನಿಲ್ಲುವ ಹಂತಕ್ಕೆ ದಲಿತರು ತಲುಪಿದ್ದೇವೆ.ಆದರೂ ಇಂದಿಗೂ ನಮ್ಮ ಮೇಲೆ ದೌರ್ಜನ್ಯಗಳು ನಿಂತಿಲ್ಲ ಇಂತಹ ಸಂದರ್ಭದಲ್ಲಿ ದಲಿತ ಯುವಕರಲ್ಲಿ ಕ್ರೀಡಾಮನೋಭಾವ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ಆಯೋಜನೆ ಮಾಡಬೇಕಾಗಿದೆ ಮಹಾನಾಯಕ ಜೈ ಭೀಮ್ ಕ್ರಿಕೆಟ್ ಟೂರ್ನಿಮೆಂಟ್ ಮೂಲಕ ಕಳೆದ ಹಲವು ವರ್ಷಗಳಿಂದ ದಲಿತ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜಗದೀಶ್ ಗಂಗೊಳ್ಳಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ಸಮುದಾಯಗಳ ಅಭಿವೃದ್ಧಿಯಾಗಬೇಕಾದರೆ ಬಹುಮುಖ್ಯವಾಗಿ ಸರ್ಕಾರದ ಎಲ್ಲಾ ಜನಪರ ಯೋಜನೆಗಳು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ತಲುಪುವ ಕಾರ್ಯವಾಗಬೇಕು . ಪ್ರತಿ ಹಿಂದುಳಿದ ಸಮುದಾಯಗಳು ಸರ್ಕಾರದ ಯೋಜನೆಗಳ ಸದ್ಭಾಳಕೆಯಿಂದಾಗಿ ತನ್ನ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಹೊಂದಬಹುದಾಗಿದೆ ಎಂದರು.
ತಂಡದ ಪರಿಚಯ :-
ಕ್ರಿಕೆಟ್ ತಂಡ ಮಾಲೀಕ ಮಹೇಶ್, ತಂಡದ ನಾಯಕ ಮಹಾದೇವ, ಆಟಗಾರರಾದ ಉದಯ್, ರಾಜ, ರಮೇಶ್, ನವೀನ್, ಅರ್ಜುನ್, ನರಸಿಂಹ, ರವಿ, ಕಿರಣ್, ಸುಂದರ್, ರಾಜು, ಯಶು, ಕೃಪಾಕರ್, ಮಧು ಭಾಗವಹಿಸಲಿದ್ದಾರೆ.
ದೊಡ್ಡಬೆಳವಂಗಲ ಪಂಚಾಯತಿ ಸದಸ್ಯರಾದ ಗಂಗಾಧರಯ್ಯ ಮಾತನಾಡಿ ಇಂದಿನ ಯುವಪೀಳಿಗೆ ಸದಾ ವಿವಿಧರೀತಿಯ ಅಮಲಿನಲ್ಲಿ ಬದುಕುತ್ತಿದೆ. ಕ್ರೀಡೆ ಯುವಕರನ್ನು ದುಶ್ಚಟಗಳಿಂದ ದೂರವಿಡುತ್ತದೆ ಅಲ್ಲದೇ ಮಾನಸಿಕ ಹಾಗೂ ದೈಹಿಕ ಅರೋಗ್ಯವನ್ನು ಕಾಪಾಡುತ್ತದೆ. ಕ್ರಿಕೆಟ್ ಎಂಬ ಕ್ರೀಡೆ ಯುವ ಸಮುದಾಯವನ್ನು ಅತೀ ವೇಗವಾಗಿ ಆಕರ್ಷಸುತ್ತದೆ ಜೊತೆಗೆ ಕ್ರಿಯಾತ್ಮಕ ಯೋಚನೆಗೆ ಸಹಕಾರಿಯಾಗುತ್ತದೆ ಎಂದರು.

ಸ್ಥಳೀಯ ದಲಿತ ಮುಖಂಡರಾದ ಮಹೇಶ್ ತಮ್ಮ ಸ್ವಇಚ್ಛೆಯಿಂದ ಯುವಕರ ಪಡೆಯನ್ನು ಸಿದ್ದಪಡಿಸಿ ನಮ್ಮ ಜಿಲ್ಲೆಯ ಶಕ್ತಿಯನ್ನು ಮಂಗಳೂರಿನ ಉಳ್ಳಾಲದಲ್ಲಿ ಪ್ರದರ್ಶಿಸಲು ಮುಂದಾಗುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಭಾಗವಹಿಸಲು ಸಿದ್ದರಾಗಿರುವ ಎಲ್ಲಾ ಕ್ರೀಡಾಪಟುಗಳಿಗೆ ಸಮುದಾಯದ ಪರವಾಗಿ ಶುಭ ಹಾರೈಸುತ್ತೇವೆ ಎಂದು ತಿಳಿಸಿದರು.
ಈ ವೇಳೆ ಸ್ಥಳೀಯ ದಲಿತ ಮುಖಂಡರು, ಕ್ರೀಡಾಸಕ್ತರು, ಹಿತೈಷಿಗಳು ಹಾಜರಿದ್ದರು.
