ದೇವನಹಳ್ಳಿ : ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಅಂದಾಜು 5ಲಕ್ಷದ ಮೌಲ್ಯದ ಒಟ್ಟು 6.288 ಕಿ.ಗ್ರಾಂ ಒಣ ಗಾಂಜಾ ಜಪ್ತುಪಡಿಸಿ ದೇವನಹಳ್ಳಿ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ಟಿಪ್ಪು ಸರ್ಕಲ್ ಬಳಿ ಗಸ್ತು ನಡೆಸುತ್ತಿದ್ದಾಗ ಬಂದ ಮಾಹಿತಿ ಮೇರೆಗೆ ಹೊಸಕೋಟೆ ಉಪ ವಿಭಾಗ ಅಬಕಾರಿ ಉಪ ಅಧೀಕ್ಷಕರಾದ ಕೆ ಎನ್ ಚಂದ್ರ ಮೋಹನ್ ರವರ ಮಾರ್ಗ ದರ್ಶನದಲ್ಲಿ ಅಬಕಾರಿ ಸಬ್ ಇನ್ಸ್ಪೆಕ್ಟರ್ ಎನ್ ಎಂ ಹನುಮಂತರಾಜು ದೇವನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿ ಅಂದಾಜು 6.288 ಕಿ.ಗ್ರಾಂ ಒಣ ಗಾಂಜಾ ಜಪ್ತು ಪಡಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಮೂರ್ತಿ.ಜಿ,ಸಂತೋಷ್,ಗಂಗಯ್ಯ ಪಾಲ್ಗೊಂಡಿದ್ದರು.
