
ದೊಡ್ಡಬಳ್ಳಾಪುರ : ಮಹಾಮಾನವತಾವಾದಿ, ವಿಶ್ವಾಜ್ಞಾನಿ, ಡಾ :ಬಾಬಾ ಸಾಹೇಬರ 67ನೇ ಪರಿನಿರ್ವಾಣದ ಅಂಗವಾಗಿ ತಾಲ್ಲೂಕಿನ ನಗರ ಭಾಗದ ಹಳೇ ಬಸ್ ನಿಲ್ದಾಣದಲ್ಲಿರುವ ಬಾಬಾ ಸಾಹೇಬರ ಪುತ್ತಿಳಿಗೆ ಛಲವಾದಿ ಮಹಾಸಭಾ ವತಿಯಿಂದ ಮಾಲಾರ್ಪಣೆ ಮಾಡಲಾಯಿತು.
ನಂತರ, ಸಂವಿಧಾನ ಪೀಠಿಕೆಯನ್ನು ಭೋದಿಸಿ, ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುವುದು ಅತ್ಯಂತ ಅಗತ್ಯವಾಗಿದೆ ಜಾತಿ -ಜಾತಿಗಳ ನಡುವೆ ಸಂಘರ್ಷಗಳು ಹೆಚ್ಚಾಗಿರುವ ಸಂಧಿಗ್ದ ಪರಿಸ್ಥಿತಿಯಲ್ಲಿ ಜಾತಿಗಳ ಉಳಿಯುವಿಕೆಯು ಅತ್ಯಂತ ಜರೂರಾಗಿದೆ ಎಂದು ಛಲವಾದಿ ಮಹಾಸಭಾದ ಅಧ್ಯಕ್ಷರಾದ ಸಿ, ಗುರುರಾಜಪ್ಪ ಅವರು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾ ದ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಡಿ, ಎನ್, ಎಲ್, ಎನ್, ಮೂರ್ತಿಯವರು ಮಾತನಾಡಿದರು. ದೊಡ್ಡಬೆಳವಂಗಲ ಹೋಬಳಿಯ ಅಧ್ಯಕ್ಷರಾದ ಎನ್, ಉದಯಶಂಕರ್, ಇಂಜಿನಿಯರ್ ಕುಮಾರ್ ಸ್ವಾಮಿ, ಮುನಿಯಪ್ಪ, ಹನುಮಂತರಾಜು, ಅಂಜಿನಮೂರ್ತಿ (ಶಿಕ್ಷಕರು ), ಮುನಿಕೃಷ್ಣ , ಸುರೇಶ, ರಮೇಶ್, ಆನಂದ್, ನವೀನ್, ಶಿವಕುಮಾರ್,ಕಮಲಮ್ಮ ಇತರರು ಭಾಗವಹಿಸಿದ್ದರು.