
ದೊಡ್ಡಬಳ್ಳಾಪುರ : ನ್ಯಾಯಾಲಯದಲ್ಲಿ ದಾವೆ ಹೂಡಿದರು ನಮಗೆ ಜಾಗದ ಕಿರಿಕಿರಿ ಮಾತ್ರ ತಪ್ಪಿಲ್ಲ. ನಮ್ಮ ಪೂರ್ವಜರ ನೆನಪುಗಳು ಈ ಸ್ಮಶಾನದಲ್ಲಿದ್ದು ವರ್ಷಕ್ಕೊಮ್ಮೆ ಪೂಜಿಸುವ ಅವಕಾಶವು ಈಗ ಇಲ್ಲದಂತಾಗಿದೆ ದಯಮಾಡಿ ನಮಗೆ ಸ್ಮಶಾನ ಜಾಗವನ್ನು ದೊರಕಿಸಿಕೊಡಿ ಎಂದು ದಲಿತ ಮುಖಂಡರು ಮನವಿ ಮಾಡಿದರು
ತಾಲ್ಲೂಕಿನ ಕಂಟನ ಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂಬರ್ 40 ರಲ್ಲಿ 0.09 ಗುಂಟೆ ವಿಸ್ತೀರ್ಣದ ಜಾಗದಲ್ಲಿ 50ಕ್ಕೂ ಅಧಿಕ ಪರಿಶಿಷ್ಟ ಜನಾಂಗಕ್ಕೆ ಸೇರಿದ ಸಮಾಧಿಗಳಿದ್ದು . ಸ್ಥಳೀಯ ಪರಿಶಿಷ್ಟ ಕುಟುಂಬಗಳು ತಮ್ಮ ಹಿರಿಯರ ಸಮಾಧಿಗಳಿರುವ ಕಾರಣ ಈ ಸ್ಥಳವನ್ನು ಪೂಜಿನೀಯ ಭಾವದಿಂದ ನೋಡುತ್ತಾರೆ . ಆದರೆ ಕಳೆದ ಕೆಲವು ವರ್ಷಗಳ ಹಿಂದೆ ಈ ಸ್ಥಳವನ್ನು ಬೇರೊಬ್ಬರು ಖರೀದಿ ಮಾಡಿದ್ದು ಸ್ಥಳಕ್ಕೆ ಪರಿಶಿಷ್ಟ ವರ್ಗದ ಜನರು ಬರದಂತೆ ತಡೆ ಹಾಕಿದ್ದಾರೆ ಎನ್ನಲಾಗಿದೆ. ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ಪರಿಶಿಷ್ಟ ವರ್ಗಗಳು ಈ ಸ್ಥಳಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ದಾವೆ ಹುಡಿದ್ದು. ಸದರಿ ಸರ್ವೆ ನಂಬರ್ 40ರ ಒಂಬತ್ತು ಗುಂಟೆ ಜಾಗಕ್ಕೆ ಯಾರು ಪ್ರವೇಶಿಸಬಾರದು ಎಂದು ನ್ಯಾಯಾಲಯ ಆದೇಶ ಹೊರಡಿಸಿದೆ ಆದರೆ ಯಾರ ಆದೇಶವು ಇಲ್ಲದೆ ಏಕೆಏಕಿ ಸ್ಥಳಕ್ಕೆ ಬಂದು ಮರ ಕಡಿಯುತ್ತಿದ್ದಾರೆ ಎಂದು ಸ್ಥಳೀಯ ಪರಿಶಿಷ್ಟ ಸಮುದಾಯದ ಮುಖಂಡರು ಆರೋಪಿಸಿದ್ದಾರೆ.
ಈ ಕುರಿತು ಸ್ಥಳೀಯರಾದ ಶ್ರೀನಿವಾಸ್ ಮಾತನಾಡಿ ಸುಮಾರು 40 ವರ್ಷಗಳಿಂದಲೂ ನಮ್ಮ ಪೂರ್ವಜರು ಈ ಜಾಗದಲ್ಲಿ ಸತ್ತವರ ಮಣ್ಣು ಮಾಡುವ ಮೂಲಕ ಭಾವನಾತ್ಮಕವಾಗಿ ಸಂಬಂಧ ಇಟ್ಟುಕೊಂಡಿದ್ದಾರೆ, ಸ್ಮಶಾನ ಜಾಗ ತಮಗೆ ಸೇರಿದೆಂದ್ದು ಸಮಾಧಿಗಳನ್ನ ದ್ವಂಸ ಮಾಡುವ ಸಂಚು ನಡೆಸಿದ್ದಾರೆ, ಈ ಕುರಿತು ಗ್ರಾಮಸ್ಥರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, ನ್ಯಾಯಾಲಯವು ಯಾರೊಬ್ಬರೂ ಈ ಜಾಗವನ್ನು ಪ್ರವೇಶದಂತೆ ಆದೇಶ ನೀಡಿದೆ, ಆದರೆ ಇಂದು ಏಕಾಏಕಿ ಈ ಸ್ಥಳಕ್ಕೆ ಆಗಮಿಸಿ ಇಲ್ಲಿ ಬೆಳೆದಿರುವ ಮರಗಳನ್ನು ಕಡಿಯುತ್ತಿರುವುದು ಖಂಡನೀಯ, ನ್ಯಾಯಾಲಯದ ಆದೇಶಕ್ಕೂ ಬೆಲೆ ಕೊಡದ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಲಿತ ಮಹಿಳೆ ಮಂಜಮ್ಮ ಮಾತನಾಡಿ ಈ ಸ್ಥಳವು ನಮಗೆ ದೇವಾಲಯ ಇದ್ದಂತೆ, ನಮ್ಮೆಲ್ಲರ ಪೂರ್ವಜರನ್ನು ಈ ಸ್ಥಳದಲ್ಲಿ ಸಮಾಧಿಗಳ ರೂಪದಲ್ಲಿ ನೋಡುತ್ತೇವೆ, ಪ್ರತಿ ವರ್ಷಕ್ಕೊಮ್ಮೆ ಬಂದು ಸಮಾಧಿಗಳಿಗೆ ಪೂಜೆ ಸಲ್ಲಿಸಿ ಹೋಗುತ್ತೇವೆ. ಆದರೆ, ಇಂದು ನಮಗೆ ಸಮಾಧಿಗಳಿಗೆ ಪೂಜೆ ಮಾಡುವ ಅವಕಾಶವೇ ಇಲ್ಲದಂತಾಗಿದೆ, ಬಲಾಢ್ಯರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನಮ್ಮ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ, ನಮ್ಮ ಪೂರ್ವಜರ ಹಾಗೂ ನಮ್ಮ ನಂಬಿಕೆಯ ಉಳಿವಿಗಾಗಿ ನಮಗೆ ಈ ಜಾಗದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಂಜಮ್ಮ ಮಾತನಾಡಿ ಈ ಸ್ಥಳವು ನಮಗೆ ದೇವಾಲಯ ಇದ್ದಂತೆ ಕಾರಣ ನಮ್ಮೆಲ್ಲರ ಪೂರ್ವಜರನ್ನು ಈ ಸ್ಥಳದಲ್ಲಿ ಸಮಾಧಿಗಳ ರೂಪದಲ್ಲಿ ನೋಡುತ್ತೇವೆ ಪ್ರತಿ ವರ್ಷಕ್ಕೊಮ್ಮೆ ಬಂದು ಭಾವನಾತ್ಮಕವಾಗಿ ಅವರೊಂದಿಗೆ ಬೆರೆತು ಪೂಜೆ ಸಲ್ಲಿಸಿ ಹೋಗುತ್ತೇವೆ ಆದರೆ ಇಂದು ನಮಗೆ ಅದೃಷ್ಟ ಇಲ್ಲದಂತಾಗಿದೆ ಕಾರಣ ಬಲಾಢ್ಯರು ಈ ಜಾಗವನ್ನು ಖರೀದಿ ಮಾಡಿದ್ದು ಅಧಿಕಾರ ಹಾಗೂ ಹಣ ಬಲದಿಂದ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನಮ್ಮ ಜಾಗವನ್ನು ಕಬಳಿಸಲು ಮುಂದಾಗಿದ್ದಾರೆ ನಮಗೆ ನ್ಯಾಯ ಬೇಕಿದೆ ನಮ್ಮ ಪೂರ್ವಜರ ಹಾಗೂ ನಮ್ಮ ನಂಬಿಕೆಯ ಉಳಿವಿಗಾಗಿ ನಮಗೆ ಈ ಜಾಗದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರಾದ ನರಸಿಂಹಯ್ಯ, ಗಂಗರಾಜ್, ಶ್ರೀನಿವಾಸ್ ಎಂ, ನಟರಾಜ್, ಅಭಿಷೇಕ್ ಹಾಜರಿದ್ದರು.