
ದೊಡ್ಡಬಳ್ಳಾಪುರ : ಪಂಚಾಯತಿ ಜಾಗವನ್ನು ಒತ್ತುವರಿ ಮಾಡಿರುವ ಹಿನ್ನಲೆ ಪಂಚಾಯತಿ ಅಧಿಕಾರಿಗಳು ಮಂಜುನಾಥ್ ಎಂಬುವರ ಸ್ವತ್ತಿನ ಮೇಲೆ ದಾಳಿ ನೆಡೆಸಿದ್ದಾರೆ.
ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಏಳ್ಳುಪುರ ಗ್ರಾಮದ ನಿವಾಸಿ ಮಂಜುನಾಥ್ ಎಂಬುವರು ಸರ್ಕಾರಿ ಜಗದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದರೆಂದು ಆರೋಪಿಸಿ ಅಧಿಕಾರಿಗಳು ಇಂದು ಬೆಳಂಬೆಳಗ್ಗೆ ದಾಳಿ ನೆಡೆಸಿದ್ದಾರೆ.
ಏಳ್ಳುಪುರ ಗ್ರಾಮದ ನಿವಾಸಿ ಮಂಜುನಾಥ್ ತಮ್ಮ ಮನೆಯ ಮುಂಭಾಗದ ಗ್ರಾಮ ಠಾಣಾ ಸ್ಥಳವನ್ನು ಅತಿಕ್ರಮ ಪ್ರವೇಶ ಮಾಡಿದ್ದಾರೆ. ಈ ಕುರಿತು ಸ್ಥಳೀಯ ಪಂಚಾಯಿತಿ ಅಧಿಕಾರಿಗಳು ನೋಟಿಸ್ ನೀಡಿದರು ಸ್ಪಂದಿಸುತ್ತಿಲ್ಲ ಈ ಕುರಿತು ಕೇಳಲು ಬಂದ ಅಧಿಕಾರಿಗಳು ಹಾಗೂ ಪೌರಾಕಾರ್ಮಿಕರ ಮೇಲೆ ಅಸಭ್ಯವಾಗಿ ಮಾತನಾಡುವುದಲ್ಲದೇ ಹಲ್ಲೆ ಮಾಡಲು ಯತ್ನಿಸಿದ್ದಾರೆ ಎಂದು ಪಂಚಾಯಿತಿ ಅಧಿಕಾರಿಗಳು ಆರೋಪಿಸಿದ್ದಾರೆ.
ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿಗಿಳಿದ ಮನೆ ಮಾಲೀಕ ಮಂಜುನಾಥ್ ಗ್ರಾಮಠಾಣದ ತೆರವು ಜಾಗದಲ್ಲಿ ಕಾರ್ ನಿಲ್ಲಿಸಿ ಹೈಡ್ರಾಮ ಮಾಡಿದ್ದಾರೆ.ಸ್ಥಳಕ್ಕೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ರೇವಣ್ಣ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
ನಂತರ ಹೆಚ್ಚಿನ ವಿಚಾರಣೆ ಮನೆಯ ಮಾಲೀಕ ಮಂಜುನಾಥರನ್ನು ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸತ್ಯ ಸತ್ಯತೆ ಏನು ಎಂಬುದು ತಿಳಿಯಬೇಕಿದೆ.