ವಿಶೇಷ ದಿನವನ್ನು ಅನ್ನದಾನ ಮಾಡುವ ಮೂಲಕ ಆಚರಿಸಿದ ನಮ್ಮ ಕರ್ನಾಟಕ ಜನ ಸೈನ್ಯ ತಂಡ

Spread the love

ದೊಡ್ಡಬಳ್ಳಾಪುರ : ನಿತ್ಯ ಅನ್ನದಾನ ಸಾಮಾನ್ಯದ ವಿಷಯವಲ್ಲ, ಪ್ರತಿನಿತ್ಯ ನಿರಾಶ್ರಿತ ಕಡುಬಡವರಿಗೆ ನಿರಂತರ ಅನ್ನದಾಸೋಹ ಸಮಿತಿ ಆಹಾರ ವಿತರಣೆ ಮಾಡುತ್ತಿದ್ದು, ಹಸಿವನ್ನು ನೀಗಿಸುವ ಮಹತ್ಕಾರ್ಯವನ್ನು ಮಾಡುತ್ತಿದ್ದಾರೆ ಮಲ್ಲೇಶ್ ಮತ್ತು ತಂಡಕ್ಕೆ ಶುಭವಾಗಲಿ ಎಂದು ನಮ್ಮ ಕರ್ನಾಟಕ ಜನ ಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷ ಎನ್.ವೈ ನಾಗರಾಜು ತಿಳಿಸಿದರು.

 

ನಿರಂತರ ಅನ್ನ ದಾಸೋಹ ಸಮಿತಿಯ 1901 ನೇ ದಿನದ ಅನ್ನ ದಾಸೋಹಕ್ಕೆ ಸಹಾಯ ಹಸ್ತ ನೀಡಿ ಕುಮಾರಿ ನಿಸರ್ಗ. ಎನ್.ಇವರ ಹುಟ್ಟು ಹಬ್ಬದ ಅಂಗವಾಗಿ ನಿರಾಶ್ರಿತ ಕಡುಬಡವರಿಗೆ ಅನ್ನದಾಸೋಹ ಕಾರ್ಯಕ್ರಮವನ್ನು ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿ ಆಹಾರ ವಿತರಣೆ ಮಾಡಿ ಮಾತನಾಡಿದ ಅವರು ಒಂದು ದಿನದ ದಾಸೋಹ ಕಾರ್ಯಕ್ರಮ ಮಾಡುವುದೇ ಕಷ್ಟ, ಆದರೆ ಕಳೆದ 1900 ದಿನಗಳಿಂದಲೂ ಪ್ರತಿನಿತ್ಯ ಆಹಾರ ವಿತರಣೆ ಮಾಡುತ್ತಿರುವ ಮಲ್ಲೇಶ್ ರವರ ಕಾರ್ಯ ಮೆಚ್ಚುವಂಥದ್ದು , ಈ ಅನ್ನದಾಸೋಹ ಕಾರ್ಯಕ್ರಮವು ನಿತ್ಯ ನಿರಂತರ ಸಾಗಲಿ ಎಂದರು.

 

ನಮ್ಮ ಕರ್ನಾಟಕ ಜನಸೈನ್ಯ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಈ. ಕೆಂಪರಾಜು ಮಾತನಾಡಿ ವಿಶೇಷ ದಿನಗಳನ್ನು ದುಂದು ವೆಚ್ಚ ಮಾಡದೆ ಅರ್ಥಪೂರ್ಣವಾಗಿ ಹತ್ತಾರು ಜನರಿಗೆ ಆಹಾರ ವಿತರಣೆ ಮಾಡುವ ಮೂಲಕ ನಿರಂತರ ಅನ್ನದಾಸೋಹ ಸಮಿತಿ ಒಟ್ಟಿಗೆ ಆಚರಿಸುವುದು ಉತ್ತಮವಾಗಿದೆ ಅಲ್ಲದೆ ನಮ್ಮ ಸಂಭ್ರಮಾಚರಣೆ ಅನ್ಯರಿಗೆ ನೋವುಂಟು ಮಾಡದೆ ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಮೂಲಕ ಆಚರಿಸುವುದು ಅರ್ಥಪೂರ್ಣವಾಗಿರುತ್ತದೆ , ಸಮಾಜದ ಎಲ್ಲರು ತಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಸಂಭ್ರಮಿಸೋಣ ಎಂದರು.

 

ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕುಮಾರಿ ನಿಸರ್ಗ. ಎನ್.ಇವರ ಹುಟ್ಟು ಹಬ್ಬದ ಅಂಗವಾಗಿ 1901 ನೇ ದಿನದ ಅನ್ನ ದಾಸೋಹಕ್ಕೆ ಸಹಾಯ ಹಸ್ತ ನೀಡಿರುವ ಯಶೋಧಮ್ಮ ರವರು ಹಾಗೂ ನಮ್ಮ ಕರ್ನಾಟಕ ಜನಸೈನ್ಯ ಜಿಲ್ಲಾಧ್ಯಕ್ಷರು ನಾಗರಾಜ ಎನ್ .ವೈ.ರವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ, ವಿಶೇಷ ದಿನಗಳ ಆಚರಣೆ ಹಾಗೂ ಸಂಭ್ರಮಾಚರಣೆ ಕೇವಲ ಮೋಜು ಮಸ್ತಿಗೆ ಸೀಮಿತವಾಗದೆ ಸಮಾಜಮುಖಿ ಕಾರ್ಯಗಳಲ್ಲಿ ಭಾಗಿಯಾಗುವ ಮೂಲಕ ಆಚರಿಸಲು ಎಲ್ಲರು ಮುಂದಾಗಬೇಕೆಂದು ಮನವಿ ಮಾಡಿದರು

 

 

ನಮ್ಮ ಕರ್ನಾಟಕ ಜನ ಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷರು ಎನ್.ವೈ.ನಾಗರಾಜ್. ಜಿಲ್ಲಾ ಉಪಾಧ್ಯಕ್ಷರಾದ ಯಶೋಧಮ್ಮ ನಾಗರಾಜ್,ಕೆ.ದೇವರಾಜ್,ಜಿಲ್ಲಾ ಯುವ ಘಟಕ ಅಧ್ಯಕ್ಷರಾದ ನರಸಿಂಹ ಮೂರ್ತಿ ಜಿಲ್ಲಾ ಕಾರ್ಯಾಧ್ಯಕ್ಷ .ಕೆ. ಎನ್. ದೇವರಾಜ್. ತಾಲೂಕು ಅಧ್ಯಕ್ಷರುಈ.ಕೆಂಪರಾಜು,ನಗರಾಧ್ಯಕ್ಷರಾದ ಮುನಿರಾಜು, ನಗರ ಮಹಿಳಾ ಅಧ್ಯಕ್ಷರಾದ ಪ್ರಮೀಳಮ್ಮ, ತಾಲ್ಲೂಕು ಅಧ್ಯಕ್ಷರಾದ ಗೀತಾ, ಪ್ರದಾನ ಕಾರ್ಯದರ್ಶಿ ಲತಾ ಸದಸ್ಯರಾದ ಆನಂದಪ್ಪ,ಪ್ರವೀಣ್,ಪ್ರಮೋದ್,ಕುಮಾರಣ್ಣ .ಪ್ರಕಾಶ್ ಬಾಬು .ಮಂಜುನಾಥ್,ಜಿ.ಶಿವಕುಮಾರಯ್ಯ(ಕುಮಾರ್ ಎಲೆಕ್ಟ್ರಿಕಲ್), ಹಾಗೂ ಯುವರಾಜ್ ಕುಮಾರ್ ಕನ್ನಡ ಯುವಸೇನೆ ಯ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *