ದೊಡ್ಡಬಳ್ಳಾಪುರ : ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ ನಿರಂತರ ಅನ್ನದಾಸೋಹ ಕಾರ್ಯಕ್ರಮವು ಹಸಿದವರಿಗೆ ಆಹಾರ ವಿತರಣೆ ಮಾಡುತ್ತಿದೆ . ಈ ಕಾರ್ಯಕ್ರಮಕ್ಕೆ ಈಗ 1923 ನೇ ದಿನದ ಸಂಭ್ರಮ.

ಹೌದು ತಾಲೂಕಿನ ದರ್ಗಾ ಜೋಗಿಹಳ್ಳಿಯಲ್ಲಿ ನಿತ್ಯ ನಿರಂತರವಾಗಿ ಅನ್ನದಾಸೋಹವನ್ನು ಮಲ್ಲೇಶ್ ಮತ್ತು ತಂಡ ನೆರವೇರಿಸಿಕೊಂಡು ಬರುತ್ತಿದ್ದು , ಇಂದು ತಾಲ್ಲೂಕಿನ ಹಲವಾರು ದಾನಿಗಳ ನೆರವಿನಿಂದ ಅದ್ದೂರಿ ಕಾರ್ಯಕ್ರಮವನ್ನು ನಿರಂತರ ಅನ್ನದಾಸೋಹ ಸಮಿತಿ ಆಯೋಜನೆ ಮಾಡಿತ್ತು.

ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ)ಯ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ ಮಾತನಾಡಿ ನಿರಂತರ ಅನ್ನದಾಸೋಹ ಕುರಿತಂತೆ ಹಲವು ಮಂದಿ ಹಲವು ಬಗ್ಗೆ ಮಾತನಾಡುತ್ತಾರೆ ಪ್ರಮುಖವಾಗಿ ಈ ಕಾರ್ಯಕ್ರಮವು ಅವಶ್ಯಕತೆ ಇತ್ತಾ ಈ ರೀತಿ ಆಹಾರ ವಿತರಣೆ ಮಾಡುವ ಮೂಲಕ ಜನರನ್ನ ಸೋಮಾರಿಯಗಳನ್ನಾಗಿ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ ಈ ಸ್ಥಳಕ್ಕೆ ಭೇಟಿ ಕೊಟ್ಟು ವಾಸ್ತವಿಕತೆ ಅರಿತರೆ ಮಾತ್ರ ನಮಗೆ ತಿಳಿಯುತ್ತದೆ ಈ ಕಾರ್ಯಕ್ರಮದ ಅವಶ್ಯಕತೆ ಇಲ್ಲಿ ಖಂಡಿತವಾಗಿಯೂ ಇದೆ ಎಂದು ಎಷ್ಟೇ ಅಡ್ಡಿ ಆತಂಕಗಳು ಬಂದರೂ ಹಿಂದೆ ಸರಿಯದೆ ಮಲ್ಲೇಶ್ ರವರು ನಿತ್ಯ ಅನ್ನದಾಸೋಹ ಮಾಡುತ್ತಿದ್ದಾರೆ ಅವರಿಗೆ ದೇವರು ಮತ್ತಷ್ಟು ಶಕ್ತಿ ನೀಡುವ ಮೂಲಕ ಈ ಕಾರ್ಯಕ್ರಮವು ಮತ್ತಷ್ಟು ಮುಂದೆ ಸಾಗಲಿ ಎಂದರು.

ಸ್ಥಳೀಯ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶಶಿಕಲಾ ನಾಗರಾಜ್ ಮಾತನಾಡಿ ನಿರಂತರ ಅನ್ನದಾಸೋಹ ಕಾರ್ಯಕ್ರಮಕ್ಕೆ ವೈಯಕ್ತಿಕವಾಗಿ ನಾನು ಸದಾ ಬೆಂಬಲವಾಗಿ ನಿಂತಿರುತ್ತೇನೆ, ಮಾತನಾಡುವ ಮಂದಿ ಕೆಲಸ ಮಾಡಲು ಬರುವುದಿಲ್ಲ, ಯಾವುದೇ ಅಪೇಕ್ಷೆ ಇಲ್ಲದೆ ಮಲ್ಲೇಶ್ ಪ್ರತಿನಿತ್ಯ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡುತ್ತಾರೆ. ಅವರ ಈ ಜನಪರ ಕಾಳಜಿ ಮತ್ತಷ್ಟು ಹೆಚ್ಚಾಗಲಿ ಅವರಿಗೆ ನಮ್ಮ ಸಹಕಾರ ಸದಾ ಇದ್ದೇ ಇರುತ್ತದೆ ಎಂದರು.

ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಸ್ವಾಮಿ ವಿವೇಕಾನಂದರ ಸರ್ವತೋಮುಖ ಜನ ಸೇವಾಭಿವೃದ್ಧಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದಲ್ಲಿ ನಿರ್ಗತಿಕ ಕಡುಬಡವರಿಗೆ ಆಹಾರ ವಿತರಣೆ ಜೊತೆಗೆ ವಯೋವೃದ್ಧರಿಗೆ ಮಹಿಳೆಯರಿಗೆ ಬಟ್ಟೆ ವಿತರಣೆ ಮಾಡಲಾಗಿದೆ ಮಲ್ಲೇಶ್ವರ ಕಾರ್ಯ ಶ್ಲಾಘನೀಯ, ನಮ್ಮ ಕೈಲಾದ ಸೇವೆಯನ್ನು ಸಮಾಜಕ್ಕೆ ಮಲ್ಲೇಶ್ ಮುಖಾಂತರ ಮಾಡುತ್ತಿರುವುದು ಸಂತಸ ತಂದಿದೆ ಎಂದರು.

ನಾಯಕ ನಟ ಹಾಗೂ ನಿರೂಪಕ ರಾಕೇಶ್ ರಾಮೇಗೌಡ ಮಾತನಾಡಿ ಇದೊಂದು ಹೆಮ್ಮೆಯ ಸಂಗತಿ ಪ್ರತಿನಿತ್ಯ ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ವಿತರಣೆ ಮಾಡುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರುವ ಮಲ್ಲೇಶ್ ರವರ ಸಂಗಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ನಮ್ಮ ಪುಣ್ಯ ಎಂದರು ಹಾಗೂ ಇಂತಹ ಉತ್ತಮ ಕಾರ್ಯಕ್ರಮವು ನಿತ್ಯ ನಿರಂತರ ಸಾಗಲಿ ಎಂದು ಹಾರೈಸಿದರು.

ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜು ಮಾತನಾಡಿ ಈ ಕಾರ್ಯಕ್ರಮದಲ್ಲಿ ಆಹಾರ ಪಡೆಯಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಾನಿಗಳ ಅವಶ್ಯಕತೆ ಹೆಚ್ಚಾಗಿದೆ , ಯುವ ಸಮುದಾಯವು ತಮ್ಮ ವಿಶೇಷ ದಿನಗಳನ್ನು ಹುಟ್ಟು ಹಬ್ಬದ ಆಚರಣೆಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಸಂಭ್ರಮಾಚರಣೆ ಮಾಡುವುದು ಉತ್ತಮ ನಿಮ್ಮಿಂದ ನೂರಾರು ಹಸಿದ ಹೊಟ್ಟೆಗಳಿಗೆ ಆಹಾರ ದೊರೆಯಲಿದೆ ಎಂದರು.
ಕಾರ್ಯಕ್ರಮದ ಆಯೋಜಕ ಮಲ್ಲೇಶ್ ಮಾತನಾಡಿ ಕಾರ್ಯಕ್ರಮವು ತಾಲೂಕಿನ ಎಲ್ಲಾ ಸಂಘಟನೆಗಳು ಹಾಗೂ ದಾನಿಗಳ ನೆರವಿನಿಂದ ವಕೀಲರಾದ ರವಿಮಾವಿನಕುಂಟೆ ಅನುಪಸ್ಥಿತಿಯಲ್ಲಿ ಹಲವು ಪ್ರಮುಖರ ಸಹಾಯಸ್ತದೊಂದಿಗೆ ಹಸಿದವರಿಗೆ ಆಹಾರ ವಿತರಣೆ ಮಾಡುವ ಕಾರ್ಯಕ್ರಮವು ಹಬ್ಬದಂತೆ ನಡೆದಿದೆ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದರು.

ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಕಲಾವಿದರ ಸಂಘದ ಅಧ್ಯಕ್ಷರಾದ ಎ. ಸಿ ಅಶೋಕ್, ವಿಶ್ವ ಮಾನವ ಡಾ.ರಾಜಕುಮಾರ್ ಸಂಘದ ರಾಜ್ಯಾಧ್ಯಕ್ಷರಾದ ಬನಾಮು ರಾಜು, ಮುಖಂಡರಾದ ರಂಗಸ್ವಾಮಿ, ಸಂಗೀತಾ ನಿರ್ದೇಶಕ ರಾಜನ್ ನಾಗೇಂದ್ರ ರವರ ಧರ್ಮಪತ್ನಿ ಜಯಲಕ್ಷ್ಮಮ್ಮ , ಚಿತ್ರ ನಟಿ ಮೈಸೂರ್ ಮಂಜುಳಾ,ಚಿತ್ರ ನಟ ನಾಗರಾಜ್, ನಿರೂಪಕ ಹಾಗೂ ನಟರಾದ ರಾಕೇಶ್ ರಾಮೇಗೌಡ, ನಿರೂಪಕಿ ಹಾಗೂ ನಟಿ ಸುಷ್ಮಾ ಗೌಡ, ನಾಗರಾಜು, ಬಿಎಂಟಿಸಿ ಚಾಲಕ ಸೇಲ್ವಮ್ ರವರ ಕುಟುಂಬಸ್ಥರು, ನಮ್ಮ ಜೇನುಗೂಡು ತಂಡದ ಎಲ್ಲಾ ಸದಸ್ಯರು ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
