
ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ನಾಳೆ(೦೪-೧೨-೨೦೨೩) ರಂದು ಕನ್ನಡದ ಹೆಮ್ಮೆಯ ದೊರೆ, ನೌಕಾಪಡೆಯ ಪಿತಾಮಹ ಎಂದೇ ಪ್ರಸಿದ್ದಿ ಪಡೆದಿರುವ ಶ್ರೀ ಇಮ್ಮಡಿ ಪುಲಿಕೇಶಿ ಮಹಾರಾಜರ ಜಯಂತಿ ಅಂಗವಾಗಿ ಸಮಾಜಿಕ ಜಾಲತಾಣಗಳಲ್ಲಿ ಇಮ್ಮಡಿ ಪುಲಿಕೇಶಿ ಮಹಾರಾಜರ ಇತಿಹಾಸವನ್ನು ತಿಳಿಸುವುದರ ಜೊತೆಗೆ ಬೆಳ್ಳಿಗೆ 9:00ಗಂಟೆಯಿಂದ ರಾತ್ರಿ 9 :00 ಗಂಟೆಯ ವರೆಗೆ ಟ್ವಿಟ್ಟರ್ ಅಭಿಯಾನ ನೆಡೆಸಲು ಕನ್ನಡಿಗರಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಪರ ಸಂಘಟನೆಗಳ ಒಕ್ಕಟ)ಮನವಿ ಮಾಡಿದೆ . ಕನ್ನಡ ನಾಡಿನ ಅಸ್ಮಿತೆಯ ಪ್ರತೀಕವಾದ ಇಮ್ಮಡಿ ಪುಲಿಕೇಶಿಯವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಿ ಸಂಭ್ರಮಿಸೋಣ ಎಂದು ಕರವೇ ತನ್ನ ಎಕ್ಸ್ ಸಂದೇಶದಲ್ಲಿ ಬರೆದು ಕೊಂಡಿದೆ