
ದೊಡ್ಡಬಳ್ಳಾಪುರ : ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಇವರ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಕಸಬಾ ಹೋಬಳಿಯ ದೊಡ್ಡರಾಯಪ್ಪನ ಹಳ್ಳಿ ಗ್ರಾಮದಲ್ಲಿ ಅಂತಿಮ ವರ್ಷದ ಬಿ ಎಸ್ಸಿ (ಅನರ್ಸ್ )ಕೃಷಿ ಮತ್ತು ಬಿ ಎಸ್ಸಿ (ಅನರ್ಸ್ )ಕೃಷಿ ವ್ಯವಹಾರ ನಿರ್ವಹಣೆ ಮತ್ತು ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯನುಭವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು
ಕಾರ್ಯಕ್ರಮದಲ್ಲಿ ವಿಶೇಷವಾಗಿ ಬರಡು ರಾಸುಗಳ ತಪಾಸಣೆ ಹಾಗೂ ಅರೋಗ್ಯ ಚಿಕಿತ್ಸೆ ಶಿಬಿರದ ಜೊತೆಗೆ ಜಂತು ನಿವಾರಣೆ, ಗರ್ಭಪರೀಕ್ಷೆ, ಲಸಿಕೆಗಳ ಮಾಹಿತಿ ನೀಡಲಾಯಿತು ತಪಾಸಣಾ ಶಿಬಿರಕ್ಕೆ ಹಲವಾರು ಡಾ ರವೀಂದ್ರ, ಡಾ ಬಿ ಆರ್ ಸುಚಿತ್ರ, ಡಾ ನರಸಿಂಹಮೂರ್ತಿ ಸೇರಿದಂತೆ ಹಲವಾರು ತಜ್ಞರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.
ಸ್ಥಳೀಯ ರೈತರು ಮಾತನಾಡಿ ಕೃಷಿ ವಿಶ್ವವಿದ್ಯಾನಿಲಯ ಆಯೋಜನೆ ಮಾಡಿರುವ ಈ ಕಾರ್ಯಕ್ರಮ ತುಂಬಾ ಅನುಕೂಲವಾಗಿದೆ ರಾಸುಗಳ ಮೇವು ಆರೈಕೆ ಕುರಿತು ಸಂಪೂರ್ಣ ಮಾಹಿತಿ ನೀಡುತ್ತಿದ್ದು. ಲಸಿಕೆಗಳ ಬಗ್ಗೆ ಹಾಗೂ ರಾಸುಗಳಿಗೆ ಸೋಕಬಹುದಾದ ಖಾಯಿಲೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದಾರೆ ದೊಡ್ಡರಾಯಪ್ಪನಹಳ್ಳಿ ಯಲ್ಲಿ ಆಯೋಜನೆ ಮಾಡಿರುವ ಈ ಕಾರ್ಯಕ್ರಮವು ಉತ್ತಮ ರಾಸುಗಳ ನಿರ್ವಹಣೆಗೆ ಸಹಕರಿಯಾಗಲಿದೆ ಎಂದು ತಿಳಿಸಿದರು
ದೊಡ್ಡ ರಾಯಪ್ಪನಹಳ್ಳಿ ರೈತರು ಹಾಗೂ ತಾಲೂಕಿನ ಹಲವು ಭಾಗಗಳಿಂದ ರೈತರು ತಮ್ಮ ರಾಸುಗಳೊಂದಿದೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು