
ದೊಡ್ಡಬಳ್ಳಾಪುರ : ಶ್ರೀ ಹುಲುಕುಡಿ ಸುಕ್ಷೇತ್ರದಲ್ಲಿ ಶ್ರೀ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಳಮ್ಮ ನವರ 13 ನೇ ವರ್ಷದ ಕಾರ್ತಿಕ ಮಾಸದ ಕಡೆ ಮಂಗಳವಾರ ಡಿಸೆಂಬರ್ 12 ರಂದು ಸಂಜೆ 6: 30 ಕ್ಕೆ ಕಾರ್ತಿಕ ದೀಪೋತ್ಸವ ಹಾಗೂ ಮುತ್ತಿನ ಪಲ್ಲಕ್ಕಿ ಉತ್ಸವ ಆಯೋಜನೆ ಮಾಡಲಾಗಿದೆ
ಈ ಕುರಿತು ಮಾಹಿತಿ ನೀಡಿರುವ ದೇವಾಲಯದ ಆಡಳಿತ ಮಂಡಳಿ ಬೆಳ್ಳಿಗೆ 10 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಿ ರಾತ್ರಿ ಎಂಟು ಗಂಟೆಯವರೆಗೂ ನಡೆಯಲಿದ್ದು ಬರುವ ಭಕ್ತಾದಿಗಳಿಗೆ ರಾತ್ರಿ 8 ಗಂಟೆಗೆ ಟ್ರಸ್ಟ್ ವತಿಯಿಂದ ದಾಸೋಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದೆ