
ದೊಡ್ಡಬಳ್ಳಾಪುರ : ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಗಿದ್ದು ತಾಲ್ಲೂಕಿನಲ್ಲಿ ನೊಂದ ದಲಿತರ ಶಕ್ತಿಯಾಗಿ ಶ್ರಮಿಸಲಿದ್ದೇವೆ ತಾಲ್ಲೂಕಿನಲ್ಲಿ ದಲಿತರು ಶೋಷಣೆಗೆ ಒಳಗಾಗುತ್ತಿದ್ದಾರೆ ನೊಂದವರ ,ದಲಿತರ ದ್ವನಿಯಾಗಿ ನಮ್ಮ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯ ನಿರ್ವಹಿಸಲಿದೆ ಎಂದು ತಾಲ್ಲೂಕು ಘಟಕದ ನೂತನ ಅಧ್ಯಕ್ಷ ರಾಮು ತಿಳಿಸಿದರು
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ದೊಡ್ಡಬಳ್ಳಾಪುರ ತಾಲ್ಲೂಕು ಹಾಗೂ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು ತಾಲ್ಲೂಕಿನಲ್ಲಿ ನಮ್ಮ ಸಂಘಟನೆ ಬಲಿಷ್ಠಗೊಂಡಿದೆ ಮುಂದೆ ದಲಿತರ ಕುಂದು ಕೊರತೆಗಳನ್ನು ಸರಿಪಡಿಸುವಲ್ಲಿ ಸಂಘಟನೆ ವತಿಯಿಂದ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು . ಮುಂದೆ ಹೋಬಳಿ ಮಟ್ಟದಲ್ಲಿ ಕುಂದು ಕೊರತೆ ಸಭೆಗಳನ್ನು ಆಯೋಜನೆ ಮಾಡುವ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು ಇದರೊಟ್ಟಿಗೆ ಸಂಘಟನೆಯನ್ನು ಮತ್ತಷ್ಟು ಬಲಿಷ್ಠ ಗೊಳಿಸಲಾಗುವುದು ಎಂದು ತಿಳಿಸಿದರು
ತಾಲ್ಲೂಕು ಸಂಚಾಲಕರಾಗಿ ರಾಮಮೂರ್ತಿ ನೇರಳೆ ಘಟ್ಟ ( ರಾಮು) , ತಾಲ್ಲೂಕು ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ ಎಂ ಕೆ ಮಾಡೇಶ್ವರ ,ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ , ಆನಂದ್ ಸಕ್ಕರೆ ಗೊಲ್ಲಹಳ್ಳಿ ,ರಮೇಶ್ ಹಾಲೇನಹಳ್ಳಿ , ಕುಮಾರ್ ತೂಬಕುಂಟೆ ,ನಗರ ಘಟಕದ ಸಂಚಾಲಕರಾಗಿ ಶಿವಶಂಕರ್ ಕಚೇರಿಪಾಳ್ಯ, ಸಹಸಂಚಾಲಕರಾಗಿ ನರಸಿಂಹಯ್ಯ, ಹನುಮಂತರಾಜು, ವೆಂಕಟೇಶ್ , ದೊಡ್ಡ ಬೆಳವಂಗಲ ಹೋಬಳಿ ಸಂಚಾಲಕರಾಗಿ ನಾರಾಯಣ, ಗಂಗಣ್ಣ ಕತ್ತಿಹೊಸಹಳ್ಳಿ , ಗೌರವ ಸಂಚಾಲಕರಾಗಿ ನಂದಕುಮಾರ್ ,ಬೈಲಪ್ಪ ಸಹ ಸಂಚಾಲಕರಾಗಿ ವೆಂಕಟರಾಮಯ್ಯ , ಬಿ.ಹನುಮಯ್ಯ , ಮಾರಣ್ಣ , ಮಧುರೆ ಹೋಬಳಿ ಘಟಕದ ಸಂಚಾಲಕರಾಗಿ ಹನುಮಂತರಾಜು ಕಾಡನೂರು,ಹನುಮಂತರಾಯಪ್ಪ ಗಂಡ್ರಗೂಳಿಪುರ,ಅಶ್ವಥ್ ,ಮಹೇಂದ್ರ ,ಪ್ರದೀಪ್, ಸಾಸಲು ಸಂಚಾಲಕರಾಗಿ ಕೃಷ್ಣಪ್ಪ ಜಾಲಗೆರೆ, ಆನಂದ್, ಹನುಮಂತರಾಜು ,ದೇವರಾಜ್,
ಚಂದ್ರಪ್ಪ, ತೂಬಗೆರೆ ಹೋಬಳಿ ಸಂಚಾಲಕರಾಗಿ ಮೈಲಾರಪ್ಪ ನಂದಿಗುಂದ, ಮಾರಪ್ಪ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಂಚಾಲಕರಾದ ಎಂ ಪಿ ಗಂಗಾಧರ್ ತಿಳಿಸಿದರು.
ಜಿಲ್ಲಾ ಸಂಚಾಲಕರಾದ ಎಂಪಿ ಗಂಗಾಧರ್ ಮಾತನಾಡಿ ನೂತನ ಪದಾಧಿಕಾರಿಗಳಿಗೆ ಶುಭವಾಗಲಿ ದೊಡ್ಡಬಳ್ಳಾಪುರ ತಾಲ್ಲೂಕು ಗ್ರಾಮಗಳಿಂದ ಕೂಡಿದ್ದು ಹೋಬಳಿ ಮಟ್ಟದ ಪದಾಧಿಕಾರಿಗಳು ತಾಲ್ಲೂಕು ಘಟಕದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸ್ಥಳೀಯವಾಗಿ ದಲಿತರ ಕುಂದು ಕೊರತೆಗಳನ್ನು ಅರಿತು ತ್ವರಿತವಾಗಿ ಸ್ಪಂದಿಸುವ ಕಾರ್ಯ ಆಗಬೇಕಿದೆ ತಾಲ್ಲೂಕಿನಲ್ಲಿ ಹಲವು ಸಮಸ್ಯೆಗಳಿದ್ದು ದಲಿತರ ಪರ ಧ್ವನಿಯಾಗಿ ನಮ್ಮ ನೂತನ ಪದಾಧಿಕಾರಿಗಳು ಶ್ರಮಿಸಲಿ ಸ್ಥಳೀಯವಾಗಿ ಸಂಘಟನೆ ಜನತೆಯ ಮನಸ್ಸನ್ನು ಗೆಲ್ಲಲಿ ಸಮಾಜದ ಕುಂದು ಕೊರತೆಗಳನ್ನು ಸರಿಪಡಿಸುವಲ್ಲಿ ನಮ್ಮ ಸಂಘಟನೆಯ ಪಾತ್ರ ಪ್ರಮುಖವಾದದ್ದು ಪ್ರೊಫೆಸರ್ ಬಿ ಕೃಷ್ಣಪ್ಪರವರ ಆಶಯದಂತೆ ಸಂಘಟನೆಯು ಉತ್ತಮ ರೀತಿಯಲ್ಲಿ ಸಾಗಲಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಘಟಕದ ಸಕ್ಕರೆ ಗೊಲ್ಲಹಳ್ಳಿ ಹನುಮಂತಯ್ಯ, ದೊಡ್ಡಯ್ಯ ಲಿಂಗಾಪುರ, ನರೇಂದ್ರ ಮಾಡೇಶ್ವರ, ಹನುಮಯ್ಯ ಸಕ್ಕರೆ ಗೊಲ್ಲಹಳ್ಳಿ, ರಮೇಶ್ ಹಾಲೇನಹಳ್ಳಿ, ನರಸಿಂಹಮೂರ್ತಿ ದೊಡ್ಡ ಕುಕ್ಕನಹಳ್ಳಿ, ಆನಂದ್ ಸಕ್ಕರೆ ಗೊಲ್ಲಹಳ್ಳಿ ಹಾಗೂ ಸಂಘಟನೆಯ ತಾಲ್ಲೂಕು ಹೋಬಳಿ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು