
ಸತತವಾಗಿ 10ವರ್ಷಗಳಿಂದ ಶ್ರಮ ಪಡುತ್ತಿದ್ದೇವೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ನಮ್ಮ ದೇವಾಲಯಕ್ಕೆ ದಾನಿಗಳ ಅವಶ್ಯಕತೆ ಇದ್ದು ದೈವ ಕಾರ್ಯಕ್ಕೆ ಸಹಕಾರ ನೀಡಿ ಎಂದು ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟೇಶ್ ಮನವಿ ಮಾಡಿದರು.
ದೇವಾಲಯವು ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು ದಾನಿಗಳ ನೆರವಿನಿಂದ ಅಯ್ಯಪ್ಪ ಸ್ವಾಮಿ ದೇವಾಲಯವು ಶೇಕಡಾ 75 ರಷ್ಟು ಪೂರ್ಣಗೊಂಡಿದೆ. ಆದರೆ ಹಣದ ಕೊರತೆಯಿಂದ ಉಳಿದ ಕಾಮಗಾರಿ ಮಾಡಲು ಸಾಧ್ಯವಾಗದೆ ದೇವಾಲಯದ ಕಾಮಗಾರಿ ಅರ್ಧಕ್ಕೆ ನಿಂತುಬಿಟ್ಟಿದೆ. ದೇವಾಲಯ ಪೂರ್ಣಗೊಳಿಸಲು ದಾನಿಗಳ ನೆರವು ಅವಶ್ಯಕವಿದ್ದು ಆಸಕ್ತರು ವೆಂಕಟೇಶ್ ರವರನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ
ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರಾದ ವೆಂಕಟೇಶ್ ಮಾತನಾಡಿ ಹಲವಾರು ಕಳೆದ ಹತ್ತು ವರ್ಷಗಳಲ್ಲಿ ದಾನಿಗಳ ನೆರವಿನಿಂದ ನಮ್ಮ ಶಕ್ತಿ ಮೀರಿ ಪ್ರಯತ್ನ ಪಟ್ಟು ದೇವಾಲಯ ನಿರ್ಮಾಣ ಮಾಡಿದ್ದೇವೆ ಆದರೆ ದೇವಾಲಯದ ಕಾರ್ಯ ಇನ್ನು ಪೂರ್ಣಗೊಂಡಿಲ್ಲ ದೇವಾಲಯದ ಹಲವು ಕಾರ್ಯಗಳು ಬಾಕಿ ಇದ್ದು ದಾನಿಗಳ ನೆರವಿನ ಅವಶ್ಯಕತೆ ಇದೆ. ದಾನಿಗಳು ತಮ್ಮ ಕೈಲಾದ ಸಹಾಯವನ್ನು ದೇವಾಲಯದ ಮಂಡಳಿಗೆ ಸಲ್ಲಿಸುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.
ದಾನಿಗಳ ಸಹಾಯಕ್ಕಾಗಿ ಮಾಹಿತಿ :
ಅಯ್ಯಪ್ಪ ಸ್ವಾಮಿ ದೇವಾಲಯ, ತೂಬಗೆರೆ
ವೆಂಕಟೇಶ್ ಅಧ್ಯಕ್ಷರು
ಆಡಳಿತ ಮಂಡಳಿ
ದೂ. ಸಂಖ್ಯೆ : 9591064333