
ದೊಡ್ಡಬಳ್ಳಾಪುರ ಮಾ.28 : ಸಾಲ ಮಾಡಿ ಮನೆ ನವೀಕಾರಣ ಮಾಡಿದ್ದೇವೆ. ಇನ್ನೂ ಸಾಲ ತಿರಿಸಿಲ್ಲ ಆಗಲೇ ನಮ್ಮ ಮನೆಯನ್ನು ಜೆ ಸಿ ಬಿ ಯಿಂದ ಹೊಡೆದು ಹುರುಳಿಸಿದ್ದಾರೆ ಎಂದು ಮನೆ ಮಾಲೀಕರಾದ ಭಾಗ್ಯಲಕ್ಷ್ಮಿ ಆರೋಪಿಸಿದ್ದಾರೆ.
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ಶ್ರೀನಿವಾಸ್ ಮತ್ತು ಭಾಗ್ಯಲಕ್ಷ್ಮಿ ಕುಟುಂಬ ಮನೆಯ ವಿಚಾರವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು. ಶ್ರೀನಿವಾಸ್ ಸಹೋದರ ಸಂಪತ್ ಕುಮಾರ್ ಮನೆ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ನ್ಯಾಯಾಲಯದಲ್ಲಿ ಈ ಕುರಿತು ದಾವೆ ಹುಡಿದ್ದರೂ ಸತತವಾಗಿ ಸಂಪತ್ ಕುಮಾರ್ ನಿತ್ಯ ನಿರಂತರ ಮನೆಯನ್ನು ಕಸಿಯಲು ಪ್ರಯತ್ನನಿಸುತ್ತಿದ್ದು. ಈ ಕುರಿತು ನ್ಯಾಯ ಒದಗಿಸುವಂತೆ ಗ್ರಾಮಾಂತರ ಠಾಣೆ ಮೆಟ್ಟಿಲೇರಿದ್ದಾರೆ.
ಮನೆಯಲ್ಲಿದ ದಿವಾನ, ಕುರ್ಚಿ, ಬೀರು ಸೇರಿದಂತೆ ಹಲವು ಪಿಟೋಪಕಾರಣಗಳನ್ನ ಹಾಗೂ ಮನೆಯ ಕಿಟಕಿ,ಬಾಗಿಲು ಟೈಲ್ಸ್ ದ್ವಾಂಸಗೊಳಿಸಿದ್ದಾರೆ.ನಮ್ಮಗೆ ಯಾವುದೇ ಮಾಹಿತಿ ನೀಡಿಲ್ಲ ಕನಿಷ್ಠ ಪಕ್ಷ ಮಾಹಿತಿ ನೀಡಿದ್ದರೆ ನಾವು ಅವನಾದರೂ ಉಳಿಸಿಕೊಳ್ಳುತ್ತಿದೇವು. ನ್ಯಾಯಾಲಯದಲ್ಲಿ ದಾವೆ ನೆಡೆಯುತ್ತಿದ್ದರು ಇವರ ಅಟ್ಟಹಾಸಕ್ಕೆ ಕೊನೆಯಿಂಲ್ಲದಂಥಗಿದೆ. ಪೊಲೀಸ್ ಕೋರ್ಟ್ ಎಂಬ ಭಯವೇ ಇಲ್ಲದ ಇವರಿಗೆ ತಕ್ಕ ಪಾಠ ಪೊಲೀಸ್ ಇಲಾಖೆ ಕಲಿಸಬೇಕಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು
ಶ್ರೀನಿವಾಸ್ ಮಾತನಾಡಿ ಸಹೋದರನ ಮೋಸದ ಫಲ ನಾವು ಇಂದು ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ ನಮ್ಮ ಭಾಗದ ಮನೆಯನ್ನು ನಮ್ಮಿಂದ ಮೋಸ, ಹಾಗೂ ದೌರ್ಜನ್ಯದ ಮೂಲಕ ಕಸಿದುಕೊಳ್ಳಲು ಪ್ರಯತ್ನನಿಸುತ್ತಿದರೆ ನಮಗೆ ನ್ಯಾಯಕೊಡಿ ಎಂದು ತಮ್ಮ ನೋವನ್ನು ವ್ಯಕ್ತಪಡಿಸಿದರು
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಂಪತ್ ಕುಮಾರ್ ರನ್ನು ಪೊಲೀಸ್ ವಶಕ್ಕೆ ಪಡೆದಿದ್ದಾರೆ, ತನಿಖೆ ನಂತರ ಸತ್ಯ ಸತ್ಯತೆ ಹೊರಬೀಳಬೇಕಿದೆ.