
ದೊಡ್ಡಬಳ್ಳಾಪುರ ಏಪ್ರಿಲ್ 02 ( ವಿಜಯಮಿತ್ರ ) : ಪ್ರಣಾಳಿಕೆಯಲ್ಲಿ ಘೋಷಣೆಮಾಡಿದ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೇವಲ ಎರಡು ತಿಂಗಳಿನಲ್ಲಿ ಈಡೇರಿಸಿದೆ. ಬಡವರ ಅಭಿವೃದಿಗಾಗಿ ಶ್ರಮಿಸುವ ಏಕೈಕ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಮ್ಮೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತಯಾಚನೆ ಮಾಡಿ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ರಕ್ಷಾ ರಾಮಯ್ಯ ತಿಳಿಸಿದರು.
ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶ ಕಟ್ಟಿದ ಪಕ್ಷ ನಮ್ಮ ಕಾಂಗ್ರೆಸ್ ಪಕ್ಷ. ಬಡವರ ಕಷ್ಟವನ್ನು ಅರಿತು ಉತ್ತಮ ಯೋಜನೆಗಳನ್ನು ರೂಪಿಸಿದ ಪಕ್ಷ ನಮ್ಮದಾಗಿದ್ದು.ಈ ಬಾರಿಯ ಲೋಕಸಭಾ ಚುನಾವಣೆ ಬಹಳ ಮಹಾತ್ವದಗಿದ್ದು ಭ್ರಷ್ಟರ ವಿರುದ್ಧ ನಮ್ಮ ಹೋರಾಟ ನೆಡೆಸಬೇಕಿದೆ . ಸಂವಿಧಾನವನ್ನು ಬದಲಿಸುವ ಯೋಚನೆ ಬಿಜೆಪಿನಾಯಕರದ್ದು ಆದರೆ ನೆನಪಿರಲಿ ನಮ್ಮ ಸಂವಿಧಾನ ನಮ್ಮ ಹಕ್ಕು. ಬಿಜೆಪಿ ಪಕ್ಷವು ಬಡವರ ವಿರೋಧಿ ಪಕ್ಷವಾಗಿದೆ. ಕೋವಿಡ್ ಸಮಯದಲ್ಲಿ ದೇಶ ನಿರ್ವಹಣೆ ಮಾಡುವಲ್ಲಿ ಸೋತಿರುವ ಬಿಜೆಪಿ ಸರ್ಕಾರಕ್ಕೆ ಮತ ನೀಡುವುದು ಸೂಕ್ತವಲ್ಲ ಎಂದರು.
*ಚುನಾವಣೆಯ ಅಭ್ಯರ್ಥಿ ನನ್ನಲ್ಲ*
ಚುನಾವಣೆಯ ಅಭ್ಯರ್ಥಿ ನನ್ನಲ್ಲ.. ಕ್ಷೇತ್ರದ ಅಭಿವೃದ್ಧಿ ಬಯಸುವ ಪ್ರತಿ ಮತದಾರರು ಅಭ್ಯರ್ಥಿಗಳೇ.. ಕಾಂಗ್ರೆಸ್ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದಿರುವ ಪ್ರತಿ ಫಲನುಭವಿಯು ಅಭ್ಯರ್ಥಿಯೇ ಆಗಿದ್ದರೆ ಎಂದರು.
*ಸುಧಾಕರ್ ವಿರುದ್ಧ ಸ್ವಪಕ್ಷದ ಕಾರ್ಯಕರ್ತರಿಂದಲೇ ಗೋ ಬ್ಯಾಕ್ ಅಭಿಯಾನ*
ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್ ಹಲವು ಹಗರಣಗಳಲ್ಲಿ ಭಾಗಿಯಾಗಿರುವ ಆರೋಪಗಳು ಕೇಳಿ ಬರುತ್ತಿದ್ದು ಅವರ ವಿರುದ್ಧ ಸ್ವಪಕ್ಷದ ಬಿಜೆಪಿ ಕಾರ್ಯಕರ್ತರೆ “ಗೋ ಬ್ಯಾಕ್” ಅಭಿಯಾನ ನೆಡೆಸುತ್ತಿದ್ದಾರೆ.
*ಸದಾ ಯುವಕರನ್ನು ಟಾರ್ಗೆಟ್ ಮಾಡೋ ನಾಯಕರು*
ಚಿಕ್ಕಬಳ್ಳಾಪುರದ ಜನತೆ ಕಳೆದ 10 ತಿಂಗಳಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಮೊದಲೆಲ್ಲ ಯಾವುದೇ ತಪ್ಪು ಮಾಡದಿದ್ದರೂ ಪೊಲೀಸ್ ಕೇಸ್ ಹಾಕಿಸಿಕೊಳ್ಳುವ ಭಯದಿಂದ ಜೀವನ ಸಾಗಿಸುತ್ತಿದ್ದ ಸಾರ್ವಜನಿಕರು ಇಂದು ಯಾವುದೇ ಕೇಸ್ ಇಲ್ಲದೇ ನೆಮ್ಮದಿಯಾಗಿದ್ದಾರೆ ಇದು ನಮ್ಮ ಚಿಕ್ಕಬಳ್ಳಾಪುರದ ಸಾಧನೆ…
ದೊಡ್ಡಬಳ್ಳಾಪುರ ಕ್ಕೆ ಮೆಟ್ರೋ ಪ್ರಾಜೆಕ್ಟ್…
ತಾಲ್ಲೂಕಿನ ಅಭಿವೃದ್ಧಿಗೆ ಸದಾ ಶ್ರಮಿಸುವ ಮಾಜಿ ಶಾಸಕ ಟಿ. ವೆಂಕಟರಮಣಯ್ಯ ತಾಲ್ಲೂಕಿಗೆ ಮೆಟ್ರೋ ಯೋಜನೆಕೊಡುವಂತೆ ಮನವಿ ಮಾಡಿದ್ದಾರೆ ಅವರ ಕಾಲದಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಹಲವಾರು ಅಭಿವೃದ್ದಿ ಯೋಜನೆಗಳು, ಕಾಮಗಾರಿಗಳು ಚಾಲನೆಗೊಂಡಿದ್ದು. ಮುಂದೆ ಮತೊಮ್ಮೆ ದೊಡ್ಡಬಳ್ಳಾಪುರ ತಾಲ್ಲೂಕು ಕಾಂಗ್ರೆಸ್ ಭದ್ರಕೋಟೆಯಾಗುವುದರಲ್ಲಿ ಸಂಶಯವಿಲ್ಲ ಎಂದರು.
ವಿಧಾನಪರಿಷತ್ ಸದಸ್ಯ ಎಸ್. ರವಿ ಮಾತನಾಡಿ ಕಳೆದ ಬಾರಿ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನೆಡೆದರು ಮತದಾರರು ಆಮಿಷಗಳಿಗೆ ಬಲಿಯಾಗಿ ಅನ್ಯ ಪಕ್ಷಕ್ಕೆ ಮತ ನೀಡುವ ಮೂಲಕ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಳ್ಳಲು ಕಾರಣಕರ್ತರಾಗಿದ್ದಾರೆ. ಸ್ಥಳೀಯವಾಗಿ ಮಾಜಿ ಶಾಸಕರ ಕೈ ಬಲ ಪಡಿಸಲು, ತಾಲ್ಲೂಕಿನ ಸಮಗ್ರ ಅಭಿವೃದಿಗಾಗಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಾ ರಾಮಯ್ಯ ಅವರನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.
ಮಾಜಿ ಶಾಸಕ ವೆಂಕಟರಾಮಣಯ್ಯ ಮಾತನಾಡಿ ಕಳೆದ 10ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಕೊಡುಗೆ ಏನಿದೆ. ಕೇವಲ ಬಂಡವಾಳ ಶಾಹಿಗಳ ಜೇಬು ತುಂಬಿಸುವ ಸರ್ಕಾರ ಈ ಬಿಜೆಪಿ ಸರ್ಕಾರ. ಕಾಂಗ್ರೆಸ್ ಪಕ್ಷ ಕಟ್ಟಿದ್ದ ಸಾರ್ವಜನಿಕ ಅಸ್ತಿಗಳನ್ನು ಖಾಸಗಿಕಾರಣದ ಹೆಸರಿನಲ್ಲಿ ಮಾರಾಟ ಮಾಡಿದ ಸರ್ಕಾರ ಬಿಜೆಪಿ.ರೈತರ,ಕೂಲಿ ಕಾರ್ಮಿಕ ವರ್ಗಾವನ್ನು ಹಾಳು ಮಾಡಿದ ಸರ್ಕಾರ ಬಿಜೆಪಿ ಸರ್ಕಾರ ಎಂದು ಆರೋಪಿಸಿದರು . ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮಾಡಿದ ಸಣ್ಣ ತಪ್ಪಿನಿಂದಗಿ ಇಂದು ನಮ್ಮ ತಾಲ್ಲೂಕು ಅಭ್ಯಾವೃದ್ಧಿಯಲ್ಲಿ 25ವರ್ಷಗಳಸ್ಟು ಹಿಂದೆ ಹೋಗಿದೆ. ಈ ಬಾರಿ ಮತ್ತೆ ಆ ತಪ್ಪನ್ನು ಮಾಡದಿರಿ ಎಂದರು. ಕಳೆದ 2ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಕಪ್ಪು ಹಣದ ಆರೋಪವನ್ನು ಅನ್ಯ ಪಕ್ಷಗಳ ಮೇರೆ ಹೇರುವ ಮೂಲಕ ಜನರನ್ನು ಮೋಸ ಮಾಡಿದ್ದಾರೆ.ಸುಳ್ಳು ಹೇಳುವ ಮೂಲಕ ಮತ ಪಡೆದು ವಂಚನೆ ಮಾಡುತ್ತಿದ್ದಾರೆ ಈ ಬಾರಿ ಜನತೆ ಪ್ರಜ್ಞಾವಂತರಾಗಿದ್ದು ಅವರನ್ನು ವಂಚಿಸಲು ಸಾಧ್ಯವಿಲ್ಲ ಎಂದರು
ಆಹಾರ ಸರಬರಾಜು ಸಚಿವ ಕೆ ಎಚ್ ಮುನಿಯಪ್ಪ ಮಾತನಾಡಿ ನಮ್ಮ ಯೋಜನೆಗಳು ರಾಜ್ಯದ 4.5ಕೋಟಿ ಜನತೆಗೆ ಒಂದಲ ಒಂದುರೀತಿಯಲ್ಲಿ ತಲುಪಿದೆ. ಈ ಬಾರಿ ಪಕ್ಷದ ಪ್ರತಿ ಮುಖಂಡರು ಹಾಗೂ ಕಾರ್ಯಕರ್ತರು
ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯಿಂದ ಮತ ಕೇಳಿ ಎಂದರು. ರಾಜ್ಯದ ಮಹಿಳೆಯರಿಗಾಗಿ ವಿಶೇಷ ಯೋಜನೆ ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿದ್ದೇವೆ.ನಿಮ್ಮ ಬೆಂಬಲದ ಅವಶ್ಯಕತೆ ಇದೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮೂಲಕ ಉತ್ತಮ ಆಡಳಿತ ಪಕ್ಷಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು. ನಮ್ಮ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾ ರಾಮಯ್ಯ ಉತ್ತಮ ಸ್ವಭಾವದವರಾಗಿದ್ದು.ಜನಸೇವೆಗಾಗಿ ಆಸ್ಪತ್ರೆ, ವಿದ್ಯಾಮಂದಿರಗಳ ನಿರ್ಮಾತೃ , ಎಂ ಎಸ್ ರಾಮಯ್ಯ ರವರ ಕುಟುಂಬದ ಕುಡಿಯಾಗಿದ್ದಾರೆ. ಅವರ ಕುಟುಂಬ ಸತತ ವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸೇವೆ ಸಲ್ಲಿಸಿದ್ದು. ರಕ್ಷಾ ರಾಮಯ್ಯ ದೂರ ದೃಷ್ಟಿಯುಳ್ಳ ಉತ್ತಮ ಪ್ರತಿಭಾನ್ವಿತ ನಾಯಕ ಎಂದರು. ಕ್ಷೇತ್ರದ ಅಭಿವೃದ್ಧಿಗಾಗಿ ಮತ ನೀಡುವಂತೆ ಮನವಿ ಮಾಡಿದರು.
*ಮಾಜಿ ಶಾಸಕ ವೆಂಕಟರಮಣಯ್ಯ ಬಗ್ಗೆ ಮಾತನಾಡಿದ ಕೆ ಎಚ್ ಮುನಿಯಪ್ಪ*
ದೇಶ ಹಾಗೂ ರಾಜ್ಯದಲ್ಲಿ ಎಂದು ಕಾಣಲು ಸಾಧ್ಯವಿಲ್ಲದ ವ್ಯಕ್ತಿತ್ವ ವೆಂಕಟರಮಣಯ್ಯ ಅವರದ್ದು ಅವರ ಆಡಳಿತವಧಿಯಲ್ಲಿ ಸರ್ಕಾರಿ ಸೇವೆಗಳನ್ನು ತಾಲ್ಲೂಕಿನ ಪ್ರತಿ ಗ್ರಾಮಗಳಿಗೆ ಹಾಗೂ ಪ್ರತಿ ಮತದಾರರಿಗೆ ತಲುಪಿಸಿದ ಒಬ್ಬ ನಾಯಕ. ಇಂದು ತಾಲ್ಲೂಕಿನ ಜಿಲ್ಲಾಸ್ಪತ್ರೆ ಉಳಿಯಲು ಅವರೇ ಕಾರಣ. ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಆಸ್ಪತ್ರೆ ಉಳಿವಿಗಾಗಿ ಕಣ್ಣೀರಿಟ್ಟ ನಾಯಕ ವೆಂಕಟರಮಣಯ್ಯ ಎಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ವಕ್ತಾರ ಜಿ. ಲಕ್ಷ್ಮೀಪತಿ, ಪಕ್ಷದ ಮುಖಂಡರಾದ ಚುಂಚೇ ಗೌಡ,ರಾಮಣ್ಣ, ರಾಮಕೃಷ್ಣಪ್ಪ, ಸತ್ಯನಾರಾಯಣ ಗೌಡ,ಬೈರೇಗೌಡ, ಕೃಷ್ಣಮೂರ್ತಿ, ವೆಂಕಟೇಶ್ (ಅಪ್ಪಿ ),ಆದಿತ್ಯನಾಗೇಶ್, ಅಂಜನ್ ಮೂರ್ತಿ, ರವಿ ಸಿದ್ದಪ್ಪ, ಡಾ. ಸೌಮ್ಯ, ಕೃಷ್ಣಮೂರ್ತಿ ಸೇರಿದಂತೆ ತಾಲ್ಲೂಕಿನ ಹಲವು ಮುಖಂಡರು ಉಪಸ್ಥಿತರಿದ್ದರು