
ದೊಡ್ಡಬಳ್ಳಾಪುರ : ತಾಲೂಕಿನ ಎಲ್ಲೆಡೆ ಮೊಹರಂ ಆಚರಣೆ ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗುತ್ತಿದೆ. ಇದೊಂದು ಹಿಂದೂ ಮುಸ್ಲಿಂ ಬಾಂಧವ್ಯಕ್ಕೆ ಸಂಕೇತವಾದ ಹಬ್ಬ ಎಂದರೆ ತಪ್ಪಾಗಲಾರದು.
ಅಂತಯೇ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ ಭಕ್ತಿ ಭಾವದಿಂದ ಅದ್ದೂರಿಯಾಗಿ ನಡೆದಿತ್ತು. ಆದರೆ ಕಾರ್ಯಕ್ರಮಕ್ಕೆ ಬಂದ ಅಪರಿಚಿತ ಯುವಕ ಎಲ್ಲರ ಸಂತೋಷವನ್ನು ಭಯವನ್ನಾಗಿ ಮಾರ್ಪಡಿಸಿದ್ದ… ಕಾರಣ ಅವನ ಬ್ಯಾಗ್ ನಲ್ಲಿದ್ದ ಮಾರಕಾಸ್ತ್ರ.
ಅಪರಿಚಿತ ಯುವಕನ ಬ್ಯಾಗ್ ನಲ್ಲಿ ಮಾರಕಾಸ್ತ್ರ ಕಂಡು ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಯುವಕನನ್ನು ಕೊ* ಮಾಡಲು ಹುನ್ನಾರ ನಡೆದಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದು.
ಯುವಕನನ್ನು (ಆರೋಪಿಯನ್ನು) ಗ್ರಾಮಸ್ಥರು ಹಿಡಿದು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ , ಪ್ರಕರಣ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಘಟನೆ ಕುರಿತಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಂತರ ಸತ್ಯ ಸತ್ಯತೆ ಹೊರಬೀಳಲಿದೆ .