
ದೊಡ್ಡಬಳ್ಳಾಪುರ ಆಗಸ್ಟ್ 31(ವಿಜಯಮಿತ್ರ): ನಾಡು ನುಡಿ ಭಾಷೆಗಾಗಿ ನಿಷ್ಠೆಯಿಂದ ಶ್ರಮಿಸುವ ಮನಸ್ಸುಗಳ ವೇದಿಕೆ ನಮ್ಮ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಕ್ಕಾಗಿ ದುಡಿಯುವ ಅವಕಾಶ ಕಲ್ಪಿಸಲಾಗಿದೆ ಈ ಅವಕಾಶವನ್ನು ಉತ್ತಮ ರೀತಿಯಲ್ಲಿ ಸದ್ವಿನಿಯೋಗ ಪಡಿಸಿಕೊಳ್ಳಬೇಕಿದೆ ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷ ಎ. ನಂಜಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು,ಕನ್ನಡ ಭಾಷೆ, ಕನ್ನಡ ನಾಡಿನ ರಕ್ಷಣೆ ನಮ್ಮೆಲ್ಲರ ಆಧ್ಯ ಕರ್ತವ್ಯವಾಗಬೇಕಿದೆ. ತಾಯಿ ಭುವನೇಶ್ವರಿ ಆಶೀರ್ವಾದ ನಮಗೆ ಒಂದು ವೇದಿಕೆ ಇದ್ದು ಕನ್ನಡ ಪರ ಮನಸ್ಸುಗಳನ್ನು ಒಗ್ಗೂಡಿಸುವ ಕಾರ್ಯ ನಮ್ಮಿಂದಾಗಿದೆ. ಮುಂದೆ ರಾಜ್ಯದ ಪ್ರತಿ ತಾಲ್ಲೂಕಿನಲ್ಲೂ ನಮ್ಮ ಸಂಘಟನೆ ತನ್ನ ಕಾರ್ಯ ಚಟುವಟಿಕೆ ಪ್ರಾರಂಭಿಸಲಿದ್ದು ನಿಮ್ಮೆಲ್ಲರ ಸಹಕಾರದ ಅವಶ್ಯಕತೆ ಇದೆ. ಕನ್ನಡ ನಮ್ಮದು, ನಮ್ಮ ಮಾತೃಭಾಷೆಯನ್ನು ಬಳಸಿ ಬೆಳಸುವ ನಿಟ್ಟಿನಲ್ಲಿ ಮುಂದಾಗೋಣ ಎಂದರು.
ಕನ್ನಡಕ್ಕೆ ದಕ್ಕೆಯಾದ ಸಂದರ್ಭದಲ್ಲಿ ನಾವು ಗಟ್ಟಿ ಧ್ವನಿಯಾಗಿ ನಿಲ್ಲುವ ಮೂಲಕ ಕನ್ನಡ ಭಾಷೆಯ ಶಕ್ತಿ ಪ್ರದರ್ಶನ ತೋರಬೇಕಿದೆ ಎಂದರು. ನೂತನವಾಗಿ ಅಧಿಕಾರ ಸ್ವೀಕರಿಸಿದ ಎಲ್ಲಾ ಪದಾಧಿಕಾರಿಗಳಿಗೆ ಶುಭ ಕೋರಿದರು.
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೊತ್ತೂರಪ್ಪ ಮಾತನಾಡಿ ಕನ್ನಡ ಎಂದರೆ ಬರಿ ಭಾಷೆಯಲ್ಲ ಒಂದು ಕನ್ನಡ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನಮ್ಮ ಪುಣ್ಯ, ನಮ್ಮನಾಳುವ ಸರ್ಕಾರಗಳು ಕನ್ನಡದ ಬಗ್ಗೆ ಭರವಸೆಗಳನ್ನು ಮಾತ್ರವೇ ನೀಡುತ್ತಾ ಬಂದಿವೆ,
ಆದರೆ ಸಂಪೂರ್ಣವಾಗಿ ಕಾರ್ಯಗತಗೊಳಿಸಲು ವಿಫಲವಾಗಿವೆ, ಇಂದಿಗೂ ಸಹ ಕನ್ನಡ ನಾಡು ನುಡಿಯ ವಿಚಾರವಾಗಿ ಹಲವಾರು ಕನ್ನಡ ಪರಸಂಘ ಸಂಸ್ಥೆಗಳು ಹೋರಾಟಗಳನ್ನ ನಡೆಸುತ್ತಲೇ ಇವೆ.ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ನೆಲ, ಜಲ, ನಾಡು,ನುಡಿ ಹಾಗೂ ನಮ್ಮ ಅಸ್ತಿತ್ವದ ಬಗ್ಗೆ ಕಳಕಳಿಯನ್ನು ತೋರುವ ಮೂಲಕ ಯಶಸ್ವಿಯಾಗಿ ಸಂಘಟನೆಯ ಹೆಸರು ಉಳಿಯುವಂತೆ ಶ್ರಮಿಸಿ ಎಂದರು.
ನಂತರ ಕನ್ನಡ ಪರಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ತರಿದಾಳ್ ಶ್ರೀನಿವಾಸ್ ಮಾತನಾಡಿ ನಮ್ಮ ಸುತ್ತಮುತ್ತಲಿನ ಜ್ವಲಂತ ಸಮಸ್ಯೆಗಳ ಬಗ್ಗೆ ಗಟ್ಟಿ ಧ್ವನಿಯಾಗಿ ಕೆಲಸ ಮಾಡುವ ಮೂಲಕ ಏನಾದರೂ ಸಾಧಿಸಲು ಸಾಧ್ಯ, ಆದ್ದರಿಂದ ಎಲ್ಲರೂ ಒಗ್ಗೂಡಿ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡಬೇಕು ಎನ್ನುವ ಮೂಲಕ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹದೇವ್ ಮಾತನಾಡಿ ಈ ಸುದಿನ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸರ್ವರಿಗೂ ಶುಭ ಹಾರೈಸುತ್ತೇನೆ, ಸಂಘಟನೆಯಲ್ಲಿ ಹುದ್ದೆ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ಜವಾಬ್ದಾರಿ, ನಿಮಗೆ ಸಿಕ್ಕ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುವ ಮೂಲಕ ಸಂಘಟನೆಗೆ ಉತ್ತಮ ಸ್ಥಾನ ಮನ ಕಲ್ಪಿಸಲು ಪದಾಧಿಕಾರಿಗಳು ಶ್ರಮಿಸಲಿ ಎಂದು ಹಾರೈಸಿದರು.
ರಾಜ್ಯ ಸಮಿತಿ ಪದಾಧಿಕಾರಿಗಳುಸಂಸ್ಥಾಪಕ ರಾಜ್ಯಾಧ್ಯಕ್ಷರಾಗಿ ಎ. ನಂಜಪ್ಪ,ರಾಮು.ಎಂ, ನಯಾಜ್ ಖಾನ್, ಸೋಮರಾಜು , ಗಂಗರಾಜು, ರಾಜ್ಯ ಯುವ ಘಟಕ ರಾಜ್ಯ ಸಮಿತಿಯ ಅಜಯ್, ಪೀರ್ ಪಾಷ
ಬೆಂಗಳೂರು ಗ್ರಾಮಾಂತರ ಜಿಲ್ಲೆಘಟಕದ ಪದಾಧಿಕಾರಿಗಳ ಪಟ್ಟಿ* ಬೆ.ಗ್ರಾ ಅಧ್ಯಕ್ಷರಾಗಿ, ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಪ್ರವೀಣ್ ಶಾಂತಿನಗರ , ಮಹಿಳಾ ಜಿಲ್ಲಾ ಅಧ್ಯಕ್ಷೇಯಾಗಿ ಶಶಿಕಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಖಾನಂ, ಬೆಂ.ಗ್ರಾ.ಜಿಲ್ಲಾ ಯುವ ಘಟಕದ ಜಿಲ್ಲಾ.ಫಣೀಶ್ ಪ್ರ.ಕಾ.ನವೀನ್ ಕುಮಾರ ದೊಡ್ಡಬಳ್ಳಾಪುರ ತಾಲ್ಲೂಕು ಅಧ್ಯಕ್ಷರಾಗಿ ಹರಿ ಕುಮಾರ್, ಪ್ರಧಾನ ಕಾರ್ಯದರ್ಶಿ .ಏನ್. ಚಂದ್ರಶೇಖರಯ್ಯಾ,ಮಹಿಳಾ ತಾಲ್ಲೂಕು ಅಧ್ಯಕ್ಷೆ ಕಾವ್ಯ
ದೊಡ್ಡಬಳ್ಳಾಪುರ ನಗರ ಅಧ್ಯಕ್ಷ ಚರಣ್ ಕುಮಾರ್ ವಿದ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷ ದರ್ಶನ್ ಸೇರಿದಂತೆ ಹಲವು ಪದಾಧಿಕಾರಿಗಳು ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಂಘಟನೆಯ ಹಲವು ಮುಖಂಡರು ಸದಸ್ಯರು ಉಪಸ್ಥಿತರಿದ್ದರು.