
ದೊಡ್ಡಬಳ್ಳಾಪುರ : ತಾಲ್ಲೂಕಿನ ದೊಡ್ಡತುಮಕೂರು ಗ್ರಾಮದಲ್ಲಿ ವ್ಯಸಂಗ ಮಾಡುತ್ತಿರುವ ಶಾಲಾ ಹಾಗೂ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸುವ ಮೂಲಕ 69 ನೇ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆಯನ್ನು ಮಾಡಲಾಯಿತು
ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುವ ಮೂಲಕ ಉತ್ತಮ ಆರೋಗ್ಯ ನಿರ್ವಹಣೆ ಕುರಿತು ಅರಿವು ಮೂಡಿಸಲಾಯಿತು
ಮುಖ್ಯ ಅತಿಥಿ ಗಳಾದ ಖ್ಯಾತ ವೈದ್ಯರು ಡಾ ಅಂಜಿನಪ್ಪ ಮಾತನಾಡಿ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ, ಭಾಷೆಯ ಜೀವಂತಿಕೆ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ, ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸುವ ಮೂಲಕ ಭಾಷೆ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ, ವ್ಯವಹಾರಿಕ ಅನುಕೂಲಕ್ಕಾಗಿ ಪರಭಾಷೆಯ ಅವಶ್ಯಕತೆ ಇದೆ ಆದರೆ ಸಾಧ್ಯವಾದಷ್ಟು ಹೆಚ್ಚಿನ ರೀತಿಯಲ್ಲಿ ಕನ್ನಡ ಭಾಷೆಯನ್ನು ಬಳಸುವ ಮೂಲಕ ಯುವ ಪೀಳಿಗೆಗೆ ಕನ್ನಡ ಭಾಷೆ ಕುರಿತು ವಿಶೇಷ ಅಭಿಮಾನ ಮೂಡಿಸಬೇಕಿದೆ ಎಂದರು .
ಸ್ಥಳೀಯ ಮುಖಂಡ ಟಿ.ಜಿ.ಮಂಜುನಾಥ್ ಮಾತನಾಡಿ ಕರುನಾಡಲ್ಲಿ ಹುಟ್ಟಿರುವುದು ನಮ್ಮೆಲ್ಲರ ಪುಣ್ಯ, ಕನ್ನಡ ಭಾಷೆ ಅನ್ಯ ಪರಭಾಷೆಗಳಿಗಿಂತ ಸುಂದರ ಹಾಗೂ ವಿಶೇಷತೆಗಳಿಂದ ಕೂಡಿದೆ, ಪ್ರಸ್ತುತ ದಿನಮಾನಗಳಲ್ಲಿ ಕನ್ನಡ ಭಾಷೆ ಮಾತನಾಡುವವರ ಸಂಖ್ಯೆ ಕುಗ್ಗುತ್ತಿದೆ , ಭಾಷೆಯನ್ನು ಉಳಿಸುವ ಅವಶ್ಯಕತೆ ಇಲ್ಲ, ನಾವೆಲ್ಲರೂ ಭಾಷೆಯನ್ನು ಉತ್ತಮ ರೀತಿಯಲ್ಲಿ ಬಳಸಿದರೆ ಭಾಷೆ ತಾನಾಗಿಯೇ ಬೆಳೆಯುತ್ತದೆ , ಕನ್ನಡ ಭಾಷೆಯ ಬಳಕೆ ಹೆಚ್ಚಾಗಬೇಕಿದೆ, ಕನ್ನಡ ಭಾಷೆಯನ್ನು ಹೆಚ್ಚು ಹೆಚ್ಚಾಗಿ ಬಳಸುವ ಮೂಲಕ ಹಾಗೂ ಇತರರಿಗೆ ಕಲಿಸುವ ಮೂಲಕ ಭಾಷೆಯ ಬೆಳವಣಿಗೆಗೆ ನಮ್ಮ ಸಣ್ಣ ಅಳಿಲುಸೇವೆಯನ್ನು ನೀಡೋಣ ಎಂದರು.
ಕಾರ್ಯಕ್ರಮದಲ್ಲಿ ಡಾ ನವೀನ್,ಡಾ ಆನಂದ್,ಟಿ ಜಿ ಮಂಜುನಾಥ್ (LIC), V ವೆಂಕಟೇಶ್,ಚೈತ್ರ ಭಾಸ್ಕರ್, ಟಿ ಎಂ ಪ್ರಭಾಕರ್, ಟಿ ಏನ್ ನಾಗರಾಜು ( babu), ಟಿ ಹೆಚ್ ಶಿವಕುಮಾರ್, ಚೈತ್ರ ಶ್ರೀಧರ್, ಮಂಜುನಾಥ್ (SST), ಮಹಾಲಕ್ಷ್ಮಮ್ಮ, ರಾಮಕೃಷ್ಣಪ್ಪ, ಗ್ರಾ ಪಂ ಸದಸ್ಯ ಪಿ ಲೋಕೇಶ್, ಮುನಿರಾಜು,ರಂಗಸ್ವಾಮಯ್ಯ, ಚನ್ನೇಗೌಡ,ಸ್ಥಳೀಯ ಮುಖಂಡರಾದ C ಚಿಕ್ಕಣಪ್ಪ (ಮಾಸ್ಟರ್), ಮುನಿರಾಜಪ್ಪ (ಮಾಸ್ಟರ್), ಸಿ.ರಾಮಕೃಷ್ಣಪ್ಪ, ದೀಪು,ಸುಬ್ಬರಾಜು,ಭಾಸ್ಕರ್, ಪ್ರಕಾಶ್, ಅಂಜಿನಮೂರ್ತಿ,ಅಜಯ್, ವಸಂತ್,ನವೀನ್,ರಘು,ಮೋಹನ್,ಲಕ್ಷ್ಮಣ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.