
ದೊಡ್ಡಬಳ್ಳಾಪುರ : ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಆಚರಿಸಲಾಯಿತು.
ತಾಲೂಕಿನ ದರ್ಗಾ ಜೋಗಹಳ್ಳಿಯಲ್ಲಿ ನಡೆಯುತ್ತಿರುವ 1774 ನೇ ದಿನದ ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಕರ್ನಾಟಕ ಜನಸೇನೆ ಕಾರ್ಯಾಧ್ಯಕ್ಷ ಎನ್.ವೈ ನಾಗರಾಜು ಪಾಲ್ಗೊಂಡು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಣೆ ಹಾಗೂ ನಿರಾಶ್ರಿತ ಕಡುಬಡವರಿಗೆ ಆಹಾರ ವಿತರಣೆ ಮಾಡಿ ಮಾತನಾಡಿದರು ನಮ್ಮ ವಿಶೇಷ ದಿನವನ್ನು ಇಂದು ಅರ್ಥಪೂರ್ಣವಾಗಿ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಿರುವುದು ಸಂತಸ ತಂದಿದೆ. ಹಣವನ್ನು ದುಂದು ವೆಚ್ಚ ಮಾಡದೆ ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಹಾಗೂ ಹಸಿದವರಿಗೆ ಆಹಾರ ವಿತರಣೆ ಮಾಡಿರುವುದು ವಿಶೇಷ, ಮುಂದೆ ಮತ್ತಷ್ಟು ಹೆಚ್ಚಿನ ರೀತಿಯಲ್ಲಿ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಸೇವೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದರು.
ಯುವ ಮುಖಂಡ ಬೀಡಿಕೆರೆ ವರುಣ್ ಮಾತನಾಡಿ ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ನಿರಾಶ್ರಿತ ಕಡುಬಡವರಿಗೆ ಮಲ್ಲೇಶ್ ಮತ್ತು ತಂಡ ನಿತ್ಯ ನಿರಂತರ ಅನ್ನದಾಸೋಹ ನಡೆಸುತ್ತಿರುವುದು ಶ್ಲಾಘನೀಯ ವಿಷಯ , ಇಂತಹ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಜನಸೇನೆ ಕಾರ್ಯಾಧ್ಯಕ್ಷ ಎನ್.ವೈ ನಾಗರಾಜು ಅಣ್ಣನವರು ಪಾಲ್ಗೊಂಡು ಆಹಾರ ವಿತರಣೆ ಮಾಡಿರುವುದು , ಶಾಲಾ ಮಕ್ಕಳಿಗೆ ಅಗತ್ಯ ಪರಿಕರಗಳ ವಿತರಣೆ ಮಾಡುವ ಮೂಲಕ ಶುಭ ಹಾರೈಸಿರುವುದು ಸಂತಸ ತಂದಿದೆ ಮುಂದೆ ಇಂತಹ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಿ ನೆಡೆಯಲಿ ಎಂದು ಶುಭ ಹಾರೈಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು
ಕಾರ್ಯಕ್ರಮದ ಆಯೋಜಕ ಅನ್ನ ದಾಸೋಹಿ ಮಲ್ಲೇಶ್ ಮಾತನಾಡಿ ನಿರಂತರ ದಾನಿಗಳ ನೆರವಿನಿಂದ ಈ ಅನ್ನದಾಸೋಹ ಕಾರ್ಯಕ್ರಮವು ನಡೆಯುತ್ತಿದ್ದು, ಪ್ರತಿನಿತ್ಯ ನೂರಾರು ಜನರ ಹಸಿವನ್ನು ನೀಗಿಸುತ್ತಿದೆ. ಇಂದಿನ ಕಾರ್ಯಕ್ರಮವು ವಿಶೇಷವಾಗಿದ್ದು, ಕಾರ್ಯಕ್ರಮದ ದಾನಿಗಳಾದ ನಾಗರಾಜು ರವರಿಗೆ ಶುಭ ಹಾರೈಸುತ್ತೇನೆ , ಅವರ ಸಮಾಜಮುಖಿ ಕಾರ್ಯಗಳು ಮತ್ತಷ್ಟು ಹೆಚ್ಚಾಗಲಿ, ಸಮಾಜಕ್ಕೆ ಅವರ ಸೇವೆ ಮತ್ತಷ್ಟು ಸಿಗುವಂತಾಗಲಿ ಎಂದರು
ದಿನೇ ದಿನೇ ಆಹಾರ ಬಯಸಿ ಬರುವ ಜನಸಂಖ್ಯೆ ಹೆಚ್ಚಾಗುತ್ತಿದ್ದು , ದಾನಿಗಳ ಅವಶ್ಯಕತೆ ಇದೆ , ದಾನಿಗಳು ತಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನ ದಾಸೋಹ ಸಮಿತಿಯೊಟ್ಟಿಗೆ ಆಚರಿಸುವ ಮೂಲಕ ಹಸಿದ ಹೊಟ್ಟೆಗಳಿಗೆ ಆಹಾರ ಒದಗಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು .
ಕಾರ್ಯಕ್ರಮದಲ್ಲಿ ಕೆಂಪರಾಜು (ನಮ್ಮ ಕರ್ನಾಟಕ ಜನಸೇನೆ.ತಾಲೂಕುಅಧ್ಯಕ್ಷರು),ಮುನಿರಾಜು,ಶ್ರೀನಿವಾಸ್,ಆನಂದಪ್ಪ,ನಗರ ಮುಖಂಡರು ಯಶೋಧಮ್ಮ, ವರುಣ್ ಬೀಡಿಕೆರೆ ಸಮಾಜ ಸೇವಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.