
ದೊಡ್ಡಬಳ್ಳಾಪುರ : ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಗಾಗಿ ಸರ್ಕಾರ ನೇಮಿಸುವ ಶಿಕ್ಷಕರು ತಮ್ಮ ಮನೆಬಾಗಿಲಿಗೆ ಬರಲಿದ್ದಾರೆ ಈ ಸಮೀಕ್ಷೆಯು ಮೂರು ಹಂತದಲ್ಲಿ ನೆಡೆಯಲಿದ್ದು ಸಮುದಾಯದ ಎಲ್ಲಾ ಬಾಂಧವರು ತಪ್ಪದೆ ಸಮೀಕ್ಷೆಯಲ್ಲಿ ಸೂಕ್ತ ಮಾಹಿತಿ ನೀಡಿ ಮಾದಿಗ ಎಂದು ನಮೂದಿಸಬೇಕೆಂದು ಪಾಲನಹಳ್ಳಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ಸಿದ್ದರಾಜು ಸ್ವಾಮೀಜಿ ತಿಳಿಸಿದರು.
ನಗರದ ಬಾಬು ಜಗಜೀವನ್ ರಾಮ್ ಭವನದಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಮಾದಿಗ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಸಮೀಕ್ಷೆಗೆ ಶಿಕ್ಷಕರು ತಮ್ಮ ಮಲೆ ಬಾಗಿಲಿಗೆ ಬಂದಾಗ ಮಾದಿಗ ಎಂದು ಬರೆಸಲು ನಾಚಿಕೆಪಡದೆ ಸ್ಪಷ್ಟವಾಗಿ ಜಾತಿಯನ್ನು ಮಾದಿಗ ಎಂದು ಬರೆಸುವ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸಬೇಕು. ಮಾದಿಗ ಸಮಾಜವು ಬಹು ಸಂಖ್ಯೆಯಲ್ಲಿದೆ ಆದರೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದು ಜನಾಂಗದ ಅಭಿವೃದ್ಧಿಗೆ ಇದು ಸೂಕ್ತ ಕಾಲ ಹಾಗಾಗಿ ಸಮೀಕ್ಷೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಸೂಕ್ತ ಮಾಹಿತಿ ನೀಡಬೇಕು. ಬಹುಸಂಖ್ಯಾತರಾಗಿರುವ ಮಾದಿಗ ಸಮುದಾಯದ ಜನತೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಸೂಕ್ತ ರೀತಿಯಲ್ಲಿ ಪಡೆಯಲು ಈ ಸಮೀಕ್ಷೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಸಮುದಾಯದ ಮುಖಂಡ ರಾಮಕೃಷ್ಣ ಮಾತನಾಡಿ ಒಳ ಮೀಸಲಾತಿ ಜಾರಿಗೊಳಿಸುವ ಸಲುವಾಗಿ ನಡೆಯುತ್ತಿರುವ ಸಮೀಕ್ಷೆಯು ಮೂರು ಹಂತದಲ್ಲಿ ನಡೆಯಲಿದ್ದು ಮೊದಲ ಹಂತದಲ್ಲಿ ಮೇ 5 ರಿಂದ 17 ವರೆಗೆ ಗಣತಿದಾರರು ಮನೆ, ಮನೆ ಭೇಟಿ ನೀಡಿ ಸಮೀಕ್ಷೆ ಮಾಡಲಿದ್ದಾರೆ, ಎರಡನೇ ಹಂತದಲ್ಲಿ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳುವ ಮೂಲಕ ಸಮೀಕ್ಷೆ ಮಾಡುತ್ತಾರೆ. ಎರಡು ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಸಾರ್ವಜನಿಕರು , ಸಮುದಾಯದ ಬಾಂಧವರು ಮೂರನೇ ಹಂತದಲ್ಲಿ ಮೇ 19 ರಿಂದ 23 ರ ವರೆಗೆ ಆನ್ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬಹುದಾಗಿದೆ ಎಂದರು.
ನಮ್ಮ ಸಮುದಾಯಕ್ಕೆ ಸಂಬಂಧಪಟ್ಟ ಸಮೀಕ್ಷೆ ವರದಿಗಳು ಸೂಕ್ತ ರೀತಿಯಲ್ಲಿ ಸರ್ಕಾರಕ್ಕೆ ಲಭ್ಯವಿಲ್ಲದ ಕಾರಣ ನಮ್ಮ ಸಮುದಾಯಕ್ಕೆ ಸಿಗಬೇಕಿರುವ ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕ ಸವಲತ್ತುಗಳು ಬೇರೆ ಸಮುದಾಯದ ಪಾಲಾಗುತ್ತಿವೆ. ನಮ್ಮ ಸಮುದಾಯವು ನಮಗೆ ಸಿಗಬೇಕಿರುವ ಸೌಲಭ್ಯಗಳನ್ನು ಪಡೆಯಲು ಈ ಸಮೀಕ್ಷೆಯು ಸಹಕಾರಿಯಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಮಾದಾರ ಮಹಾ ಮುಖ್ಯಸ್ಥರಾದ ದೊಡ್ಡತುಮಕೂರು ಸಿ.ರಾಮಕೃಷ್ಣಪ್ಪ, ಮುಖಂಡರಾದ ಬಚ್ಚಹಳ್ಳಿ ನಾಗರಾಜ್,ಟಿ.ಡಿಮುನಿಯಪ್ಪ,ಮುನಿಸುಬ್ಬಯ್ಯಅಪ್ಪಕಾರನಹಳ್ಳಿ ಹನುಮಯ್ಯ, ಪುರುಷೋತ್ತಮ್,ವಿ.ವೆಂಕಟೇಶ್, ತಳವಾರ್ ನಾಗರಾಜ್, ಹಾದ್ರಿಪುರ ಹರ್ಷ,ವಕೀಲ ಕಾಂತರಾಜ್ , ಮುನಿರಾಜ್, ತಮಟೆ ಗಣೇಶ್,ವೆಂಕಟರಮಣಪ್ಪರಾಮದೇವನಹಳ್ಳಿ ಮುನಿರಾಜ್, ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ಪ್ರಾಧಿಕಾರದ ಸದಸ್ಯ ಆರ್.ವಿ ಮಹೇಶ್, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ನೇರಳೆಘಟ್ಟ ರಾಮು, ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಹನುಮಂತಯ್ಯ,ನಗರಸಭಾ ಸದಸ್ಯ ಶಿವಣ್ಣ, ಹುಲಿಕುಂಟೆನರಸಿಂಹಮೂರ್ತಿ,ಕೆಂಪವೆಂಕಟಯ್ಯ, ಮಂಜು ರಾಮದಾಸ್, ಕುರುಬರಹಳ್ಳಿ ಮಂಜು,ನರಸಿಂಹ ಮೂರ್ತಿ, ಕರೀಂ ಸೊಣ್ಣೇನಹಳ್ಳಿ ಮುನಿಯಪ್ಪ, ಗೊಲ್ಲಹಳ್ಳಿ ಮುನಿಯಪ್ಪ ಸೇರಿದಂತೆ ತಾಲೂಕಿನ ಹಲವು ಪ್ರಮುಖರು ಹಾಜರಿದ್ದರು.