
ಸೇವೆಯೇ ನಮ್ಮ ಗುರಿಯಾಗಿದ್ದು ನಾವು ಮಾಡುವ ಕಾರ್ಯದಿಂದಲೇ ಜನತೆ ನಮ್ಮನ್ನು ಗುರುತಿಸಬೇಕು.ಸದಾ ನನ್ನೊಂದಿಗೆ ಶ್ರಮಿಸುವ ನನ್ನ ಸ್ನೇಹಿತರೇ ನನ್ನ ಶಕ್ತಿ ಎಂದು ದೀಪು ಗೌಡ ತಿಳಿಸಿದರು
ಯುವ ಜನತಾದಳ ಕಸಬಾ ಹೋಬಳಿ ಅಧ್ಯಕ್ಷರು, ಕರುನಾಡು ವಿಜಯ ಸೇನೆ ಬೆಂಗಳೂರು ಗ್ರಾಮಾಂತರ ಯುವ ಘಟಕದ ಜಿಲ್ಲಾಧ್ಯಕ್ಷರು , ಎನ್ ವಿ ಡಿ ಡೆವಲಪರ್ಸ್ ಅಂಡ್ ರಿಯಲ್ ಎಸ್ಟೇಟ್ ನ ಮಾಲೀಕರು ಹಾಗೂ ದೀಪು ಮಸಾಲಾ ಕಂಪನಿ ಸಂಸ್ಥಾಪಕರಾದ ದೀಪು ಗೌಡ ರವರ ಹುಟ್ಟು ಹಬ್ಬವನ್ನು ಸ್ನೇಹಿತರು ಹಾಗೂ ಅಭಿಮಾನಿಗಳ ವತಿಯಿಂದ ಆಚರಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ಅವರು ನೂತನ ವರ್ಷವನ್ನು ಎಲ್ಲರೂ ಪ್ರೀತಿಯಿಂದ ಹೊಸ ಹುಮ್ಮಸ್ಸಿನಿಂದ ಸ್ವಾಗತಿಸಿದ್ದೇವೆ. ಇಂದೇ ನನ್ನ ಹುಟ್ಟು ಹಬ್ಬವಿದ್ದ ಕಾರಣ ನನ್ನ ಸ್ನೇಹಿತರ ಒತ್ತಾಯದ ಮೇರೆಗೆ ಆಚರಣೆ ಮಾಡಲಾಗುತ್ತಿದೆ ನನ್ನ ಹುಟ್ಟು ಹಬ್ಬಕ್ಕೆ ತಾಲ್ಲೂಕಿನ ಹಲವು ಗಣ್ಯರು ಶುಭಾಶಯಗಳನ್ನು ಕೋರಿ ಹಾರೈಸಿದ್ದಾರೆ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಶುಭಕೋರಿದ ಜೆಡಿಎಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಹರೀಶ್ ಗೌಡ ರವರು ಮಾತನಾಡಿ ಜೆಡಿಎಸ್ ಯುವ ಘಟಕವನ್ನು ಬಲಪಡಿಸುವಲ್ಲಿ ದೀಪು ಗೌಡ ರವರ ಶ್ರಮ ಅಪಾರವಾದದ್ದು ಮುಂದೆ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ವತಿಯಿಂದ ಉನ್ನತ ಅವಕಾಶಗಳು ಸಿಗಲಿವೆ ಎಂದರು
ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯರು , ಬೆಂಗಳೂರು ಗ್ರಾಮಾಂತರ ಜೆಡಿಎಸ್ ಯುವ ಘಟಕದ ಅಧ್ಯಕ್ಷರು, ವಕೀಲರು ಆದ ಸುನಿಲ್ ಕುಮಾರ್ ರವರು ಮಾತನಾಡಿ ಅತ್ಯಂತ ಆತ್ಮೀಯರು ಸೋದರ ಸಮಾನರು ಸದಾ ತಾಲ್ಲೂಕಿನ ಜನತೆಯ ಕಷ್ಟಗಳಿಗೆ ಸ್ಪಂದಿಸುವ ಯುವನಾಯಕ ದೀಪು ಗೌಡ ರವರಿಗೆ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹಾಗೂ ರಾಜಕೀಯವಾಗಿ ಉನ್ನತ ಸ್ಥಾನ ಮಾನಗಳು ದೊರೆಯಲಿ ಎಂದು ಹಾರೈಸಿದರು
ಈ ಸಂದರ್ಭದಲ್ಲಿ ತಾಲೂಕಿನ ಮುಖಂಡರಾದ ನಾಗರಾಜ್, ಪ್ರವೀಣ್ ಕುಮಾರ್ ,ಅಶ್ವಥ್ ನಾರಾಯಣ, ಶಶಿಧರ್ ಬಿ ಆರ್ ,ಕನಕ ರಾಜ್ ,ತೆರೆದಾಳ್ ಶ್ರೀನಿವಾಸ್ , ಮಂಜುನಾಥ ಡಿ ಏನ್ ,ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು