
ದೊಡ್ಡಬಳ್ಳಾಪುರಏಪ್ರಿಲ್ 03 ( ವಿಜಯ ಮಿತ್ರ ) : ರಾಷ್ಟ್ರದಲ್ಲಿ ಮೋದಿ ಜೀ ಅವರ ಆಡಳಿತ ವೈಖರಿ ಹಾಗೂ ಯುವ ಶಾಸಕ ಧೀರಜ್ ಮುನಿರಾಜು ರವರ ನಾಯಕತ್ವ ಮೆಚ್ಚಿ ಸಂಗಡಿಗರೊಂದಿಗೆ ಸ್ವಪಕ್ಷಕ್ಕೆ ಹಿಂದಿರುಗಿದ್ದೇವೆ ಎಂದು ನಗರಸಭಾ ಸದಸ್ಯ ಶಿವರಾಜ್(ಶಿವು )ತಿಳಿಸಿದರು.
ಸ್ಥಳೀಯ ಶಾಸಕ ಧೀರಜ್ ಮುನಿರಾಜುರವರ ಸಮ್ಮುಖದಲ್ಲಿ ನಗರದ 12ನೇ ವಾರ್ಡಿನ ನಗರಸಭಾ ಸದಸ್ಯರಾದ ಶಿವರಾಜ್(ಶಿವು )ರವರು ತಮ್ಮ ಬೆಂಬಲಿಗರು ಹಾಗೂ ಸಂಗಡಿಗರೊಂದಿಗೆ ಮತ್ತೆ ಮಾತೃ ಪಕ್ಷ ಬಿಜೆಪಿ ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕೆಲ ಕಾರಣಾಂತರಗಳಿಂದ ಅನ್ಯ ಪಕ್ಷಕ್ಕೆ ಹೋಗಿದ್ದೆವು. ಸಂಗಡಿಗರು ಹಾಗೂ ಬೆಂಬಲಿಗರ ಒಮ್ಮತದಿಂದ ಭಾರತೀಯ ಜನತಾ ಪಕ್ಷಕ್ಕೆ ಹಿಂದಿರುಗಿದ್ದೇವೆ. ಶಾಸಕ ಧೀರಜ್ ಮುನಿರಾಜ್ ರವರ ನೇತೃತ್ವದಲ್ಲಿ ಲೋಕಸಭಾ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಮೋದಿಜಿಯವರ ಕೈ ಬಲಪಡಿಸಲು ಶ್ರಮಿಸುತ್ತೇವೆ ಎಂದರು.
ಶಾಸಕ ಧೀರಜ್ ಮುನಿರಾಜು ಮಾತನಾಡಿ ನಿಷ್ಠಾವಂತ ಕಾರ್ಯಕರ್ತರು ಸ್ವಪಕ್ಷಕ್ಕೆ ಹಿಂದಿರುಗಿರುವುದು. ಸಂತಸ ತಂದಿದೆ. ಸ್ಥಳೀಯ ಮಟ್ಟದಲ್ಲಿ ಅಷ್ಟೇ ಅಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ನೂರಾರು ಮುಖಂಡರು ಮೋದಿ ಜೀ ಯವರ ಕಾರ್ಯ ವೈಖರಿಯನ್ನು ಮೆಚ್ಚಿ ಸೇರ್ಪಡೆಯಾಗುತ್ತಿರುವುದು ಹೆಮ್ಮೆಯ ಸಂಗತಿ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸಿದ್ದೇವೆ ಎಂದರು
ಈ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ನಗರ ಬಿಜೆಪಿ ಅಧ್ಯಕ್ಷರಾದ ಮುದ್ದಪ್ಪನವರು, ತಾಲ್ಲೂಕು ಅಧ್ಯಕ್ಷರಾದ ನಾಗೇಶ್ ರವರು,ಜಿಲ್ಲಾ ಜಿಲ್ಲಾ ವಕ್ತಾರರಾದ ಶ್ರೀ ಪುಷ್ಪ ಶಿವಶಂಕರ್, ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಗೋಪಿ ಅಣ್ಣ ರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಂತಿ ವೆಂಕಟೇಶ್ ರವರು,ರಾಜ್ಯ ಕಾರ್ಯ ಕಾರಣಿ ಸದಸ್ಯರು MG ಶ್ರೀನಿವಾಸ್ ರವರು ನಗರಸಭಾ ಅಧ್ಯಕ್ಷರು, ನಗರಸಭಾ ಸದಸ್ಯರುಗಳು ಮುಖಂಡರು ಉಪಸ್ಥಿತರಿದ್ದರು