
ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿ ಗ್ರಾಮದಲ್ಲೂ ಒಂದಲ್ಲ ಒಂದು ಜಾತ್ರಾ ಮಹೋತ್ಸವ ನೆರವೇರುತ್ತಿದೆ. ಅಂತೆಯೇ ಇಲ್ಲೊಂದು ಜಾತ್ರಾ ಮಹೋತ್ಸವದಲ್ಲಿ ದೇವರು ಕಣ್ಬಿಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ತಾಲೂಕಿನ ಮದುರೆ ಹೋಬಳಿಯ ಕಾಡನೂರು ಎಂಬ ಹಳ್ಳಿಯಲ್ಲಿ ಮಹೇಶ್ವರಮ್ಮ ದೇವಿಯ ಅದ್ದೂರಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು. ಈ ಸಂದರ್ಭದಲ್ಲಿ ತಾಯಿ ಕಣ್ಣು ಬಿಟ್ಟಿದ್ದಾರೆ…. ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಸದ್ಯಕ್ಕೆ ಕಣ್ಣು ಬಿಟ್ಟಂತೆ ಕಾಣುವ ದೇವಿಯ ಚಿತ್ರ ಎಲ್ಲೆಡೆ ಹರಿದಾಡುತ್ತಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಕಾಡನೂರು ಗ್ರಾಮದ ಮಹೇಶ್ವರಮ್ಮ ದೇವಸ್ಥಾನದಲ್ಲಿನ ಮಹೇಶ್ವರಮ್ಮ ವಿಗ್ರಹ ಕಣ್ಣು ತೆರೆದಂತೆ ಭಾಸವಾಗುತ್ತಿದ್ದು ಇದು ದೇವರ ಪವಾಡವೆಂದು ಜನರು ದೇವರ ದರ್ಶನ ಪಡೆಯಲು ಮುಂದಾಗಿದ್ದಾರೆ.
ಜುಲೈ 21ರಂದು ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು ಪೂಜಾ ಕಾರ್ಯಕ್ರಮಕ್ಕೆ ಸ್ಥಳೀಯ ನೂರಾರು ಭಕ್ತರು ಭಾಗವಹಿಸಿದ್ದರು, ಪೂಜೆಯ ನಂತರ ದೇವರ ವಿಗ್ರಹ ಕಣ್ಣು ತೆರೆದಿರುವ ರೀತಿಯಲ್ಲಿ ಭಕ್ತರಿಗೆ ಭಾಸವಾಗಿ , ಇದು ಮಹೇಶ್ವರಮ್ಮ ದೇವಿಯ ಪವಾಡ ಎಂದು ಭಕ್ತರು ಹರ್ಷೋದ್ಗಾರ ವ್ಯಕ್ತಪಡಿಸಿದ್ದಾರೆ. ಈಗ ಸುತ್ತಮುತ್ತಲಿನ ಗ್ರಾಮಸ್ಥರು ನಾ ಮುಂದು ತಾ ಮುಂದು ಎಂಬಂತೆ ದೇವಿಯ ಪವಾಡ ನೋಡಲು ಆಗಮಿಸುತ್ತಿದ್ದಾರೆ.