*ಕನ್ನಡಿಗರ ಉದ್ಯೋಗ ವಿಚಾರದಲ್ಲಿ ರಾಜಿಯಿಲ್ಲ ಶೇಕಡ 80ರಷ್ಟು ಉದ್ಯೋಗ ಮೀಸಲಾತಿ ಕಡ್ಡಾಯ : ಪ್ರಸ್ತುತ ಫಾಕ್ಸ್ಕಾನ್ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಬಗ್ಗೆ ಊಹಾಪೋಹಗಳನ್ನು ಕುರಿತು ಕರವೇ ಪುರುಷೋತ್ತಮ್ ಗೌಡ ಪ್ರತಿಕ್ರಿಯೆ*

Spread the love

ದೊಡ್ಡಬಳ್ಳಾಪುರ ಆಗಸ್ಟ್ 01 ( ವಿಜಯಮಿತ್ರ) : ನಿರಂತರ ಹೋರಾಟಗಳನ್ನು ಮಾಡುವ ಮೂಲಕ ಕನ್ನಡಿಗರಿಗೆ ಉದ್ಯೋಗದಲ್ಲಿ ಶೇಕಡ 80ರಷ್ಟು ಮೀಸಲಾತಿ ನೀಡಲೇಬೇಕು ಹಾಗೂ ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕು ಎಂದು ಟಿ ಎ ನಾರಾಯಣಗೌಡರ ನೇತೃತ್ವದಲ್ಲಿ ಒತ್ತಾಯಿಸಿದ್ದು . ಉದ್ಯೋಗದ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾದಲ್ಲಿ ಕರವೇ ನಾರಾಯಣ ಗೌಡರ ಬಣ ಸುಮ್ಮನಿರುವುದಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಪುರುಷೋತ್ತಮ್ ಗೌಡ ತಿಳಿಸಿದ್ದಾರೆ.

 

ಈ ಕುರಿತು ಮಾತನಾಡಿದ ಅವರು ಇತ್ತೀಚಿಗೆ ಗ್ರಾಮಾಂತರ ಜಿಲ್ಲೆಯಲ್ಲಿ ಹಲವಾರು ಕಾರ್ಖಾನೆಗಳು ಸ್ಥಾಪನೆಯಾಗುತ್ತಿದ್ದು ಅಭಿವೃದ್ಧಿಯ ವಿಚಾರವಾಗಿ ಸ್ವಾಗತರ್ಹ ಆದರೆ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಶೇಕಡ 80ರಷ್ಟು ಉದ್ಯೋಗ ನೀಡಲೇಬೇಕು. ಸ್ಥಾಪನೆಯಾದ ಕೆಲ ದಿನಗಳವರೆಗೆ ನಾಮಕಾವಾಸ್ತೆ ಕನ್ನಡಿಗರಿಗೆ ಉದ್ಯೋಗ ನೀಡಿ ನಂತರ ಹೊರ ರಾಜ್ಯಗಳಿಂದ ಬಂದವರನ್ನೇ ಉದ್ಯೋಗಗಳಿಗೆ ನೇಮಿಸಿಕೊಳ್ಳುವ ಕಾರ್ಖಾನೆಗಳಿಗೆ ಇದೊಂದು ಎಚ್ಚರಿಕೆಯ ಗಂಟೆಯಾಗಿದೆ. ಕನ್ನಡಿಗರಿಗೆ ಅಪಮಾನ ಕರವೇ ಎಂದಿಗೂ ಸಹಿಸುವುದಿಲ್ಲ.

 

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಕಾರ್ಖಾನೆಗಳಲ್ಲಿ ಕನ್ನಡಿಗರಮೇಲಾಗುತ್ತಿರುವ ದೌರ್ಜನ್ಯಗಳು,ಅವಮಾನಗಳು ಕುರಿತಂತೆ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು .ಇಂದು ಫಾಕ್ಸ್ಕನ್ ಕಂಪನಿ ಕುರಿತಂತೆ ಹರಡಿದ ಊಹಾಪೋಹಗಳು ಕನ್ನಡ ಪರ ಸಂಘಟನೆಗಳು ಕಂಪನಿಯ ವಿರುದ್ಧ ಕೆರಳುವಂತೆ ಮಾಡಿವೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ( ಟಿ. ಎ.ನಾರಾಯಣ ಗೌಡರ ಬಣ ) ಸೂಕ್ಷ್ಮರೀತಿಯಲ್ಲಿ ಎಲ್ಲವನ್ನು ಮೌನವಾಗಿ ಗಮನಿಸುತ್ತಿದೆ. ಬಹು ರಾಷ್ಟ್ರೀಯ ಕಂಪನಿ( MNC )ಗಳಿಗೆ ಮತ್ತೊಮ್ಮೆ ಎಚ್ಚರಿಸುತ್ತಿದ್ದೇವೆ ಎಂದರು ಕನ್ನಡಿಗರ ಉದ್ಯೋಗದ ವಿಚಾರವಾಗಿ ರಾಜಿಸಲ್ಲದು, ನೆಲ ಜಲ ಸಂಪನ್ಮೂಲ ನಮ್ಮದು ಉದ್ಯೋಗದಲ್ಲಿ ಶೇಕಡ 80 ರಷ್ಟು ನಮ್ಮದೇ. ಕನ್ನಡಿಗರಿಗೆ ಅನ್ಯಾಯವಾದಲ್ಲಿ ಕಾರ್ಖಾನೆಗಳ ವಿರುದ್ಧ ಉಗ್ರ ಹೋರಾಟ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದರು.

Leave a Reply

Your email address will not be published. Required fields are marked *

© 2026 Malnad TV. All Rights Reserved.