
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪೆರಮಗೊಂಡನಹಳ್ಳಿ ಗ್ರಾಮದ ದಿನ್ನೆ ಆಂಜನೇಯ ಸ್ವಾಮಿ ದೇವಾಲಯದ ಜಾತ್ರ ಮೊಹೋತ್ಸವ ಕಾರ್ಯಕ್ರಮ ನೆಡಯಿತು
ಮರದಲ್ಲಿ ಮೂಡಿದ ಹನುಮ ಮೂರ್ತಿ ಆಕರ್ಷಣಿಯವಾಗಿತ್ತು
ಸುಮಾರು 500 ವರ್ಷಗಳ ಇತಿಹಾಸವಿರುವ ದೇವಾಲಯ ಇದಾಗಿದ್ದು ವಿಶೇಷ ಆಚರಣೆ ಹೊಂದಿದೆ. ಜೋಡೆತ್ತುಗಳ ರಥಯಾತ್ರೆ, ಹಯಗ್ರಿವ ಉತ್ಸವ ಒಳಗೊಂಡಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಈ ಕ್ಷೇತ್ರವನ್ನು ಸಂಗಮ ಕ್ಷೇತ್ರ ಎಂದು ಕರೆಯಲಾಗುತ್ತದೆ ಕಾರಣ ಸುತ್ತಮುತ್ತಲಿನ ಸಪ್ತಮಾತೃಕೆಯರ ಉತ್ಸವ ಮೂರ್ತಿಗಳು ಈ ಜಾತ್ರ ಮಹೋತ್ಸವಕ್ಕೆ ಬಂದು ಸೇರುತ್ತವೆ. ಈ ಕ್ಷೇತ್ರದಲ್ಲಿ ಸಂತಾನ ಪ್ರಾಪ್ತಿ, ಹರಕೆ ಬೇಡಿಕೆಗಳನ್ನು ಈಡೇರಿಸುವ ಅದ್ಭುತ ಶಕ್ತಿ ಹೊಂದಿರುವ ಹನುಮ ದೇವರು ಸುತ್ತಮುತ್ತಲಿನ ಗ್ರಾಮಸ್ಥರ ಆರಾಧ್ಯ ದೈವ ಎಂದು ದೇವಾಲಯದ ಪ್ರಧಾನ ಅರ್ಚಕ ವಾಸುದೇವಚಾರ್ ತಿಳಿಸಿದರು
ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳು ಮಾತನಾಡಿ ದೇವಾಲಯವು ಪುರಾತನ ಕಾಲದಗಿದ್ದು ದೇವಾಲಯದ ಮುಂಭಾಗದಲ್ಲಿ ಇರುವ ಬನ್ನಿಮರ ಸಾಕ್ಷಿಯಾಗಿದೆ ಸುತ್ತಮುತ್ತಲಿನ ಗ್ರಾಮಸ್ಥರ ಹರಕೆ, ಬೇಡಿಕೆಗಳನ್ನು ನೆರೆವಿರಿಸಿರುವ ದೇವರಿಗೆ ಅಪಾರ ಭಕ್ತಗಣವಿದೆ ಎಂದು ತಿಳಿಸಿದರು
ದೇವಾಲಯಕ್ಕೆ ಆಗಮಿಸಿದ ಭಕ್ತದಿಗಳಿಗೆ ಪ್ರಸಾದ ವಿನಿಯೋಗ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಯಿತು