ಎಲ್ಲೆಡೆಯೂ ನೀರಿನ ಅಭಾವ ತಾಂಡವವಾಡುತ್ತಿದ್ದು.ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ದೊಡ್ಡಬಳ್ಳಾಪುರ ತಾಲ್ಲೂಕಿನ ಅಂತರಹಳ್ಳಿ ಗ್ರಾಮದ ಕೆರೆ ಪೂರ್ಚೆತನಕ್ಕೆ ಯೋಜನೆ ರೂಪಿಸಲಾಗಿದೆ. ನೀರಿನ ಬವಣೆ ನೀಗಿಸಲು ಹಾಗೂ ಅಂತರ್ಜಲ ಮಟ್ಟವನ್ನು ಸುಧಾರಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಆಯೋಜನೆ ಮಾಡಲಾಗಿದೆ.ರೈತರ ವ್ಯವಸಾಯಕ್ಕೆ ಕೆರೆಗಳು ಅತ್ಯಂತ ಸಹಕಾರಿಯಾಗಲಿವೆ ಎಂದು ಜಿಲ್ಲಾ ನಿರ್ದೇಶಕರಾದ ಉಮರಬ್ಬ ತಿಳಿಸಿದರು .

ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಲಾಯಿತು .ಈ ಸಂದರ್ಭದಲ್ಲಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ವತಿಯಿಂದ ಸುಮಾರು125 ಕೋಟಿ ವೆಚ್ಚದಲ್ಲಿ ಸುಮಾರು 750 ಕೆರೆಗಳ ಅಭಿವೃದ್ಧಿ ಮಾಡಲಾಗಿದೆ ,ರೈತರ ಬೆಂಬಲವಾಗಿ ನಮ್ಮ ಯೋಜನೆ ಸದಾ ಶ್ರಮಿಸುತ್ತಿದ್ದು. ಕುಡಿಯುವ ನೀರಿನ ಅಭಾವ ಮತ್ತು ವ್ಯವಸಾಯಕ್ಕೆ ನೀರನ್ನು ಒದಗಿಸುವಲ್ಲಿ ನಮ್ಮೂರು ನಮ್ಮ ಕೆರೆ ಅಭಿಯಾನ ರೂಪಿಸಲಾಗಿದೆ ,ಕೆರೆಗಳ ಪುನಶ್ಚೇತನದ ಜೊತೆಗೆ ಅಂತರ್ಜಲ ಮಟ್ಟ ಹೆಚ್ಚಿಸುವುದು ನಮ್ಮ ಮುಖ್ಯ ಉದ್ದೇಶ. ದೊಡ್ಡಬಳ್ಳಾಪುರ ತಾಲ್ಲೂಕಿನ ಅಂತರ ಹಳ್ಳಿ ಗ್ರಾಮದ ಕೆರೆ ಸುಮಾರು 28 ಏಕ್ಕರೆ ಪ್ರದೇಶದಲ್ಲಿ ಹರಡಿಕೊಂಡಿದ್ದು ಕೆರೆ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ ಮಂಜೂರಾತಿಯನ್ನು ಈಗಾಗಲೇ ನಮ್ಮ ಯೋಜನೆ ವತಿಯಿಂದ ನೀಡಲಾಗಿದೆ ಒಟ್ಟು ಕಾಮಗಾರಿಯ ವೆಚ್ಚ 22 ಲಕ್ಷ ಎಂದು ಅಂದಾಜು ಮಾಡಲಾಗಿದ್ದು . ಕೆರೆ ಅಭಿವೃದ್ಧಿಗೆ ಉಳಿಕೆ 7 ಲಕ್ಷ ಹಣವನ್ನು ಪಂಚಾಯಿತಿ ವತಿಯಿಂದ ನೀಡಲಾಗುತ್ತದೆ .ಕೆರೆಯ ಸಂಪೂರ್ಣ ಅಭಿವೃದ್ದಿಯ ನಂತರ ಅಂತರಹಳ್ಳಿ ಕೆರೆ ಸಂರಕ್ಷಣಾ ಸಮಿತಿಗೆ ಹಸ್ತಾಂತರ ಮಾಡಲಾಗುವುದು ಕೆರೆಯ ನಿರ್ವಹಣೆ ಹಾಗೂ ಸಂರಕ್ಷಣಾ ಜವಾಬ್ದಾರಿ ಸಮಿತಿ ನಿಭಾಯಿಸಬೇಕಾಗುತ್ತದೆ .ಕೆರೆಯನ್ನು ಸ್ವಚ್ಛವಾಗಿ ಇಡುವ ಕಾರ್ಯ ಗ್ರಾಮದ ಎಲ್ಲಾ ಸಾರ್ವಜನಿಕರ ಹೊಣೆಯಾಗಿದೆ ,ನಮ್ಮೂರು ನಮ್ಮ ಕೆರೆ ಅಭಿಯಾನದ ಅಡಿಯಲ್ಲಿ ನೂರಾರು ಕೆರೆಗಳು ಸಂಪೂರ್ಣ ಅಭಿವೃದ್ದಿ ಹೊಂದಿದ್ದು ಸಾರ್ವಜನಿಕರ ದೈನಂದಿಕ ಕಾರ್ಯಗಳಿಗೆ ಬಳಕೆಯಾಗುತ್ತಿರುವುದು ಸಂತಸ ತಂದಿದೆ. ಈ ಅಭಿಯಾನದ ಅಡಿಯಲ್ಲಿ ಸ್ಥಳೀಯ ಬೋರ್ವೆಲ್ ಗಳಲ್ಲಿ ನೀರು ಬರಲು ಸಾಧ್ಯವಾಗುತ್ತದೆ . ಕೆರೆ ಅಭಿವೃದ್ಧಿ ಕಾರ್ಯದಲ್ಲಿ ಸ್ಥಳೀಯ ರೈತರ ಅನುಕೂಲಕ್ಕಾಗಿ ಉಚಿತ ಮಣ್ಣು ಪೂರೈಕೆ ಮಾಡಲಾಗುವುದು. ಕೇವಲ ಕೆರೆ ಅಷ್ಟೇ ಅಲ್ಲದೆ ರಾಜಕಾಲುವೆ ,ಕೆರೆಯಂಗಳದ ರಸ್ತೆ ಅಭಿವೃದ್ಧಿ ಕಾರ್ಯ ಸ್ಥಳೀಯ ಗ್ರಾಮಸ್ಥರ ಸಹಕಾರದಿಂದ ನಡೆಯಬೇಕಿದೆ ಎಂದು ತಿಳಿಸಿದರು

ತಾಲ್ಲೂಕು ಯೋಜನಾಧಿಕಾರಿಗಳಾದ ಸುಧಾ ಭಾಸ್ಕರ್ ನಾಯಕ್ ಮಾತನಾಡಿ ಸ್ಥಳೀಯ ರೈತರಿಗೆ ಅತ್ಯಂತ ಅನುಕೂಲ ಕಲ್ಪಿಸುವ ಕಾರ್ಯಕ್ರಮ ಇದಾಗಿದೆ ಜೊತೆಗೆ ಕೆರೆ ಸಂರಕ್ಷಣೆ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸುವ ಸದಾವಕಾಶ ನಮ್ಮದಾಗಿದೆ .ನಮ್ಮ ಯೋಜನೆಯೊಂದಿಗೆ ಸಹಾಯಹಸ್ತ ನೀಡಿ ಸಹಕರಿದ ಗ್ರಾಮದ ಪ್ರತಿಯೊಬ್ಬರಿಗೂ ನಮ್ಮ ಯೋಜನೆ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗವಿ ಸಿದ್ದಯ್ಯ ಮಾತನಾಡಿ” ನಮ್ಮೂರು ನಮ್ಮ ಕೆರೆ ” ವಿಶೇಷ ಕಾರ್ಯಕ್ರಮದ ಅಡಿಯಲ್ಲಿ ನಮ್ಮ ಅಂತರಹಳ್ಳಿ ಗ್ರಾಮವನ್ನು ಆಯ್ಕೆ ಮಾಡಿರುವುದು ನಮ್ಮೆಲ್ಲರ ಪುಣ್ಯವೇ ಸರಿ ,ಈ ಅಭಿಯಾನದಿಂದಾಗಿ ಸ್ಥಳೀಯ ರೈತರಿಗೆ ಹಾಗೂ ಗ್ರಾಮಸ್ಥರಿಗೆ ನೀರಿನ ಸಮಸ್ಯೆ ಬಗೆಹರಿಯಲಿದೆ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ಗಣ್ಯರಾದ ನಾಗರಾಜು, ರಾಮಕೃಷ್ಣಪ್ಪ,ಸದಾಶಿವಪ್ಪ,ಬೈಯಣ್ಣ,ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ,ವಲಯ ಮೇಲ್ವಿಚಾರಕರಾದ ಗಿರೀಶ್ ಸೇರಿದಂತೆ ವಲಯದ ಸೇವಾಪ್ರತಿನಿಧಿಗಳು , ಗ್ರಾಮಸ್ಥರು ಉಪಸ್ಥಿತರಿದ್ದರು .
