ದೊಡ್ಡಬಳ್ಳಾಪುರ : ನಗರದ ಕಛೇರಿ ಪಾಳ್ಯ ವಾರ್ಡ್ ನ ಹಿರಿಯ ಕಾಂಗ್ರೆಸ್ ಮುಖಂಡರಾದ ಎಸ್ ವಿ ಹನುಮಪ್ಪ ರವರ ಧರ್ಮಪತ್ನಿ ನಾಗರತ್ನಮ್ಮ(65ವರ್ಷ) ರವರು ಇಂದು(ಡಿ.16) ಸಂಜೆ ನಿಧನರಾಗಿದ್ದಾರೆ.
ನಾಗರತ್ನಮ್ಮನವರು ತಮ್ಮ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಮೃತರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಹೆಚ್. ರಾಘವೇಂದ್ರ, ಜಿಲ್ಲಾಧ್ಯಕ್ಷರಾದ ಎಚ್ ಶಿವಕುಮಾರ್ , ಎಚ್ ಮಂಜುನಾಥ್,ಹೆಚ್ ರಾಜು ಸೇರಿದಂತೆ ಒಟ್ಟು 11 ಮಕ್ಕಳು ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
ನಾಳೆ (ಡಿ.17) ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆ.ಆರ್.ಪುರಂನ ಸಾಗರ ಮಂಗಲದ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆಯ ರಾಜ್ಯ ಸಮಿತಿ,ಜಿಲ್ಲಾ ಸಮಿತಿ ಹಾಗೂ ತಾಲೂಕು ಸಮಿತಿ ಸೇರಿದಂತೆ ಹಲವು ದಲಿತ ಪ್ರಮುಖರು, ಹೋರಾಟಗಾರರು, ನಿರಂತರ ಅನ್ನದಾಸೋಹ ಸಮಿತಿ ಪ್ರಮುಖರು ಮೃತರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
