ಬಿಜೆಪಿಯ 10 ವರ್ಷದ ಸಾಧನೆಯನ್ನು ಗೋಡೆ ಬರಹ ಹಾಗೂ ಕರಪತ್ರ ಮನೆ ಮನೆಗೆ ತಲುಪಿಸುವ ಮೂಲಕ ಗ್ರಾಮ ಚಲೋ ಅಭಿಯಾನ

Spread the love

ದೊಡ್ಡಬಳ್ಳಾಪುರ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಯನ್ನು ಗೋಡೆ ಬರಹ ಹಾಗೂ ಕರಪತ್ರ ಹಂಚುವ ಮೂಲಕ ಗ್ರಾಮಚಲೋ ಅಭಿಯಾನ ಪ್ರಾರಂಭಿಸಿದ್ದೇವೆ .ಸ್ಥಳೀಯವಾಗಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆಯುತ್ತಿರುವುದು ಸಂತಸ ತಂದಿದೆ ಎಂದು ಸ್ಥಳೀಯ ಮುಖಂಡರಾದ ರಮೇಶ್ ತಿಳಿಸಿದರು

 

ರಾಜೀವ್ ಗಾಂಧಿ ಆಶ್ರಯ ಬಡಾವಣೆ 72 ನೇ ಬೂತ್ ನಲ್ಲಿ ಕೇಂದ್ರ ಸರ್ಕಾರದಿಂದ ದೇಶದ ಜನತೆಗೆ ನೀಡಿರುವ ವಿವಿಧ ಯೋಜನೆ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಜೀ ಯವರು ತೆಗೆದುಕೊಂಡಿರುವ ಪ್ರಮುಖ ನಿರ್ಧಾರಗಳು ಮತ್ತು ಕೇಂದ್ರ ಸರ್ಕಾರದ 10 ವರ್ಷದ ಸಾಧನೆಯ ಕುರಿತಂತೆ ಜನ ಜಾಗೃತಿ ಮೂಡಿಸುವ ಸಲುವಾಗಿ ಗೋಡೆ ಬರಹ ಹಾಗೂ ಕರಪತ್ರಗಳನ್ನು ಪ್ರತಿ ಮನೆಗೂ ನೀಡುವ ಮೂಲಕ ಗ್ರಾಮ ಚಲೋ ಅಭಿಯಾನವನ್ನು ಸ್ಥಳೀಯ ಬಿಜೆಪಿ ಮುಖಂಡರಾದ ರಮೇಶ್ ರವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮತ್ತೊಮ್ಮೆ ಮೋದಿ ಎಂಬ ಧ್ಯೇಯ ವಾಕ್ಯದೊಂದಿಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಜನರ ಮನೆ ಬಾಗಿಲಿಗೆ ಬಂದಿದ್ದೇವೆ .ಸಾರ್ವಜನಿಕರ ಉತ್ತಮ ಸ್ಪಂದನೆ ನಮ್ಮ ಕಾರ್ಯಕರ್ತರಿಗೆ ಮತ್ತಷ್ಟು ಹುಮ್ಮಸ್ಸು ನೀಡಿದೆ . ಸ್ಥಳೀಯ ಬೂತ್ ಮಟ್ಟದಲ್ಲಿ ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರೆತ್ತಿದ್ದು ,ಜನರಲ್ಲಿ ದೇಶದ ಪ್ರಧಾನಿ ಮೋದಿಜೀ ಕುರಿತು ಅಪಾರ ಗೌರವವಿದೆ .ಜನರ ಈ ಬೆಂಬಲ ಪ್ರೋತ್ಸಹ ನೋಡಿದಾಗ ಈ ಭಾರಿ ಮತ್ತೊಮ್ಮೆ ನಮ್ಮ ನೆಚ್ಚಿನ ನಾಯಕ ಮೋದಿಜೀ ಭಾರತದ ಪ್ರಧಾನ ಮಂತ್ರಿ ಯಾವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

ಮಹಿಳಾ ಮುಖಂಡರಾದ ಪುಷ್ಪ ಶಿವಶಂಕರ್ ಮಾತನಾಡಿ ಮೋದಿಜೀ ಪ್ರಧಾನ ಮಂತ್ರಿಯಾಗಬೇಕಿರುವುದು ಕೇವಲ ಬಿಜೆಪಿ ಪಕ್ಷಕ್ಕಲ್ಲ ಅವರು ದೇಶದ ಪ್ರಜೆಗಳಿಗಾಗಿ ಪ್ರಧಾನಮಂತ್ರಿಯಾಗಬೇಕಿದೆ . ಅಭಿವೃದ್ಧಿ ಭಾರತ ನಮ್ಮೆಲ್ಲರ ಕನಸು ಅದನ್ನು ನನಸು ಮಾಡುವ ಶಕ್ತಿ, ಯುಕ್ತಿ, ಸಾಮರ್ಥ್ಯ ಇರುವುದು ಕೇವಲ ನಮ್ಮ ನಾಯಕರಾದ ನರೇಂದ್ರ ಮೋದಿಜೀಯವರಿಗೆ ಮಾತ್ರ. ಭಾರತವನ್ನು ವಿಶ್ವಕ್ಕೆ ಮಾದರಿ ರಾಷ್ಟ್ರವನ್ನಾಗಿ ನಿರ್ಮಾಣಮಾಡುವ ಕನಸು ಹೊತ್ತಿರುವ ನಾಯಕ ಮೋದಿಜೀಯವರ ಬೆಂಬಲಕ್ಕೆ ಭಾರತೀಯ ಜನತಾ ಪಕ್ಷದ ಎಲ್ಲಾ ಕಾರ್ಯಕರ್ತರು ನಿಂತಿದ್ದೇವೆ . ದೇಶದ ಅಭಿವೃದ್ಧಿ ಬಯಸುವ ಪ್ರತಿಯೊಬ್ಬ ಪ್ರಜೆಯು ಮತ್ತೊಮ್ಮೆ ಮೋದಿ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು

 

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ವಿ.ರಮೇಶ್ , ಪಕ್ಷದ ಮುಖಂಡರಾದ ಶ್ರೀಮತಿ ಪುಷ್ಪಾ ಶಿವಶಂಕರ್ , 1ನೇ ವಾರ್ಡ್ ನಗರಸಭಾ ಸದಸ್ಯರಾದ ಶ್ರೀಮತಿ ಹಂಸಪ್ರಿಯಾ ದೇವರಾಜ್ ಹಾಗೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *