
ದೊಡ್ಡಬಳ್ಳಾಪುರ : ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಪ್ರಗತಿ ಪರ ಒಕ್ಕೂಟಗಳ ಸಮಿತಿಗಳೊಂದಿಗೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿ ಮುಂಭಾಗ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಜನಧ್ವನಿ ವೇದಿಕೆಯ ತಾಲ್ಲೂಕು ಅಧ್ಯಕ್ಷ ಗೀರಿಶ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು ಇತ್ತೀಚಿಗೆ ಪಟ್ಟಣ ಪಂಚಾಯತಿಯ ಅಧಿಕಾರಿಗಳ ಆಡಳಿತವು ಬಹುತೇಕ ಸಾರ್ವಜನಿಕರ ಅಭಿಪ್ರಾಯಕ್ಕೆ ಮನ್ನಣೆ ನೀಡದೇ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಪ್ರಶ್ನೆಸಿದ ಸಾಮಾನ್ಯ ಸಾರ್ವಜನಿಕರನ್ನು ಅವಾಚ್ಯಶಬ್ದಗಳಿಂದ ನಿಂದಿಸಿರುವ ಆರೋಪಗಳು ಕೇಳಿಬರುತ್ತಿವೆ,ಅಲ್ಲದೇ ಕ್ರಿಮಿನಲ್ ಹಿನ್ನಲೆ ಇರುವ ವ್ಯಕ್ತಿಗಳು ತಮ್ಮ ಸಿಬ್ಬಂದಿ ವರ್ಗದಲ್ಲಿದ್ದಾರೆ ಎಂಬ ಆರೋಪವೂ ಇದ್ದು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಅಗ್ರಹಿಸಿ ಧರಣಿ ನೆಡೆಸಲು ಮುಂದಾಗಿದ್ದೇವೆ
ನಮ್ಮ ಬೇಡಿಕೆಗಳನ್ನು 7 ದಿನಗಳೊಳಗೆ ಈಡೇರಿಸಲು ಕೋರಿದೆ. ನಿಗದಿತ ದಿನಗಳೊಳಗೆ ಈಡೇರದೇ ಹೋದರೇ ಮೇಲಾಧಿಕಾರಿಗಳು ಭೇಟಿ ನೀಡಿ ಶಿಸ್ತು ಕ್ರಮ ಕೈಗೊಳ್ಳುವ ತನಕ ಧರಣಿ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಮುಖ ಹಕ್ಕೊತ್ತಾಯಗಳು:-
1′ ಗ್ರಾಮ ಪಂಚಾಯತಿ ಅವಧಿಯಲ್ಲಿ ಭೂಮಿ – ವಸತಿ ಹಂಚಿಕೆಗಾಗಿ 1700 ಅರ್ಜಿಗಳನ್ನು ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ 7 ದಿನಗಳಲ್ಲಿ ಪೂರೈಸಬೇಕು ಸರ್ಕಾರಿ ಜಾಗ ಗುರುತಿಸಿ.ವಸತಿ ಹಂಚುವುದು.
2, ಗ್ರಾಮ ಪಂಚಾಯತಿಯಲ್ಲಾಗಲೀ ಮತ್ತು ಪಟ್ಟಣ ಪಂಚಾಯತಿಯಲ್ಲಾಗಲಿ ಯಾವುದೇ ಕ್ರಿಮಿನಲ್ ಹಿನ್ನಲೆ ಕಾರ್ಯ ನಿರ್ವಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದ್ದಲ್ಲಿ ಅಂತಹ ವ್ಯಕ್ತಿಗಳನ್ನು ಕೂಡಲೇ ವಜಾಗೊಳಿಸಬೇಕು.
3, ಸರಿಯಾದ ಸಮಯಕ್ಕೆ ಕಛೇರಿಗೆ ಹಾಜರಾಗದ ಕೆಲವು ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದು.
4, ಸರ್ಕಾರದ ಆದೇಶದಂತೆ ಅನಧಿಕೃತ ಬಡಾವಣೆ ಬಿ ಖಾತಾ ಆಂದೋಲನವೂ ಮನೆಯ ಬಳಿ ಬಂದು ಮಾಡಿಕೊಡುವಂತೆ ನೋಡಿಕೊಳ್ಳುವುದು.
5, ಕಾರ್ಖಾನೆಗಳು ಕೆಮಿಕಲ್ ಮಿಶ್ರಿತ ಕಲುಷಿತ ನೀರನ್ನು ಯಾರಿಗೂ ತಿಳಿಯದಂತೆ ಡ್ರೈನೇಜ್ ಮೂಲಕ ವೀರಾಪುರ . ದೊಡ್ಡ ತುಮಕೂರು ಕೆರೆಗೆ ಹರಿದು ಬಿಡುತ್ತಿವುದರ ವಿರುದ್ದ ಕ್ರಮ ಕೈಗೊಳ್ಳುವುದು ಅಂತಹ ಕಾರ್ಖಾನೆಗಳ ಪರವಾನಗಿ ರದ್ದು ಪಡಿಸುವುದು.
6, ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನ ಮತ್ತು ಅಂತ್ಯ ಸಂಸ್ಕಾರದ ಮೊತ್ತ ಹೆಚ್ಚಿಸುವುದು.
7 , ಅರಹಳ್ಳಿ- ಗುಡದ್ದಹಳ್ಳಿಯಲ್ಲಿ ಸುಮಾರು ವರ್ಷಗಳಿಂದ ವಾಸವಿರುವ ನಿರಾಶ್ರಿತರ ದಲಿತ ಕುಟುಂಬದವರಿಗೆ ಮೂಲ ಭೂತ ಸೌಕರ್ಯ ನೀಡುವುದು.
8. ಕೂಡಲೇ ಚುನಾವಣಾ ಪ್ರಕ್ರಿಯೆ ನಿಲ್ಲಿಸಿ ಅವೈಜ್ಞಾನಿಕ ವಾರ್ಡುಗಳ ವಿಂಗಡಣೆ ಮತ್ತು ಅವೈಜ್ಞಾನಿಕ ಮೀಸಲಾತಿಯನ್ನು ರದ್ದುಪಡಿಸಿ ನ್ಯಾಯಾಲಯದ ಆದೇಶ ಬರುವತನಕ ಚುನಾವಣೆ ಮುಂದೂಡುವುದು.
9, ಬಡತನಕ್ಕೆ ಸೇರಿದ ಕುಟುಂಬಗಳ ತೆರಿಗೆಯನ್ನು ಮನ್ನ ಮಾಡಿ ಕೆ ಎಮ್ ಎಪ್ ಖಾತೆ ಮಾಡಿ ಕೊಡುವುದು.
10, ಈಗಾಗಲೇ ಪಟ್ಟಣ ಪಂಚಾಯಿತಿಯವರು ಶುದ್ದನೀರಿನ ಘಟಕಗಳನ್ನು ಖಾಸಗಿ ಒಡತನಕ್ಕೆ ನೀಡಿರುವುದನ್ನು ಈ ಕೂಡಲೇ ತಮ್ಮ ಅಧೀನಕ್ಕೆ ತೆಗೆದುಕೊಳ್ಳುವುದು.
11. ಸಾರ್ವಜನಿಕರಿಂದ ದೂರು ಬಂದರೇ ಅದನ್ನು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳದೇ ಕಾಲಹರಣ ಮಾಡದೇ ಶೀಘ್ರ ಅರ್ಜಿಗಳ ವಿಲೇವಾರಿ ಮಾಡುವುದು
ಈ ವೇಳೆ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿಯ ಜನಧ್ವನಿ ವೇದಿಕೆಯ ಮುಖಂಡರಾದ ಕೃಷ್ಣಮೂರ್ತಿ, ಸದಾನಂದ, ಸುದರ್ಶನ , ಮಹಾದೇವ್, ಅಕ್ಷಯ್ , ಮಂಜುನಾಥ, ಬಿಸವನಹಳ್ಳಿ ನಾರಾಯಣಸ್ವಾಮಿ, ಕಸುವನಹಳ್ಳಿ ರವಿಕುಮಾರ್ ಮತ್ತು ರವಿಚಂದ್ರ, ಹನುಮಂತರಾಜು, ವರದನಹಳ್ಳಿ ಉದಯ್ ವೆಂಕಟೇಶ್,ಎಳ್ಳುಪುರ ಮಹೇಶ್ಅರಹಳ್ಳಿ ಗುಡದಹಳ್ಳಿ ವೆಂಕಟೇಶ್ ಮತ್ತು ವೆಂಕಟೇಶ್ ರೆಡ್ಡಿ, ನಾಗದೇನಹಳ್ಳಿ ಚಂದ್ರಪ್ಪ ಮತ್ತು ಮಹೇಶ್.ಓಬದೇನಹಳ್ಳಿ ರಾಜೇಂದ್ರ ಮತ್ತು ಅರ್ನಾಲ್ಡ್ ಮುನಿರಾಜ್.ರಘುನಾಥಪುರ ವಿನೋದ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.