ದೊಡ್ಡಬಳ್ಳಾಪುರ : ಶ್ರೀ ರಾಮನ ಮಂತ್ರಾಕ್ಷತೆ ಮನೆ ಮನೆಗೆ ತಲುಪಿಸುವ ಕಾರ್ಯದಲ್ಲಿ ನಾವು ಭಾಗಿಯಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯವೇ ಸರಿ . ಅಯೋಧ್ಯೆಯ ಪ್ರತಿಷ್ಠಾಪನ ಕಾರ್ಯದಲ್ಲಿ ನಮ್ಮ ಅಳಿಲು ಸೇವೆಯನ್ನು ಸಲ್ಲಿಸುತ್ತಿದ್ದೇವೆ ದೊಡ್ಡಬಳ್ಳಾಪುರದಿಂದ ತೂಬಗೆರೆ ಹೋಬಳಿಗೆ ಮಂತ್ರಾಕ್ಷತೆಯನ್ನು ವಿಜೃಂಭಣೆ ಯಿಂದ ತಂದಿದ್ದು ತೂಬಗೆರೆ ಪಂಚಾಯಿತಿಯ ಎಲ್ಲಾ ಗ್ರಾಮಗಳಿಗೂ ಶ್ರೀ ರಾಮರ ಮಂತ್ರಾಕ್ಷತೆಯನ್ನು ತಲುಪಿಸುವ ಕಾರ್ಯ ನಡೆಯುತ್ತಿದೆ ಎಂದು ಸ್ಥಳೀಯ ಮುಖಂಡರು ಹಾಗೂ ಗ್ರಾಮ ಪಂಚಾಯತಿ ಸದಸ್ಯ ಗಂಗಾಧರ್ ತಿಳಿಸಿದರು

ತೂಬಗೆರೆ ಹೋಬಳಿಯ ಗ್ರಾಮಗಳಾದ ಟಿ ಹೊಸಹಳ್ಳಿ ಹಾಗೂ ಸುನಘಟ್ಟಹಳ್ಳಿ ಗ್ರಾಮದಲ್ಲಿ ಮಕರ ಸಂಕ್ರಾಂತಿ ಹಬ್ಬದ ವಿಶೇಷ ದಿನದಂದು ಗ್ರಾಮ ಪಂಚಾಯಿತಿ ಸದಸ್ಯರಾದ ಗಂಗಾಧರ್ ರವರ ನೇತೃತ್ವದಲ್ಲಿ ಮಂಗಳವಾದ್ಯ ಸಹಿತ ಅಯೋಧ್ಯ ಶ್ರೀ ರಾಮರ ಮಂತ್ರಾಕ್ಷತೆಯನ್ನು ಮನೆಮನೆಗೆ ತಲುಪಿಸಲಾಯಿತು . ಅಯೋಧ್ಯೆ ಶ್ರೀ ರಾಮನ ಮಂತ್ರಾಕ್ಷತೆಯನ್ನು ಗ್ರಾಮದ ಮಹಿಳೆಯರು ವಿಶೇಷವಾಗಿ ಕಳಸ ಹೊತ್ತು ಆರತಿ ಮಾಡುವ ಮೂಲಕ ಸ್ವಾಗತಿಸಿದರು
ಸಂದರ್ಭದಲ್ಲಿ ಮಾತನಾಡಿದ ಅವರು ಅಯೋಧ್ಯೆ ಶ್ರೀ ರಾಮರ ಮಂತ್ರಾಕ್ಷತೆಯನ್ನು ತೂಬಗೆರೆ ಹೋಬಳಿಯ ಲಕ್ಷ್ಮಿ ವೆಂಕಟೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ತೂಬಗೆರೆ ಹೋಬಳಿಯ ಪ್ರತಿಗ್ರಾಮಕ್ಕೂ ತಲುಪಿಸಲಾಗಿದೆ ಮಂತ್ರಾಕ್ಷತೆಯ ಮಹತ್ವ ಹಾಗೂ ಅಯೋಧ್ಯೆ ಶ್ರೀರಾಮ ದೇವಾಲಯದ ಕುರಿತು ಸ್ವಯಂಸೇವಕರಾಗಿ ಗ್ರಾಮಸ್ಥರು ಮುಂದೆ ಬಂದು ಸೇವೆ ಸಲ್ಲಿಸುತ್ತಿದ್ದಾರೆ ಹೊಸಹಳ್ಳಿ, ಸುನಘಟ್ಟಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಮಂತ್ರಾಕ್ಷತೆ ತಲುಪಿಸುವ ಜವಾಬ್ದಾರಿಯನ್ನು ನನಗೆ ವಹಿಸಿದ್ದು ಸ್ಥಳೀಯ ಗ್ರಾಮಸ್ಥರ ಹಾಗೂ ಮುಖಂಡರ ಸಹಕಾರದೊಂದಿಗೆ ಮಂತ್ರಾಕ್ಷತೆಯನ್ನು ಗ್ರಾಮದ ಪ್ರತಿ ಮನೆಮನೆಗೂ ತಲುಪಿಸಲಾಗಿದೆ ಮಂತ್ರಾಕ್ಷತೆ ತಲುಪಿಸುವ ಕಾರ್ಯಕ್ಕೆ ಸಾರ್ವಜನಿಕರ ಅಭೂತಪೂರ್ವ ಬೆಂಬಲ ದೊರೆತಿದೆ ಸ್ಥಳೀಯರಿಂದ ನಿರೀಕ್ಷೆಗೂ ಮೀರಿದ ಸಹಕಾರ ದೊರೆಯುತ್ತಿದ್ದು ಸ್ವಯಂಸೇವಕರಿಗೆ ಮತ್ತಷ್ಟು ಹುಮ್ಮಸ್ಸು ಸಂತೋಷ ತಂದಿದೆ ಎಂದು ತಿಳಿಸಿದರು

ಟಿ ಹೊಸಹಳ್ಳಿ ಗ್ರಾಮದ ಗ್ರಾಮಸ್ಥರಾದ ಶ್ರೀನಿಧಿ ಮಾತನಾಡಿ ರಾಮನ ಆಶೀರ್ವಾದದಿಂದ ಬಂದಿರುವ ಮಂತ್ರಾಕ್ಷತೆಯನ್ನು ಕುಂಭ ಸಹಿತ ಸ್ವಾಗತಿಸಿದ್ದೇವೆ ಶ್ರೀ ರಾಮರು ಸನಾತನ ಹಿಂದುತ್ವವನ್ನು ಬಿಂಬಿಸುವ ದೇವರಾಗಿದ್ದು ರಾಮ ಜನ್ಮಭೂಮಿಯು ಹಿಂದೂಗಳ ಪರ ಆಗಿರುವುದು ನಮಗೆಲ್ಲರಿಗೂ ಸಂತೋಷದ ವಿಷಯವಾಗಿದೆ ಈ ವಿಷಯ ನಮ್ಮ ಕಾಲಘಟ್ಟದಲ್ಲಾಗಿರುವುದು ಮತ್ತಷ್ಟು ಸಂತೋಷ ತಂದಿದೆ . ಜಗತ್ ಪ್ರಸಿದ್ಧ ಅಯೋದ್ಯ ರಾಮ ಮಂದಿರ ನಿರ್ಮಾಣದಲ್ಲಿ ನಾವು ಸಾಕ್ಷಿಯಾಗಿದ್ದೇವೆ ಎಂಬುದು ಸಂತಸದ ವಿಷಯ . ಮಂತ್ರಾಕ್ಷತೆಯನ್ನು ಸ್ವಾಗತ ಮಾಡುವ ಕಾರ್ಯ ನಮ್ಮೆಲ್ಲರಿಗೂ ತೃಪ್ತಿಯ ಭಾವನೆ ಉಂಟುಮಾಡಿದೆ ಇದು ನಮ್ಮ ಭಕ್ತಿ ಪೂರ್ವಕ ಸೇವೆಯಾಗಿದೆ ಜನವರಿ 22ರಂದು ದೀಪಗಳನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬದ ರೀತಿಯಲ್ಲಿ ಸಂಭ್ರಮಿಸಲಾಗುವುದು ಎಂದು ತಿಳಿಸಿದರು
ಸ್ಥಳೀಯ ಗ್ರಾಮಸ್ಥರಾದ ನಾಗರತ್ನ ಮಾತನಾಡಿ ಶ್ರೀರಾಮದೇವರ ಮಂತ್ರಾಕ್ಷತೆ ನಮ್ಮ ಮನೆ ಬಾಗಿಲಿಗೆ ಬಂದಿರುವುದು ನಮ್ಮೆಲ್ಲರ ಭಾಗ್ಯವೆಂದು ಭಾವಿಸುತ್ತೇವೆ . ನೂರಾರು ವರ್ಷಗಳ ಕನಸು ಜನವರಿ 22 ರಂದು ನನಸಾಗುತ್ತಿದೆ ಮಂತ್ರಾಕ್ಷತೆ ಪಡೆದಿರುವುದು ಅಯೋಧ್ಯೆಗೆ ಭೇಟಿಕೊಟ್ಟು ಶ್ರೀರಾಮ ದೇವರ ದರ್ಶನ ಪಡೆದಷ್ಟು ಸಂತೋಷ ತಂದಿದೆ ಶ್ರೀ ರಾಮನ ವಿಚಾರಧಾರೆಯನ್ನು ಮಕ್ಕಳಿಗೆ ತಿಳಿಸಲು ಹೆಮ್ಮೆ ಎನಿಸುತ್ತಿದೆ . ಗ್ರಾಮಸ್ಥರಿಂದ ಉತ್ತಮ ಸ್ಪಂದನೆ ದೊರೆಯುತ್ತಿದ್ದು . ಶ್ರೀರಾಮರ ಮಂತ್ರಾಕ್ಷತೆಯನ್ನು ಪ್ರತಿ ಮನೆಗೂ ಸ್ವಯಂ ಸೇವಕರು ತಲುಪಿಸಿದ್ದಾರೆ ಎಂದು ತಿಳಿಸಿದರು

ಸುನಘಟ್ಟಹಳ್ಳಿ ಗ್ರಾಮದ ಮುಖಂಡರಾದ ಶಿವಕುಮಾರ್ ಮಾತನಾಡಿ ಮಂತ್ರಾಕ್ಷತೆ ಮಕರ ಸಂಕ್ರಾಂತಿಯ ದಿನದಂದು ನಮ್ಮ ಊರಿಗೆ ಬಂದಿದ್ದು ನಮಗೆ ಹಬ್ಬದ ವಾತಾವರಣ ದ್ವಿಗುಣವಾಗಿದೆ .ಗ್ರಾಮದ ಮಹಿಳೆಯರು ಕಳಸ ಹೊತ್ತು ಮಂತ್ರಾಕ್ಷತೆಯನ್ನು ಸ್ವಾಗತಿಸಿದ್ದಾರೆ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಅತ್ಯಂತ ಸಂತೋಷದಿಂದ ಪ್ರತಿ ಮನೆಮನೆಗೂ ಭೇಟಿ ಕೊಟ್ಟು ನೀಡುತ್ತಿದ್ದೇವೆ ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ನಮ್ಮ ಗ್ರಾಮಗಳಲ್ಲಿಯೂ ಆಚರಿಸಲಾಗುವುದು ಹಬ್ಬದ ರೀತಿ ಪ್ರತಿ ಮನೆ ಮನೆಯಲ್ಲಿಯೂ ಶ್ರೀರಾಮಸ್ಮರಣೆ ಮಾಡಲಾಗುವುದು ದೀಪಗಳನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು

ಸುನಘಟ್ಟಹಳ್ಳಿ ಗ್ರಾಮದ ಯುವತಿ ಮೈತ್ರಿ ಮಾತನಾಡಿ ಅಯೋಧ್ಯೆಯ ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸಲು ಸ್ವಯಂಸೇವಕರಾಗಿ ಬಂದಿದ್ದೇವೆ ಜನವರಿ 22ರಂದು ರಾಮನ ಪ್ರತಿಷ್ಠಾಪನ ಕಾರ್ಯವನ್ನು ಪ್ರತಿಯೊಬ್ಬರು ತಮ್ಮ ತಮ್ಮ ಮನೆಗಳಲ್ಲಿ ರಾಮಸ್ಮರಣೆ ಮಾಡುವ ಮೂಲಕ ಆಚರಿಸಬೇಕೆಂದು ಮನವಿ ಮಾಡಿದರು
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಕುರುವಿಗೆರೆ ಮುರುಳಿ, ಸುನಘಟ್ಟಹಳ್ಳಿ ಶಿವಕುಮಾರ್, ಹೊಸಹಳ್ಳಿ ಚೆನ್ನೇಗೌಡ, ಚಂದ್ರಶೇಖರ್, ಕುಮಾರ್, ಗ್ರಾಮದ ಮುಖಂಡರು ಹಾಗೂ ಗ್ರಾಮದ ಯುವ ಸ್ವಯಂಸೇವಕರು ಉಪಸ್ಥಿತರಿದ್ದರು
