ಮೂವರು ಅನ್ಯಕೋಮಿನ ಯುವಕರಿಂದ ಯಾತ್ರಿಕರಿಗೆ ಧಮ್ಕಿ ಹಾಕಿರುವ ಹಿನ್ನಲೆಯಲ್ಲಿ ಯಾತ್ರಿಕರು 2ಗಂಟೆಗಳ ಕಾಲ ರೈಲು ತಡೆದು ತಮಗೆ ರಕ್ಷಣೆ ನೀಡುವಂತೆ ಒತ್ತಾಯಿಸಿ ವಿಜಯನಗರದ ಹೊಸಪೇಟೆ ರೈಲ್ವೆ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ.
ಹೌದು ಅನ್ಯಕೋಮಿನ ಮೂವರು ಯುವಕರು ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ ಒಡ್ಡಿದ ಹಿನ್ನಲೆ ಮೈಸೂರು – ಅಯೋಧ್ಯಾಧಾಮ ರೈಲಿನ ಪ್ರಯಾಣಿಕರು ರೈಲು ತಡೆದು ಪ್ರತಿಭಟನೆ ಮಾಡಿದರು. ತಮಗೆ ರಕ್ಷಣೆ ಒದಗಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ಬೆದರಿಕೆ ಒಡ್ಡಿದ ಅನ್ಯಕೋಮಿನ ಯುವಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸ್ಥಳೀಯ ಅಧಿಕಾರಿಗಳನ್ನು ಒತ್ತಾಯಿಸಿದರು.
