ದೊಡ್ಡಬಳ್ಳಾಪುರ (ಮಾರ್ಚ್ 03) : ಹಸಿದವರಿಗೆ ಆಹಾರ, ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಪೆನ್ನು ಪುಸ್ತಕ, ವಯೋವೃದ್ಧರಿಗೆ ಹೋದಿಗೆ ಮತ್ತು ಬಟ್ಟೆಗಳನ್ನು ತಮ್ಮ ಶಕ್ತಿಯನುಸಾರ ನೀಡುವ ಮೂಲಕ ತಮ್ಮ ಕುಟುಂಬದ ಅಥವಾ ಆಪ್ತರ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸಿ ಎಂದು ಅನ್ನ ದಾಸೋಹಿ ಮಲ್ಲೇಶ್ ತಿಳಿಸಿದ್ದರು

ತಾಲ್ಲೂಕಿನ ದರ್ಗಾಜೋಗಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅನ್ನದಾಸೋಹ ಸಮಿತಿ ವತಿಯಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ನೆಡೆಸುತ್ತಿದ್ದು. ಇಂದು ನೆಡೆದ 1436 ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಾನಿಗಳ ನೆರವಿನಿಂದ ನಿರಂತರ ಅನ್ನದಾಸೋಹ ಕಾರ್ಯಕ್ರಮ ನೆಡೆಯುತ್ತಿದ್ದು. ತಮ್ಮ ವಿಶೇಷ ದಿನಗಳನ್ನು ಅನ್ನದಾಸೋಹ ಸಮಿತಿಯೊಂದಿಗೆ ಆಚರಿಸುವ ಮೂಲಕ ಕಡು ಬಡವರಿಗೆ,ವಯೋವೃದ್ಧರಿಗೆ ಊಟ ನೀಡುವ ಮೂಲಕ ಆಚರಿಸಿಬೇಕೆಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜೀತು ಮಾತನಾಡಿ ಇಂದು ಮನು ರವರ ಹುಟ್ಟು ಹಬ್ಬದ ಅಂಗವಾಗಿ ಅನ್ನದಾಸೋಹ ಸಮಿತಿಯ ಆಯೋಜನೆ ಅಡಿಯಲ್ಲಿ ನಿರ್ಗತಿಕರಿಗೆ, ಬಡವರಿಗೆ, ವೃದ್ಧರಿಗೆ ಆಹಾರ ವಿತರಣೆ ಮಾಡಿದ್ದೇವೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪೆನ್ನು ಮತ್ತು ಪುಸ್ತಕ ವಿತರಣೆ ಮಾಡಲಾಗಿದೆ. ನಮ್ಮಂತಯೇ ಎಲ್ಲರು ತಮ್ಮ ವಿಶೇಷ ದಿನಗಳನ್ನು ಹಸಿದವರಿಗೆ ಆಹಾರ ನೀಡುವ ಮೂಲಕ ಆಚರಿಸಬೇಕೆಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಮುನಿಯಪ್ಪ, ಪ್ರೇಮ್, ಕಾಂತರಾಜ್, ಪವನ್, ಸುದರ್ಶನ್, ವೆಂಕಿ ಸೇರಿದಂತೆ ಅನ್ನ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು
