ಡಿಸೆಂಬರ್ 07 ರಂದು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ

Spread the love

2025 ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ರಾಜ್ಯಾದ್ಯಂತ ಡಿಸೆಂಬರ್ 07 ರಂದು ಆಯಾ ಜಿಲ್ಲಾ ಕೇಂದ್ರಗಳಲ್ಲಿ ನಡೆಸಲಾಗುವುದು. ಜಿಲ್ಲೆಯಲ್ಲಿ 06 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. ಪರೀಕ್ಷೆಯನ್ನು ಪಾರದರ್ಶಕವಾಗಿ ಬೆಳಿಗ್ಗೆ 7 ರಿಂದ 9 ಗಂಟೆವರೆಗೆ ತಪಾಸಣೆ ಮತ್ತು ಮುಖ ಚಹರೆ ತಪಾಸಣೆಯನ್ನು ಮಾಡಲಾಗುವುದು.

ಈ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಹೊಂದಿದ್ದು, ಮೊದಲ ಪತ್ರಿಕೆಯು ಬೆಳಿಗ್ಗೆ 9:30 ರಿಂದ 12 ಗಂಟೆಯವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಡಶಾಲ ವಿಭಾಗ) ದೊಡ್ಡಬಳ್ಳಾಪುರ ಹಾಗೂ ಶ್ರೀ ದೇವರಾಜು ಅರಸು ಪದವಿ ಪೂರ್ವ ಕಾಲೇಜು (ಪ್ರೌಡಶಾಲ ವಿಭಾಗ) ಕೊಡಿಗೇಹಳ್ಳಿ ಯಲ್ಲಿ ನಡೆಸಲಾಗುತ್ತದೆ.

ಎರಡನೇ ಪತ್ರಿಕೆಯು ಮಧ್ಯಾಹ್ನ 2 ರಿಂದ ಸಂಜೆ 4:30 ವರೆಗೆ
ಕೊಂಗಡಿಯಪ್ಪ ಪ್ರೌಡಶಾಲೆ, ಸರ್ಕಾರಿ ಪ್ರೌಡಶಾಲೆ ಅರಳು ಮಲ್ಲಿಗೆ ಬಾಗಿಲು ದೊಡ್ಡಬಳ್ಳಾಪುರ, ಕಾರ್ಮೆಲ್ ಜ್ಯೋತಿ ಹೈಸ್ಕೂಲ್ ದೊಡ್ಡಬಳ್ಳಾಪುರ, ಎಂ.ಎ.ಬಿ.ಎಲ್ ಹೈಸ್ಕೂಲ್ ಇಲ್ಲಿ ನಡೆಸಲಾಗುವುದು. ಈ ಬಾರಿ ಪತ್ರಿಕೆ-1 ಕ್ಕೆ 544 ಹಾಗೂ ಪತ್ರಿಕೆ-2 ಕ್ಕೆ 1719 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಂಜಿನಪ್ಪ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *