ದೊಡ್ಡಬಳ್ಳಾಪುರ : ಗ್ರಾಮದಲ್ಲಿ ದುರ್ವಸನೆ ಸುಸುತ್ತಿರುವ ಹಂದಿ ಸಾಕಾಣಿಕಾ ಕೇಂದ್ರವನ್ನು ತೆರವುಗೊಳಿಸುವಂತೆ ಹೈ ಕೋರ್ಟ್ ಅದೇಶ ನೀಡಿದ್ದರು ಈವರೆಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳೀಯ ಪಂಚಾಯತಿ ಅಧಿಕಾರಿಗಳು ಯಾವುದೇ ರೀತಿಯ ಕ್ರಮ ಕೈಗೊಳ್ಳದೆ ಗ್ರಾಮದ ಜನರ ಜೀವದ ಜೊತೆ ಚಲ್ಲಾಟವಾಡುತ್ತಿದ್ದಾರೆ ಎಂದು ಗ್ರಾಮದ ನಿವಾಸಿ ಲಕ್ಷೀ ಸಾಗರ್ ಆರೋಪಿಸಿದ್ದಾರೆ.
Ad
ನಗರದ ತಾಲ್ಲೂಕು ಪಂಚಾಯತಿ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಿರಂತರವಾಗಿ ನಮ್ಮ ಗ್ರಾಮದಲ್ಲಿನ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಮನವಿ ಮಾಡುತ್ತಿದೆ. ಆದರೂ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಪ್ರತಿನಿತ್ಯ ಹಂದಿ ಸಾಕಾಣಿಕೆ ಕೇಂದ್ರ ಹೊರಸೂಸುವ ದುರ್ವಸನೆಯಲ್ಲಿ ಜೀವನ ಸಾಗಿಸುವಂತಗಿದೆ ಅಲ್ಲದೆ ದಿನೇ ದಿನೇ ಗ್ರಾಮಸ್ಥರು ಹಲವು ಬಗೆಯ ಅರೋಗ್ಯ ಸಮಸ್ಯೆಗಳಿಗೆ ತುತ್ತಗುತ್ತಿದ್ದು ನಮ್ಮ ಗೋಳು ಕೇಳುವವರೇ ಇಲ್ಲದಂಥಗಿದೆ.. ಈ ಕುರಿತು ನ್ಯಾಯಾಲಯದ ಮೊರೆ ಹೋಗಿದ್ದ ಹಂದಿ ಸಾಕಾಣಿಕೆ ಕೇಂದ್ರದ ಮಾಲೀಕರ ಅರ್ಜಿ ತಿರಸ್ಕರಿಸುವ ಮೂಲಕ ನ್ಯಾಯಾಲಯವು ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿಯ ಆಧಾರದ ಮೇರೆಗೆ ಹಂದಿ ಸಾಕಾಣಿಕೆ ಕೇಂದ್ರವನ್ನು ತೆರವುಗೊಳಿಸುವಂತೆ ಆದೇಶ ನೀಡಿದೆ . ಆದೇಶ ನೀಡಿ ಒಂದು ತಿಂಗಳ ಕಳೆದರೂ ಈವರೆಗೂ ಯಾವುದೇ ಕ್ರಮವಾಗಿಲ್ಲ, ಈ ಕೂಡಲೇ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಂದಿ ಸಾಕಾಣಿಕೆ ಕೇಂದ್ರವನ್ನು ತೆರವುಗೊಳಿಸಬೇಕು ಇಲ್ಲವಾದಲ್ಲಿ ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ನೀಡಲು ಗ್ರಾಮಸ್ಥರು ಮುಂದಾಗ ಬೇಕಾಗುತ್ತದೆ ಎಂದರು

ಗ್ರಾಮಸ್ಥ ಮುನಿಓಬಳಯ್ಯಾ ಮಾತನಾಡಿ ಗ್ರಾಮದಲ್ಲಿ ಮಿತಿಮೀರಿದ ವಾಸನೆ ಬರುತ್ತಿದೆ ಊಟ ಮಾಡಲು ಸಾಧ್ಯವಾಗುತ್ತಿಲ್ಲ ಅಲ್ಲದೆ ದಿನೇ ದಿನೇ ಗ್ರಾಮಸ್ಥರ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚಾಗುತ್ತಿದ್ದು ಹಂದಿ ಸಾಕಾಣಿಕೆ ಕೇಂದ್ರ ಸ್ಥಳಾಂತರ ಗೊಳಿಸುವ ಮೂಲಕ ಸ್ವಚ್ಛ ಗ್ರಾಮಕ್ಕೆ ಅಧಿಕಾರಿಗಳು ಮುನ್ನುಡಿಯಾಗಬೇಕು ಎಂದರು.
Ad
ಗ್ರಾಮದ ಯುವ ಮುಖಂಡ ಸಿದ್ದರಾಜು ಮಾತನಾಡಿ ಬೈರಸಂದ್ರ ಗ್ರಾಮದಲ್ಲಿ ದಲಿತರ ಜಮೀನು ಒತ್ತುವರಿ ಮಾಡಲಾಗಿದೆ ದಲಿತರ ಸ್ಮಶಾನದ ಜಾಗದಲ್ಲಿ ಕೋಳಿ ತ್ಯಾಜ್ಯ ಸೇರಿದಂತೆ ಇತರೆ ತ್ಯಾಜ್ಯ ವಸ್ತುಗಳನ್ನು ಹಾಕಿ ಪರಿಸರ ಹಾಳು ಮಾಡುತ್ತಿದ್ದಾರೆ ಇಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೇಲೆ ನಂಬಿಕೆ ಇಟ್ಟು ನ್ಯಾಯ ಪಡೆಯಲು ಬಂದಿದ್ದೇವೆ ಅಧಿಕಾರಿಗಳು ಗಮನ ಹರಿಸದ ಪಕ್ಷದಲ್ಲಿ ಮುಂದೆ ಉಗ್ರ ಹೋರಾಟ ರೂಪಿಸಲಾಗುವುದು.

ಘಟನೆಯ ತೀವ್ರತೆಯನ್ನು ಅರಿತ ಸ್ಥಳೀಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಂದ್ರ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರಗಳ ಒಳಗಾಗಿ ಗ್ರಾಮದ ಸಮಸ್ಯೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಈ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ .ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳದ ಪಕ್ಷದಲ್ಲಿ ಗ್ರಾಮಸ್ಥರೇ ಹಂದಿ ಸಾಕಾಣಿಕ ಕೇಂದ್ರದ ತೆರವಿಗೆ ಮುಂದಾಗಬೇಕಾಗುತ್ತದೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.
