ದೊಡ್ಡಬಳ್ಳಾಪುರ : ಮಕ್ಕಳಲ್ಲಿ ಶಿಸ್ತು , ಸಂಯಮ ಮತ್ತು ಸಾಮರ್ಥ್ಯ ಬೆಳವಣಿಗೆಗೆ ಭಾರತ ಸೇವಾದಳ ಸಹಕಾರಿ, ಮಕ್ಕಳಲ್ಲಿ ಸೇವೆಯ ಕುರಿತು ಅದ್ಭುತ ಚಿಂತನೆ ಮೂಡಿಸುವಲ್ಲಿ ಸೇವಾದಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತ ಸೇವಾದಳದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಜಿ .ಲಕ್ಷ್ಮೀಪತಿ ತಿಳಿಸಿದರು

ಸೇವಾದಳ ಶತಮಾನೋತ್ಸವದ ಅಂಗವಾಗಿ ರಾಷ್ಟ್ರೀಯ ಭಾವೈಕ್ಯತೆ ಮಕ್ಕಳ ಮೇಳ ಕಾರ್ಯಕ್ರಮವನ್ನು ತಾಲ್ಲೂಕಿನ ಕೊಂಗಡಿಯಪ್ಪ ಪದವಿಪೂರ್ವ ಕಾಲೇಜ್ ನಲ್ಲಿ ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕಾರ್ಯಕ್ರಮದಲ್ಲಿ ಧ್ವಜವಂದನೆ, ಗೌರವರಕ್ಷೆ, ಏರೋಬಿಕ್ಸ್ ,ಪ್ರಭಾತ್ ಬೇರಿ ನಡೆಸಲಾಗಿದೆ ಮಕ್ಕಳಲ್ಲಿ ಅದ್ಧುತ ಸಾಮರ್ಥ್ಯವಿದ್ದು ಮಕ್ಕಳ ಕ್ರಿಯಾತ್ಮಕ ಗುಣಗಳನ್ನು ಸಮಾಜಕ್ಕೆ ಉತ್ತಮ ಕೊಡುಗೆಯಾಗಿ ನೀಡುವ ಪ್ರಯತ್ನ ನಮ್ಮ ಸೇವಾದಳ ಮಾಡುತ್ತದೆ ಸಮಾಜದ ಒಳಿತಿಗಾಗಿ ಶ್ರಮಿಸುವ ಭಾರತ ಸೇವಾದಳದಲ್ಲಿ ನಾವೆಲ್ಲಾ ಸೇವೆ ಸಲ್ಲಿಸುತ್ತಿರುವುದು ಪುಣ್ಯವೇ ಸರಿ ದೇಶದ ರಕ್ಷಣೆಗೆ ನಮ್ಮ ಶ್ರಮ ಎಂದಿಗೂ ಇರುತ್ತದೆ ಸೇವಾದಳದಲ್ಲಿ ತರಬೇತಿ ಪಡೆದಿರುವ ಮಕ್ಕಳು ನಮ್ಮ ಅವಶ್ಯಕತೆ ಇದ್ದಾಗ ಸಮಾಜದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿ , ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಭಾರತ ಸೇವದಳ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ತಾಲ್ಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು ,ಸದಸ್ಯರು ಹಾಜರಿದ್ದರು
