ದೊಡ್ಡಬಳ್ಳಾಪುರ : ನಾಳೆ ನಮ್ಮ ಕಾರ್ಯಕರ್ತರು ತಾಲ್ಲೂಕಿನ ಡಿ ಮಾರ್ಟ್ ಸೇರಿದಂತೆ ಹಲವು ಮಾಲ್ ಗಳಿಗೆ ಭೇಟಿ ನೀಡಲಿದ್ದು, ಕನ್ನಡ ಬಳಕೆ ಮಾಡುವ ಬಗ್ಗೆ ಅರಿವು ಮೂಡಿಸಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ತಿಳಿಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಕನ್ನಡಿಗರ ಬಣ) ದ ಬಿ.ಎಸ್.ಚಂದ್ರಶೇಖರ್ ತಿಳಿಸಿದರು.
ಶುಕ್ರವಾರ ಕರವೇ ( ಕನ್ನಡಿಗರ ಬಣ )ಕಚೇರಿಯಲ್ಲಿ ಆಯೋಜನೆ ಮಾಡಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರ್ಕಾರಕ್ಕೆ ಹೋರಾಟ ಕುರಿತು ಮಾಹಿತಿ ನೀಡಿದ್ದರು ರ್ಯಾಲಿ ನೆಡೆಸಲು ಅನುಮತಿ ಕೊಡದೆ ಸತಾಯಿಸಿ ಕನ್ನಡಿಗರ ಆಕ್ರೋಶ ಕೆರಳುವಂತೆ ಮಾಡಿದೆ. ಕೆಲ ಮಾಲ್ ಗಳು ತಮ್ಮ ಸಿಬ್ಬಂದಿಯಿಂದಲ್ಲೇ ಇಂಗ್ಲಿಷ್ ನಾಮಫಲಕಗಳಿಗೆ ಹನಿ ಮಾಡಿಸಿ ಕನ್ನಡ ಹೋರಾಟಗಾರರ ಮೇಲೆ ಆರೋಪಿಸಲಾಗಿದೆ ಕನ್ನಡ ಪರ ಹೋರಾಟಗಾರರಾದ ನಾರಾಯಣ ಗೌಡ ರವರನ್ನು ಬಂಧಿಸಿರುವ ಸರ್ಕಾರ ಈ ಕೂಡಲೇ ಅವರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು
ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ)ಯ ವತಿಯಿಂದ ನಾಳೆ ಡಿಸೆಂಬರ್ 30 ರಂದು ಬೆಳ್ಳಿಗೆ 11 ಗಂಟೆಗೆ ದೊಡ್ಡಬಳ್ಳಾಪುರ ತಾಲ್ಲೂಕಿನ ತಾಲ್ಲೂಕು ಕಛೇರಿ ಯಿಂದ ಅಭಿಯಾನವನ್ನು ಆರಂಭಿಸಿ ತಾಲ್ಲೂಕಿನ ಹಲವು ಮಾಲ್ ಹಾಗೂ ವಾಣಿಜ್ಯ ಮಳಿಗೆಗಳಿಗೆ ಕರವೇ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಕನ್ನಡ ಬಳಸಲು ಹಾಗೂ ಕನ್ನಡ ಭಾಷೆಯಲ್ಲಿ ವ್ಯವಹರಿಸಲು ತಿಳಿಸಲಾಗುವುದು ಹಾಗೂ ಕೆಲ ವಾಣಿಜ್ಯ ಮಳಿಗೆಗಳಲ್ಲಿ ಇಂಗ್ಲೀಷ್ ಭಾಷೆಯ ಬಿಲ್ ಗಳನ್ನು ನೀಡುತ್ತಿದ್ದು ಇದನ್ನು ಕರವೇ ಕನ್ನಡಿಗರ ಬಣ ಖಂಡಿಸುತ್ತದೆ ಎಂದು ತಿಳಿಸಿದರು
ಸುದ್ದಿ ಗೋಷ್ಟಿಯಲ್ಲಿ ಕರವೇ ಕನ್ನಡಿಗರ ಬಣದ ತಾಲ್ಲೂಕು ಮಹಿಳಾ ಘಟಕ ಉಪಾಧ್ಯಕ್ಷರಾದ ಕಮಲಮ್ಮ , ತಾಲ್ಲೂಕು ಯುವ ಘಟಕ ಅಧ್ಯಕ್ಷ ರಂಜಿತ್ ಗೌಡ ,ತಾಲ್ಲೂಕು ಪ್ರಧಾನ ಕಾರ್ಯದರ್ಶಿ ರಮೇಶ್,ಯುವಘಟಕದ ಮುಖಂಡರಾದ ಶಿವಾನಂದ ,ವಿನಯ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು
