ದೊಡ್ಡಬಳ್ಳಾಪುರ : ದೇಶದಾದ್ಯಂತ ವಿಶೇಷವಾಗಿ ಜನವರಿ 26ರಂದು ಗಣರಾಜ್ಯೋತ್ಸವದ ದಿನವನ್ನಾಗಿ ಅತ್ಯಂತ ಸಂಭ್ರಮಾ ಸಡಗರದಿಂದ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.ಸಾರ್ವಜನಿಕ ಕಚೇರಿಗಳಲ್ಲಿ ಈ ದಿನವು ಒಂದು ವಿಶೇಷ ಹಬ್ಬವೇ ಸರಿ..

ಆದರೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಕಚೇರಿ ಪಾಳ್ಯದ ಸಮೀಪ ಜವಳಿ ಮಂತ್ರಾಲಯದ ವತಿಯಿಂದ ಸ್ಥಾಪಿಸಲಾಗಿರುವ ಕೆ ಎಸ್ ಟಿ ಐ ಡಿ ಸಿ ವಿದ್ಯುತ್ ಮಗ್ಗ ಸೇವಾ ಕೇಂದ್ರ ಕಚೇರಿ ಮುಂಭಾಗ ಭಾರತದ ಹೆಮ್ಮೆಯ ಧ್ವಜ ಕೊಂಗೊಳಿಸಬೇಕಿದ್ದ ಧ್ವಜಸ್ತಂಭ ಖಾಲಿ ಖಾಲಿ ಇದೆ.
ಗಣರಾಜ್ಯೋತ್ಸವದ ದಿನದ ಅಂಗವಾಗಿ ಕಚೇರಿಯಲ್ಲಿ ಯಾವುದೇ ಆಚರಣೆ ನಡೆದಿಲ್ಲ ಹಾಗೂ ರಾಷ್ಟ್ರೀಯ ಹಬ್ಬಗಳನ್ನು ತಿರಸ್ಕೃತ ಭಾವದಿಂದ ನೋಡಲಾಗುತ್ತದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ .

ರಾಷ್ಟ್ರೀಯ ಹಬ್ಬದ ದಿನವಾದ ಗಣರಾಜ್ಯೋತ್ಸವ ದಿನದಂದು ಕಚೇರಿಯಲ್ಲಿ ಯಾರು ಇಲ್ಲದಿರುವುದು ವಿಪರ್ಯಾಸವೇ ಸರಿ. ವಿದ್ಯುತ್ ಮಗ್ಗ ಸೇವಾ ಕೇಂದ್ರದಲ್ಲಿ ಸರಳ ರೀತಿಯ ಆಚರಣೆಯು ಆಗಿಲ್ಲ ಎಂಬುದು ಸ್ಥಳೀಯ ಸಾರ್ವಜನಿಕರ ಆಕ್ರೋಶ.
ಈ ಕುರಿತು ವಿದ್ಯುತ್ ಮಗ್ಗ ಸೇವಾ ಕೇಂದ್ರದ ಕಚೇರಿ ಸಿಬ್ಬಂದಿ ಉತ್ತರ ನೀಡಬೇಕಿದೆ ರಾಷ್ಟ್ರೀಯ ಹಬ್ಬಗಳ ಆಚರಣೆ ಮಾಡದೇ ಇರುವುದರ ಕುರಿತು ಕಾರಣ ತಿಳಿಸಬೇಕಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ
